Get Updates
Get notified of breaking news, exclusive insights, and must-see stories!

ಯು. ಆರ್‌. ಅನಂತಮೂರ್ತಿ ಸ್ಪರ್ಧೆಗೆ ಜಯಂತ ಕಾಯ್ಕಿಣಿ ಸ್ವಾಗತ

ಯು. ಆರ್‌. ಅನಂತಮೂರ್ತಿ ಸ್ಪರ್ಧೆಗೆ ಜಯಂತ ಕಾಯ್ಕಿಣಿ ಸ್ವಾಗತ
ಕಲಾವಿದರು ರಾಜಕೀಯ ಪ್ರವೇಶಿಸುವುದರಲ್ಲಿ ತಪ್ಪೇನೂ ಇಲ್ಲ

ಬೆಂಗಳೂರು : ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಒಲವು ವ್ಯಕ್ತಪಡಿಸಿರುವ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಯು.ಆರ್‌.ಅನಂತಮೂರ್ತಿ ಅವರ ನಿಲುವನ್ನು ಕಥೆಗಾರ ಜಯಂತ ಕಾಯ್ಕಿಣಿ ಸ್ವಾಗತಿಸಿದ್ದಾರೆ.

ಅನಂತಮೂರ್ತಿ ಅವರಂಥ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಇದರಿಂದಾಗಿ ಜನತೆ ತಮ್ಮ ಹಿತಾಸಕ್ತಿ-ಹಕ್ಕುಬಾಧ್ಯತೆಗಳ ಅರಿವಿನ ಬಗ್ಗೆ ಸ್ಪಷ್ಟ ತಿಳಿವಳಿಕೆ ಹೊಂದುವುದು ಸಾಧ್ಯವಾಗುತ್ತದೆ ಎಂದು ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು. ಪತ್ರಿಕೆಯಾಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕಾಯ್ಕಿಣಿ ಈ ವಿಷಯ ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಮತಗಟ್ಟೆಗೆ ಬರುವುದು ಕೂಡಾ ತುಂಬಾ ಮಹತ್ವವಾದುದು ಎಂದು ಅಭಿಪ್ರಾಯಪಟ್ಟಿರುವ ಕಾಯ್ಕಿಣಿ- ಸಿನಿಮಾ ಹಾಗೂ ಕಿರುತೆರೆ ಕಲಾವಿದರು ರಾಜಕೀಯ ಪ್ರವೇಶಿಸುವುದರಲ್ಲಿ ತಪ್ಪೇನೂ ಇಲ್ಲ ಎಂದಿದ್ದಾರೆ. ಕ್ರಿಮಿನಲ್‌ಗಳು ರಾಜಕೀಯಕ್ಕೆ ಬರಬಹುದಾದರೆ ಕಲಾವಿದರು ಯಾಕೆ ಬರಬಾರದು ಎಂದು ಜಯಂತ ಕಾಯ್ಕಿಣಿ ಹೇಳಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+