ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯು. ಆರ್‌. ಅನಂತಮೂರ್ತಿ ಸ್ಪರ್ಧೆಗೆ ಜಯಂತ ಕಾಯ್ಕಿಣಿ ಸ್ವಾಗತ

By Staff
|
Google Oneindia Kannada News

ಯು. ಆರ್‌. ಅನಂತಮೂರ್ತಿ ಸ್ಪರ್ಧೆಗೆ ಜಯಂತ ಕಾಯ್ಕಿಣಿ ಸ್ವಾಗತ
ಕಲಾವಿದರು ರಾಜಕೀಯ ಪ್ರವೇಶಿಸುವುದರಲ್ಲಿ ತಪ್ಪೇನೂ ಇಲ್ಲ

ಬೆಂಗಳೂರು : ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಒಲವು ವ್ಯಕ್ತಪಡಿಸಿರುವ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಯು.ಆರ್‌.ಅನಂತಮೂರ್ತಿ ಅವರ ನಿಲುವನ್ನು ಕಥೆಗಾರ ಜಯಂತ ಕಾಯ್ಕಿಣಿ ಸ್ವಾಗತಿಸಿದ್ದಾರೆ.

ಅನಂತಮೂರ್ತಿ ಅವರಂಥ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಇದರಿಂದಾಗಿ ಜನತೆ ತಮ್ಮ ಹಿತಾಸಕ್ತಿ-ಹಕ್ಕುಬಾಧ್ಯತೆಗಳ ಅರಿವಿನ ಬಗ್ಗೆ ಸ್ಪಷ್ಟ ತಿಳಿವಳಿಕೆ ಹೊಂದುವುದು ಸಾಧ್ಯವಾಗುತ್ತದೆ ಎಂದು ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು. ಪತ್ರಿಕೆಯಾಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕಾಯ್ಕಿಣಿ ಈ ವಿಷಯ ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಮತಗಟ್ಟೆಗೆ ಬರುವುದು ಕೂಡಾ ತುಂಬಾ ಮಹತ್ವವಾದುದು ಎಂದು ಅಭಿಪ್ರಾಯಪಟ್ಟಿರುವ ಕಾಯ್ಕಿಣಿ- ಸಿನಿಮಾ ಹಾಗೂ ಕಿರುತೆರೆ ಕಲಾವಿದರು ರಾಜಕೀಯ ಪ್ರವೇಶಿಸುವುದರಲ್ಲಿ ತಪ್ಪೇನೂ ಇಲ್ಲ ಎಂದಿದ್ದಾರೆ. ಕ್ರಿಮಿನಲ್‌ಗಳು ರಾಜಕೀಯಕ್ಕೆ ಬರಬಹುದಾದರೆ ಕಲಾವಿದರು ಯಾಕೆ ಬರಬಾರದು ಎಂದು ಜಯಂತ ಕಾಯ್ಕಿಣಿ ಹೇಳಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X