‘ಹೊಂಬಾಳೆ’ಗೆ ಒಂಬತ್ತು ತುಂಬಿತು !
‘ಹೊಂಬಾಳೆ’ಗೆ
ಒಂಬತ್ತು
ತುಂಬಿತು
!
ಎಚ್.ಫಲ್ಗುಣ
ಅವರ
ಕ್ರಿಯಾಶೀಲತೆಯ
ಫಲವಾದ
‘ಹೊಂಬಾಳೆ’
ಸಂಸ್ಥೆಗೀಗ
ಒಂಬತ್ತರ
ಹುಟ್ಟುಹಬ್ಬದ
ಸಂಭ್ರಮ.
ಈ
ಸಂಭ್ರಮವನ್ನು
ಅರ್ಥಪೂರ್ಣವಾಗಿ
ಆಚರಿಸಲು
ಹೊಂಬಾಳೆ
ಮುಂದಾಗಿದೆ;
ಶುಭ
ಹೇಳಿ.
ಕಾರ್ಯಕ್ರಮದಲ್ಲಿ ಸ್ವರಮಂದಾರ-2003, ಕಲಾ ಕೋವಿದ, ಅನನ್ಯ ಕಲಾಭಿಜ್ಞ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಲೇಖಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡುವರು.
ಸಂಜೆ 7 ಗಂಟೆಗೆ ಲಹರಿ ರೆಕಾರ್ಡಿಂಗ್ ಕಂ. ಪ್ರೈ. ಲಿ., ಅರ್ಪಿಸುವ ಹರಟೆ ಮಲ್ಲರ ಹಾಸ್ಯೋತ್ಸವ ಧ್ವನಿಸುರುಳಿ, ಸಿ.ಡಿ. ಬಿಡುಗಡೆಯಾಗಲಿದೆ. ಆನಂತರ ರಿಚರ್ಡ್ ಲೂಯಿಸ್, ಬಿ.ಆರ್. ಲಕ್ಷ್ಮಣರಾವ್, ಎಚ್. ಡುಂಡಿರಾಜ್ ಮತ್ತು ವೈ.ವಿ. ಗುಂಡುರಾವ್ ಅವರಿಂದ ಹಾಸ್ಯಸಂಜೆ ಕಾರ್ಯಕ್ರಮವನ್ನು ನಡೆಯಲಿದೆ.
ಸ್ವರ
ಮಂದಾರ-2003
ಪ್ರಶಸ್ತಿ
ಪುರಸ್ಕೃತರು
:
- ವರ್ಷದ ಧ್ವನಿಸುರುಳಿ ಸಂಸ್ಥೆ : ಲಹರಿ ರೆಕಾರ್ಡಿಂಗ್ ಕಂ. ಪ್ರೈ. ಲಿ.
- ವರ್ಷದ ಗೀತ ರಚನೆಕಾರ: ಬಿ. ಆರ್. ಲಕ್ಷ್ಮಣರಾವ್(ಪ್ರೇಮದ ಚಿಟಿಕೆ, ಸಂಸ್ಥೆ: ಆಕಾಶ್)
- ವರ್ಷದ ಸ್ವರ ಸಂಯೋಜಕ: ಎಸ್. ಬಾಲಸುಬ್ರಃಮಣ್ಯಂ (ಎಸ್. ಬಾಲಿ) (ಕ್ಯಾಸೆಟ್: ಉಯ್ಯಾಲೆ, ಸಂಸ್ಥೆ: ಲಹರಿ)
- ವರ್ಷದ ಗಾಯಕಿ: ಶಮಿತಾ ಮಲ್ನಾಡ್(ಮನೆಮನೆ ಸಿರಿಲಕ್ಷ್ಮಿ, ಸಂಸ್ಥೆ: ಜಂಕಾರ್)
- ವರ್ಷದ ಗಾಯಕ: ರಾಜು ಅನಂತಸ್ವಾಮಿ(ಹರಿ ನಿನ್ನ ಮುರಲಿ, ಸಂಸ್ಥೆ: ಲಹರಿ)
- ವಿಶೇಷ ಪ್ರಶಸ್ತಿ : ಶೇಷ ಗಿರಿದಾಸ್ ರಾಯಚೂರು(ಗಾಯನ, ಅಳುವದ್ಯಾತಕೊ ರಂಗ, ಸಂಸ್ಥೆ: ಸಾಗರ್)
- ಕಲಾಕೋವಿದ ಪ್ರಶಸ್ತಿ: ಆರ್. ಪರಮಶಿವನ್(ಹಾರ್ಮೋನಿಯಂ, ಕೀಬೋರ್ಡ್ ವಾದಕ)
- ಅನನ್ಯ ಕಲಾಭಿಜ್ಞ ಪ್ರಶಸ್ತಿ: ಪಾರ್ವತಿಸುತ(ಹಿರಿಯ ಗಾಯಕ-ಸಂಗೀತ ನಿರ್ದೇಶಕ)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ:
ಹೊಂಬಾಳೆ
ಪ್ರತಿಭಾರಂಗ
(ರಿ)
ನಂ.21,
ದಿವ್ಯ,
ಮದ್ದೂರಮ್ಮ
ಗುಡಿ
ರಸ್ತೆ
ಪೈಪ್ಲೈನ್,
ಶ್ರೀನಗರ,
ಬೆಂಗಳೂರು-560
050
ದೂರವಾಣಿ
:
080-26529303
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು