ಬದುಕು ವಂಚಿಸಿದ ಹೆಣ್ಣುಮಗಳು 6ತಿಂಗಳಿಂದ ಕೋಮಾದಲ್ಲಿದ್ದಾಳೆ
ಬದುಕು
ವಂಚಿಸಿದ
ಹೆಣ್ಣುಮಗಳು
6ತಿಂಗಳಿಂದ
ಕೋಮಾದಲ್ಲಿದ್ದಾಳೆ
ಆಕೆ
ಆಸ್ಪತ್ರೆಯ
ಹಾಸಿಗೆಯ
ಮೇಲೆ
ಮಲಗಿದ್ದಾಳೆ.
ತನ್ನ
ಸುತ್ತ
ಏನು
ನಡೆಯುತ್ತಿದೆ
ಎನ್ನುವುದು
ಆಕೆಗೆ
ಗೊತ್ತಿಲ್ಲ
.
ತನಗೇನಾಗಿದೆ
ಎನ್ನುವುದೂ
ಆಕೆಗೆ
ತಿಳಿದಿಲ್ಲ
.
ಆಕೆ
ಕೋಮಾದಲ್ಲಿದ್ದಾಳೆ.
- ದಟ್ಸ್ಕನ್ನಡ ಬ್ಯೂರೊ
ಈ ಹೆಣ್ಣುಮಗಳದೊಂದು ದೊಡ್ಡ ಕಥೆ. ದುರಂತ ಕಥೆ. ಗಾಯತ್ರಿಯ ಗಂಡನ ಹೆಸರು ಅರುಣ್ ಜೆ.ರಾವ್. ಅಮೆರಿಕಾದಲ್ಲಿ ಸಾಫ್ಟ್ವೇರ್ ಕನ್ಸಲ್ಟಂಟ್. ಈತನೊಂದಿಗೆ ಗಾಯತ್ರಿಯ ಮದುವೆ ನಿಶ್ಚಯವಾದಾಗ ತಮ್ಮ ಮಗಳ ಅದೃಷ್ಟದ ಕುರಿತು ಮನೆ ಮಂದಿಯೆಲ್ಲಾ ಹಿಗ್ಗಿದ್ದರು. ಅದೆಲ್ಲ ಹಳೆಯ ಕಥೆ. ಈಗಿರುವುದು ಬರೀ ಕಣ್ಣೀರು ಮಾತ್ರ.
27 ವರ್ಷದ ಡಾ.ಗಾಯತ್ರಿ ದಂತವೈದ್ಯೆ. ಅಪಾರ ಪ್ರತಿಭೆಯ ಗಾಯತ್ರಿ Periodontics ನಲ್ಲಿ ಮೂರನೇ ರ್ಯಾಂಕ್ನೊಂದಿಗೆ ಚಿನ್ನದ ಪದಕ ಪಡೆದಿದ್ದ ಜಾಣೆ. ಬೆಂಗಳೂರಿನಲ್ಲಿ ತನ್ನದೇ ಆದ ಒಂದು ಕ್ಲಿನಿಕ್ ನಡೆಸುತ್ತಿದ್ದಳು. ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜಿನ ವಿಜಿಟಿಂಗ್ ಫ್ಯಾಕಲ್ಟಿ ಪಟ್ಟಿಯಲ್ಲಿ ಗಾಯತ್ರಿಯ ಹೆಸರೂ ಇತ್ತು .
ಅಮೆರಿಕದ ಹುಡುಗನೊಂದಿಗೆ ಮದುವೆಯಾದಾಗ ಗಾಯತ್ರಿ ಕೂಡ ಖುಷಿಯಾಗಿದ್ದಳು. ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಬಹುದು ಎಂದು ಕನಸು ಕಂಡಿದ್ದಳು. ಆದರೆ ನಡೆದದ್ದೇ ಬೇರೆ. 2003ರ ಫೆಬ್ರವರಿಯಲ್ಲಿ ಮದುವೆಯಾಗಿ ಎಂಟು ತಿಂಗಳ ನಂತರ ಅಮೆರಿಕಾಗೆ ಹೋದ ಡಾ.ಗಾಯತ್ರಿ, ಭಾರತಕ್ಕೆ ಮರಳಿದ್ದು ಪ್ರಜ್ಞಾಹೀನಳಾಗಿ.
ನಡೆದದ್ದು ಇಷ್ಟು . ಡಾ.ಗಾಯತ್ರಿ ಮಿಯಾಮಿ ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ದಾಖಲಾಗಿದ್ದಳು. ಒಂದು ದಿನ ಕಾಲೇಜಿನಿಂದ ವಾಪಸ್ಸಾಗುತ್ತಿದ್ದ ಗಾಯತ್ರಿಗೆ ಅತ್ಯಂತ ವೇಗವಾಗಿ ಧಾವಿಸುತ್ತಿದ್ದ ಕಾರೊಂದು ಢಿಕ್ಕಿ ಹೊಡೆಯಿತು. ಗಾಯತ್ರಿ ನಿಂತಲ್ಲೇ ಕುಸಿದಳು. ಆಕೆಯನ್ನು ಮಿಯಾಮಿಯ ವಿಶ್ವವಿದ್ಯಾಲಯದ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಹೊಟ್ಟೆ ಹಾಗೂ ಮೆದುಳಿನ ಅನೇಕ ಶಸ್ತ್ರಚಿಕಿತ್ಸೆಗಳು ನಡೆದವು.
ಅರುಣ್ ರಾವ್ ದೀರ್ಘಕಾಲದ ಶುಶ್ರೂಷೆಗೆಂದು ಗಾಯತ್ರಿಯನ್ನು ತವರು ಬೆಂಗಳೂರಿಗೆ ಕರೆತಂದು ಬಿಟ್ಟಿದ್ದಾನೆ. ಆರು ತಿಂಗಳಾಯಿತು, ಗಾಯತ್ರಿ ಕೋಮಾದಿಂದ ಇನ್ನೂ ಹೊರಬಂದಿಲ್ಲ . ಒಬ್ಬಳೇ ಮಗಳಿಗೊದಗಿದ ದುಸ್ಥಿತಿಯ ನೆನೆದು ಕಣ್ಣೀರಿಡುವುದು ಬಿಟ್ಟರೆ ಗಾಯತ್ರಿಯ ಅಪ್ಪ ಅಮ್ಮನಿಗೆ ಬೇರೆ ದಾರಿ ತೋಚುತ್ತಿಲ್ಲ . ಅವರಿಗೂ ವಯಸ್ಸಾಗಿದೆ. ನಿವೃತ್ತಿ ಜೀವನದ ದಿನಗಳಲ್ಲಿ ಒದಗಿದ ದುರಂತವನ್ನು ಅರಗಿಸಿಕೊಳ್ಳಲಾಗದೆ ಕಂಗಾಲಾಗಿದ್ದಾರೆ.
ಗಾಯತ್ರಿ ಮೊದಲಿನಂತಾಗುವುದು ಯಾವಾಗ ? ಗಾಯತ್ರಿಯ ಗಂಡ ಡೈವೋರ್ಸ್ ಕೇಳುತ್ತಾನಾ? ಗೊತ್ತಿಲ್ಲ . ಆದರೆ, ಗಾಯತ್ರಿಯ ಚಿಕಿತ್ಸೆಗೆಂದು ಅರುಣ್ ಸಂಗ್ರಹಿಸಿರುವ ನಿಧಿ ಇನ್ನೂ ಗಾಯತ್ರಿ ಪೋಷಕರಿಗೆ ದೊರಕಿಲ್ಲ .
ಆಕೆಗೆ ಒಳ್ಳೆಯದಾಗಲಿ ಎಂದು ಹಾರೈಸುವ. ಗಾಯತ್ರಿಯ ಅಪ್ಪಅಮ್ಮನಿಗೆ ನೆಮ್ಮದಿಯ ದಿನಗಳು ಬಹುಬೇಗ ದೊರೆಯಲಿ ಎಂದು ಬಯಸುವ.
ಮುಖಪುಟ / ವಾಟ್ಸ್ ಹಾಟ್