ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀಮೆಎಣ್ಣೆ ಮಾಫಿಯಾದಿ ತೆಲಗಿ, ರೆಹಾನ್‌ ಬೇಗ್‌ : ಸಾಂಗ್ಲಿಯಾನ

By Staff
|
Google Oneindia Kannada News

ಸೀಮೆಎಣ್ಣೆ ಮಾಫಿಯಾದಿ ತೆಲಗಿ, ರೆಹಾನ್‌ ಬೇಗ್‌ : ಸಾಂಗ್ಲಿಯಾನ
ನಕಲಿ ಛಾಪಾ ಮಾರಾಟದಿಂದ ಬೊಕ್ಕಸಕ್ಕಾಗಿರುವ ನಷ್ಟ್ನ ಲೆಕ್ಕ ಮಾಡುವಲ್ಲಿ ಸರಕಾರ ವಿಫಲ

ಉಡುಪಿ : ಛಾಪಾಪಾಪದ ಪ್ರಮುಖ ಆರೋಪಿ ಅಬ್ದುಲ್‌ ಕರೀಮ್‌ ತೆಲಗಿ ಆಯಿಲ್‌ ದಂಧೆಯಲ್ಲಿ ಸಹ ಶಾಮೀಲಾಗಿದ್ದಾನೆ. ಈ ಕುರಿತು ನಾನು ನೀಡಿದ ಮಾಹಿತಿಗಳ ಆಧಾರದ ಮೇಲೆ ಕಾರ್ಯ ಪ್ರವೃತ್ತರಾಗಲು ಕರ್ನಾಟಕ ರಾಜ್ಯ ಸರಕಾರ ವಿಫಲವಾಗಿದೆ ಎಂದು ಬೆಂಗಳೂರು ನಗರದ ಮಾಜಿ ಪೊಲೀಸ್‌ ಆಯುಕ್ತ , ಪ್ರಸ್ತುತ ಬಿಜೆಪಿ ಮುಖಂಡರಾಗಿರುವ ಎಚ್‌.ಟಿ.ಸಾಂಗ್ಲಿಯಾನ ಆರೋಪಿಸಿದ್ದಾರೆ.

ತೆಲಗಿ ಮತ್ತು ಮಾಜಿ ಸಚಿವ ರೋಷನ್‌ಬೇಗ್‌ ಸಹೋದರ ರೆಹಾನ್‌ ಬೇಗ್‌ ಸೀಮೆಎಣ್ಣೆ ಮಾಫಿಯಾದಲ್ಲೂ ಪಾಲ್ಗೊಂಡಿದ್ದಾರೆ ಎಂದು ಸರಕಾರಕ್ಕೆ ಮೊದಲು ತಿಳಿಸಿದವನು ತಾನೇ ಎಂದು ಪತ್ರಕರ್ತರ ಜೊತೆ ಮಾತನಾಡುತ್ತಾ ಸಾಂಗ್ಲಿಯಾನ ಹೇಳಿದರು. ನಕಲಿ ಛಾಪಾ ಕಾಗದದ ಮಾರಾಟದಿಂದ ಸರಕಾರಕ್ಕಾಗಿರುವ ಒಟ್ಟು ನಷ್ಟವನ್ನು ಲೆಕ್ಕ ಹಾಕಲು ಸರಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ಈ ಸಂದರ್ಭದಲ್ಲಿ ತಾನು ಯಾವುದೇ ಸ್ಥಾನ ಅಥವಾ ಅಧಿಕಾರದ ಆಸೆಯಿಂದ ಬಿಜೆಪಿ ಸೇರಿಲ್ಲ ಎಂದು ಅವರು ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X