ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಫರ್‌ ಷರೀಫ್‌ ಭದ್ರಕೋಟೆಗೆ ‘ಮಾತುಗಾರ’ ಇಬ್ರಾಹಿಂ ಲಗ್ಗೆ

By Staff
|
Google Oneindia Kannada News

ಜಾಫರ್‌ ಷರೀಫ್‌ ಭದ್ರಕೋಟೆಗೆ ‘ಮಾತುಗಾರ’ ಇಬ್ರಾಹಿಂ ಲಗ್ಗೆ
ಮುಸ್ಲಿಂ ಮತ ಸೆಳೆಯಲು ಜಾತ್ಯತೀತ ಜನತಾದಳದ ತಂತ್ರ

ಬೆಂಗಳೂರು : ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸಿ.ಎಂ.ಇಬ್ರಾಹಿಂ ಸ್ಪರ್ಧಿಸುವ ವಿಷಯವನ್ನು ಜಾತ್ಯತೀತ ಜನತಾದಳದ ಮುಖಂಡ ಹಾಗೂ ಪಕ್ಷದ ವಕ್ತಾರ ಪಿಜಿಆರ್‌ ಸಿಂಧ್ಯಾ ಮಾ.15ರ ಸೋಮವಾರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪ್ರಕಟಿಸಿದರು.

ಇಬ್ರಾಹಿಂ ಸ್ಪರ್ಧೆಯಾಂದಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿನ ಚುನಾವಣೆಯ ಹಣಾಹಣಿ ರಂಗೇರುವುದೆಂದು ನಿರೀಕ್ಷಿಸಲಾಗಿದೆ. ಮಾಜಿ ಕೇಂದ್ರ ಸಚಿವ ಜಾಫರ್‌ ಷರೀಫ್‌ರ ಭದ್ರಕೋಟೆಯಾದ ಬೆಂಗಳೂರು ಉತ್ತರ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಗಳಲ್ಲೊಂದು. ಮುಸ್ಲಿಂ ಸಮುದಾಯದವರು ಅಧಿಕ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಷರೀಫ್‌ ಪ್ರಭಾವ ದಟ್ಟವಾಗಿದೆ. ಆದರೆ ತಮ್ಮ ಮಾತುಗಾರಿಕೆಯನ್ನೇ ಬಂಡವಾಳವಾಗಿರಿಸಿಕೊಂಡಿರುವ ಇಬ್ರಾಹಿಂ ಕೂಡ ಮುಸ್ಲಿಂರಾಗಿರುವುದರಿಂದ, ಷರೀಫ್‌ ಮತಬ್ಯಾಂಕ್‌ ಬದಲಾಗುವುದೆಂಬುದು ಜಾತ್ಯತೀತ ಜನತಾದಳದ ಲೆಕ್ಕಾಚಾರ.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X