‘ಲೋಕಶಕ್ತಿ’ ಪಕ್ಷಕ್ಕೆ ಕಲ್ಪವೃಕ್ಷವಾಗಿ ಬಂದ ಹೆಗಡೆ ಸಂಗಾತಿ ಪ್ರತಿಭಾ
‘ಲೋಕಶಕ್ತಿ’ ಪಕ್ಷಕ್ಕೆ ಕಲ್ಪವೃಕ್ಷವಾಗಿ ಬಂದ ಹೆಗಡೆ ಸಂಗಾತಿ ಪ್ರತಿಭಾ
ಮಾ.14 ರಂದು ಹೆಗಡೆ ಆಪ್ತರು-ಲೋಕಶಕ್ತಿ ಹಿತ ಚಿಂತಕರ ಸಭೆ
ಹೆಗಡೆ ಒಬ್ಬ ಮಹಾನ್ ರಾಜಕಾರಣಿ. ಅವರ ತತ್ವಗಳನ್ನು ವರ್ತಮಾನದಿಂದ ಮಾಯವಾಗಲು ಬಿಡುವುದಿಲ್ಲ . ಅದಕ್ಕಾಗಿ ಲೋಕಶಕ್ತಿಗೆ ಪುನಶ್ಚೇತನ ನೀಡುತ್ತಿದ್ದೇವೆ. ಅಲ್ಲದೆ ಲೋಕಶಕ್ತಿಗೆ ಮರುಜೀವ ನೀಡಲು ಹೆಗಡೆ ನಿಷ್ಠಾವಂತರ ಒತ್ತಡವೂ ಇತ್ತು. ಹಾಗಾಗಿ ಈ ನಿರ್ಣಯ ಕೈಗೊಂಡೆ ಎಂದು ಪ್ರತಿಭಾ ಪ್ರಹ್ಲಾದ್ ಹೇಳಿದ್ದಾರೆ.
ಹೆಗಡೆ ಅವರು ಬದುಕಿದ್ದಾಗಲೇ ಸಂಯುಕ್ತ ಜನತಾದಳದಲ್ಲಿ ಲೋಕಶಕ್ತಿ ವೀಲಿನವಾಗಿದೆ ಎಂದು ಘೋಷಿಸಲಾಗಿತ್ತು . ಆದರೆ, ಈ ಕುರಿತು ಕಾನೂನು ರೀತಿಯ ಯಾವ ಪ್ರಕ್ರಿಯೆಗಳು ಪೂರ್ಣಗೊಂಡಿಲ್ಲ . ಚುನಾವಣಾ ಆಯೋಗದ ಬಳಿ ಲೋಕಶಕ್ತಿಯ ತೆಂಗಿನಮರದ ಚಿಹ್ನೆ ಇನ್ನೂ ಉಳಿದಿದೆ ಎಂದು ಪ್ರತಿಭಾ ತಿಳಿಸಿದರು.
ಪಕ್ಷದ ಪುನರುತ್ಥಾನವು ಹೆಗಡೆ ಜೀವನದ ಕೊನೆಯ ಆಸೆಯಾಗಿತ್ತು. ಅವರ ಜೀವಿತಾವಧಿಯಲ್ಲಿ ರಾಜಕೀಯದಲ್ಲಿ ಇಲ್ಲದ ಅವರ ಕುಟುಂಬದವರು ಈಗ ಬಿಜೆಪಿ ಸೇರಿದ್ದಾರೆ. ಅದು ಅವರ ವೈಯುಕ್ತಿಕ ವಿಚಾರ. ಹೆಗಡೆಗೆ ಬಿಜಿಪಿ ಮಾಡಿದ ಅವಮಾನವನ್ನು ಅವರೆಲ್ಲ ಮರೆತಂತಿದೆ. ಈ ಅಪಮಾನ ಜಾರ್ಜ್ ಫರ್ನಾಂಡೀಸ್ ಕುಕೃತ್ಯದಿಂದ ನಡೆದದ್ದು. ಹೆಗಡೆಗೆ ಸಚಿವ ಸಂಪುಟದಲ್ಲಿ ಆಸಕ್ತಿ ಇಲ್ಲ ಎಂದು ಪಿತೂರಿ ಮಾಡಿದ ಜಾರ್ಜ್ ರಕ್ಷಣಾ ಖಾತೆಯನ್ನು ತಮ್ಮ ಬಗಲಿಗೆ ಹಾಕಿಕೊಂಡರು ಎಂದು ಪ್ರತಿಭಾ ಆಪಾದಿಸಿದರು.
ಪಕ್ಷದಿಂದ ಹೊರಹೋದವರೆಲ್ಲ ಮತ್ತೆ ಬರುತ್ತಾರೆ ಎಂಬ ನಿರೀಕ್ಷೆಯಿದೆ. ನನಗೆ ರಾಜಕಾರಣ ಹೊಸದಲ್ಲ. ಕಳೆದ 15 ವರ್ಷಗಳ ಕಾಲ ಹೆಗಡೆ ಸಾಂಗತ್ಯದಲ್ಲಿ ರಾಜಕಾರಣವನ್ನು ಬಹು ಸಾಮೀಪ್ಯದಿಂದ ಕಂಡಿದ್ದೇನೆ. ಸಕ್ರಿಯ ರಾಜಕಾರಣಿಯಾಗಿ ಇರಲಿಲ್ಲ ಅಷ್ಟೇ. ಮುಂದೆ ಯಾರಾದರು ಬಂದು ಪಕ್ಷದ ಜವಾಬ್ದಾರಿ ಹೊರಲು ತಯಾರಿದ್ದರೆ ಅವರಿಗೆ ವಹಿಸುತ್ತೇನೆ ಎಂದು ಹೇಳಿದರು.
ಸ್ನಾತಕೋತ್ತರ ಪದವೀಧರರಾದ ಪ್ರತಿಭಾ ಪ್ರಹ್ಲಾದ್ ಸದ್ಯ ಫಿರೋಜ್ಷಾ ರಸ್ತೆಯಲ್ಲಿರುವ ಹೆಗಡೆಯವರ ಗಿರಿಧರ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications