Get Updates
Get notified of breaking news, exclusive insights, and must-see stories!

ಕಾಳ್ಗಿಚ್ಚು ಪರಿಹಾರ ಕಾಮಗಾರಿಗಳಿಗಾಗಿ ಸರ್ಕಾರದಿಂದ 25 ಲಕ್ಷ ರು.

ಕಾಳ್ಗಿಚ್ಚು ಪರಿಹಾರ ಕಾಮಗಾರಿಗಳಿಗಾಗಿ ಸರ್ಕಾರದಿಂದ 25 ಲಕ್ಷ ರು.
ಬರಪೀಡಿತ ಪ್ರದೇಶಗಳಿಗೆ ಸರ್ಕಾರದಿಂದ ನೀರು ಪೂರೈಕೆ

ಬೆಂಗಳೂರು : ರಾಜ್ಯ ಸಚಿವ ಸಂಪುಟ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕಾಳ್ಗಿಚ್ಚು ವ್ಯಾಪಕವಾಗಿರುವ ಭದ್ರಾ ಸಂರಕ್ಷಿತಾ ಅರಣದಲ್ಲಿನ ಪರಿಹಾರ ಕಾರ್ಯಗಳಿಗಾಗಿ 25 ಲಕ್ಷ ರೂಪಾಯಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ನಿಧಿಯಿಂದ ಕಾಳ್ಗಿಚ್ಚಿನಿಂದ ನೊಂದವರಿಗೂ ಪರಿಹಾರ ಒದಗಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ.ಚಂದ್ರೇಗೌಡ ಹೇಳಿದರು.

ಸುಪ್ರೀಂ ಕೋರ್ಟ್‌ ಆಜ್ಞೆಯಂತೆ ಬೆಂಕಿಗೆ ಆಹುತಿಯಾದ ಮರಗಿಡಗಳು ಮತ್ತು 70-80 ಅಡಿ ಎತ್ತರ ಬೆಳೆದಿದ್ದ ಬಿದಿರಿನ ಗಿಡಗಳನ್ನು ವಿಲೇವಾರಿ ಮಾಡಲು ಅರಣ್ಯ ಇಲಾಖೆಗೆ ಸಾಧ್ಯವಾಗಿಲ್ಲ ಎಂದು ಚಂದ್ರೇಗೌಡ ಹೇಳಿದರು.

ಬರಪೀಡಿತ ಪ್ರದೇಶಕ್ಕೆ ನೀರು ಪೂರೈಸಲು ಸರಕಾರ ನಿರ್ಧರಿಸಿದೆ. ಈ ಕುರಿತ ಕಾನೂನು ಚೌಕಟ್ಟಿನ ಅವಕಾಶದ ಕುರಿತು ಮುಖ್ಯ ಕಾರ್ಯದರ್ಶಿ ಕೆ.ಕೆ. ಮಿಶ್ರ ಚುನಾವಣಾ ಆಯೋಗದ ಜೊತೆ ಚರ್ಚಿಸುವರು. ಬಳಿಕ ಈ ಕಾರ್ಯಕ್ರಮಗಳ ಜಾರಿಗೆ ಹಾಗೂ ಹೊಸ ಯೋಜನೆ ಅನುಷ್ಠಾನದ ಕುರಿತು ನಿರ್ಧರಿಸಲಾಗುವುದು. ಸರಕಾರ ಯಾವುದೇ ಕಾರಣಕ್ಕೂ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವುದಿಲ್ಲ ಎಂದು ಸಚಿವ ಚಂದ್ರೇಗೌಡ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+