ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಂದು ಸಿಬಿಐ ಎದುರು ಕೂತ ತೆಲಗಿ

By Staff
|
Google Oneindia Kannada News

ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಂದು ಸಿಬಿಐ ಎದುರು ಕೂತ ತೆಲಗಿ
ಸಿಬಿಐನ ಮೂವರು ತನಿಖಾಧಿಕಾರಿಗಳಿಂದ ತೆಲಗಿ ವಿಚಾರಣೆ

ಬೆಂಗಳೂರು: ಛಾಪ ಪಾಪ ಹಗರಣದ ಪ್ರಮುಖ ಆರೋಪಿ ಅಬ್ದುಲ್‌ ಕರೀಂ ತೆಲಗಿಯನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗ್ರಹದಲ್ಲಿ ಸಿಬಿಐ ಅಧಿಕಾರಿಗಳು ಬುಧವಾರ ಪ್ರಶ್ನಿಸಿದರು.

ವಿಶೇಷ ನ್ಯಾಯಾಲಯದಿಂದ ಪರವಾನಿಗೆ ಪಡೆದಿರುವ ಸಿಬಿಐನ ಮೂವರು ತನಿಖಾಧಿಕಾರಿಗಳು ಬಹುಕೋಟಿ ಛಾಪ ಹಗರಣದ ಆರೋಪದ ಹಿನ್ನೆಲೆಯಲ್ಲಿ ಬುಧವಾರ ತೆಲಗಿಯ ವಿಚಾರಣೆ ನಡೆಸಿದರು ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ.

ಚೇತರಿಕೆ : ಇತ್ತೀಚೆಗೆ ವಾಂತಿ, ಭೇದಿಯಿಂದ ನರಳುತ್ತಿದ್ದ ಕರೀಂಲಾಲ ತೆಲಗಿಗೆ ವಿಕ್ಟೋರಿಯಾ ಹಾಗೂ ಐಸೊಲೇಷನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈಗ ತೆಲಗಿ ಚೇತರಿಸಿಕೊಂಡಿದ್ದು ಆತನನ್ನು ಮಾ.9 ರಂದೇ ಕಾರಾಗೃಹಕ್ಕೆ ಮರಳಿ ಕರೆತರಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X