ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮವಾರ ಪೇಟೆಯಲ್ಲಿ ಕಾಳ್ಗಿಚ್ಚು ಜಾಗೃತಿ ಮೂಡಿಸುವ ಜಾಥಾ

By Staff
|
Google Oneindia Kannada News

ಸೋಮವಾರ ಪೇಟೆಯಲ್ಲಿ ಕಾಳ್ಗಿಚ್ಚು ಜಾಗೃತಿ ಮೂಡಿಸುವ ಜಾಥಾ
ನಾಗರಹೊಳೆ ವನ್ಯಜೀವಿ ಸಂರಕ್ಷಣೆ ಶೈಕ್ಷಣಿಕ ಸಮಿತಿ ಹಾಗೂ ಜನ ವಿಕಾಸ ಶಾಲೆಯಿಂದ ಜಾಥಾ ಸಂಘಟನೆ

ಸೋಮವಾರ ಪೇಟೆ : ಕಾಳ್ಗಿಚ್ಚಿನ ವಿಶ್ವರೂಪ ಹಾಗೂ ಕಾಳ್ಗಿಚ್ಚಿನ ಅಡ್ಡ ಪರಿಣಾಮಗಳ ಕುರಿತು ಜನ ಜಾಗೃತಿ ಮೂಡಿಸುವ ಜಾಥಾ ಇತ್ತೀಚೆಗೆ ಸೋಮವಾರ ಪೇಟೆಯಲ್ಲಿ ನಡೆಯಿತು. ಈ ಅಪರೂಪದ ಜಾಥಾ ಸ್ಥಳೀಯ ಜನರ ಮೆಚ್ಚುಗೆ ಗಳಿಸಿದೆ.

ನಾಗರಹೊಳೆ ವನ್ಯಜೀವಿ ಸಂರಕ್ಷಣೆ ಶೈಕ್ಷಣಿಕ ಸಮಿತಿ ಹಾಗೂ ಜನ ವಿಕಾಸ ಶಾಲೆ ಈ ಜಾಥಾವನ್ನು ಜಂಟಿಯಾಗಿ ಹಮ್ಮಿಕೊಂಡಿದ್ದವು. ಜನ ವಿಕಾಸ ಶಾಲೆಯ ಪ್ರಾಂಶುಪಾಲರಾದ ಅನಿತಾ ಜಾಥಾಕ್ಕೆ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಥಾ, ಕಾಳ್ಗಿಚ್ಚಿನ ಬಗ್ಗೆ ಅರಿವು ಮೂಡಿಸುವ ಕರಪತ್ರಗಳನ್ನು ಜನರಿಗೆ ವಿತರಿಸಿತು.

ಬಹಳಷ್ಟು ಸಾರಿ ಮನುಷ್ಯನ ಅಜಾಗರೂಕತೆಯಿಂದಲೇ ಕಾಳ್ಗಿಚ್ಚು ಉಂಟಾಗುತ್ತದೆ. ಜಾನುವಾರುಗಳಿಗೆ ಹೊಸ ಹುಲ್ಲು ಬೆಳೆಯಲೆಂದು, ಒಣಗಿದ ಹುಲ್ಲಿಗೆ ಬೆಂಕಿ ಹಚ್ಚುವವರೂ ಇದ್ದಾರೆ. ಇದರಿಂದಾಗಿ ಕಾಳ್ಗಿಚ್ಚು ಉಂಟಾಗುತ್ತದೆ. ಕಾಳ್ಗಿಚ್ಚಿನಿಂದಾಗಿ ಅನೇಕ ವನ್ಯಜೀವಿಗಳು ಹಾಗೂ ಸಸ್ಯಸಂಕುಲ ನಾಶವಾಗುತ್ತದೆ. ಅಪರೂಪದ ಪ್ರಬೇಧಗಳು ಸರ್ವನಾಶವಾಗುವುದೂ ಉಂಟು ಎಂದು ವನ್ಯಜೀವಿ ಸಂರಕ್ಷಣಾ ಸಮಿತಿಯ ಚಿತ್ತರಂಜನ್‌ ಜಾಥಾ ಸಂದರ್ಭದಲ್ಲಿ ತಿಳಿಸಿದರು.

ಕಾಳ್ಗಿಚ್ಚಿನಿಂದಾಗಿ ಮಣ್ಣಿನ ಫಲವತ್ತತೆ ಕುಸಿಯುತ್ತದೆ. ಪರಿಸರ ಮಾಲಿನ್ಯವೂ ಉಂಟಾಗುತ್ತದೆ. ಆ ಕಾರಣದಿಂದಾಗಿ ವಿದ್ಯಾರ್ಥಿಗಳು ಹಾಗೂ ಜನತೆ ಕಾಳ್ಗಿಚ್ಚು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಚಿತ್ತರಂಜನ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X