Get Updates
Get notified of breaking news, exclusive insights, and must-see stories!

ಸೋಮವಾರ ಪೇಟೆಯಲ್ಲಿ ಕಾಳ್ಗಿಚ್ಚು ಜಾಗೃತಿ ಮೂಡಿಸುವ ಜಾಥಾ

ಸೋಮವಾರ ಪೇಟೆಯಲ್ಲಿ ಕಾಳ್ಗಿಚ್ಚು ಜಾಗೃತಿ ಮೂಡಿಸುವ ಜಾಥಾ
ನಾಗರಹೊಳೆ ವನ್ಯಜೀವಿ ಸಂರಕ್ಷಣೆ ಶೈಕ್ಷಣಿಕ ಸಮಿತಿ ಹಾಗೂ ಜನ ವಿಕಾಸ ಶಾಲೆಯಿಂದ ಜಾಥಾ ಸಂಘಟನೆ

ಸೋಮವಾರ ಪೇಟೆ : ಕಾಳ್ಗಿಚ್ಚಿನ ವಿಶ್ವರೂಪ ಹಾಗೂ ಕಾಳ್ಗಿಚ್ಚಿನ ಅಡ್ಡ ಪರಿಣಾಮಗಳ ಕುರಿತು ಜನ ಜಾಗೃತಿ ಮೂಡಿಸುವ ಜಾಥಾ ಇತ್ತೀಚೆಗೆ ಸೋಮವಾರ ಪೇಟೆಯಲ್ಲಿ ನಡೆಯಿತು. ಈ ಅಪರೂಪದ ಜಾಥಾ ಸ್ಥಳೀಯ ಜನರ ಮೆಚ್ಚುಗೆ ಗಳಿಸಿದೆ.

ನಾಗರಹೊಳೆ ವನ್ಯಜೀವಿ ಸಂರಕ್ಷಣೆ ಶೈಕ್ಷಣಿಕ ಸಮಿತಿ ಹಾಗೂ ಜನ ವಿಕಾಸ ಶಾಲೆ ಈ ಜಾಥಾವನ್ನು ಜಂಟಿಯಾಗಿ ಹಮ್ಮಿಕೊಂಡಿದ್ದವು. ಜನ ವಿಕಾಸ ಶಾಲೆಯ ಪ್ರಾಂಶುಪಾಲರಾದ ಅನಿತಾ ಜಾಥಾಕ್ಕೆ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಥಾ, ಕಾಳ್ಗಿಚ್ಚಿನ ಬಗ್ಗೆ ಅರಿವು ಮೂಡಿಸುವ ಕರಪತ್ರಗಳನ್ನು ಜನರಿಗೆ ವಿತರಿಸಿತು.

ಬಹಳಷ್ಟು ಸಾರಿ ಮನುಷ್ಯನ ಅಜಾಗರೂಕತೆಯಿಂದಲೇ ಕಾಳ್ಗಿಚ್ಚು ಉಂಟಾಗುತ್ತದೆ. ಜಾನುವಾರುಗಳಿಗೆ ಹೊಸ ಹುಲ್ಲು ಬೆಳೆಯಲೆಂದು, ಒಣಗಿದ ಹುಲ್ಲಿಗೆ ಬೆಂಕಿ ಹಚ್ಚುವವರೂ ಇದ್ದಾರೆ. ಇದರಿಂದಾಗಿ ಕಾಳ್ಗಿಚ್ಚು ಉಂಟಾಗುತ್ತದೆ. ಕಾಳ್ಗಿಚ್ಚಿನಿಂದಾಗಿ ಅನೇಕ ವನ್ಯಜೀವಿಗಳು ಹಾಗೂ ಸಸ್ಯಸಂಕುಲ ನಾಶವಾಗುತ್ತದೆ. ಅಪರೂಪದ ಪ್ರಬೇಧಗಳು ಸರ್ವನಾಶವಾಗುವುದೂ ಉಂಟು ಎಂದು ವನ್ಯಜೀವಿ ಸಂರಕ್ಷಣಾ ಸಮಿತಿಯ ಚಿತ್ತರಂಜನ್‌ ಜಾಥಾ ಸಂದರ್ಭದಲ್ಲಿ ತಿಳಿಸಿದರು.

ಕಾಳ್ಗಿಚ್ಚಿನಿಂದಾಗಿ ಮಣ್ಣಿನ ಫಲವತ್ತತೆ ಕುಸಿಯುತ್ತದೆ. ಪರಿಸರ ಮಾಲಿನ್ಯವೂ ಉಂಟಾಗುತ್ತದೆ. ಆ ಕಾರಣದಿಂದಾಗಿ ವಿದ್ಯಾರ್ಥಿಗಳು ಹಾಗೂ ಜನತೆ ಕಾಳ್ಗಿಚ್ಚು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಚಿತ್ತರಂಜನ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+