Get Updates
Get notified of breaking news, exclusive insights, and must-see stories!

ಬೆಂಗಳೂರಿನ ಗಾಂಧಿನಗರ, ಕೆಜಿಎಫ್‌ನಿಂದ ಎಐಡಿಎಂಕೆ ಸ್ಪರ್ಧೆ?

ಬೆಂಗಳೂರಿನ ಗಾಂಧಿನಗರ, ಕೆಜಿಎಫ್‌ನಿಂದ ಎಐಡಿಎಂಕೆ ಸ್ಪರ್ಧೆ?
ರಾಜ್ಯದ 5 ವಿಧಾನಸಭಾ ಕ್ಷೇತ್ರಗಳಲ್ಲಿ ಅಣ್ಣಾಡಿಎಂಕೆ ಸ್ಪರ್ಧೆ ಸಂಭವ

ಬೆಂಗಳೂರು : ಕರ್ನಾಟಕದಲ್ಲಿ ಕನಿಷ್ಠ 25 ವಿಧಾನ ಸಭಾ ಸೀಟುಗಳನ್ನಾದರೂ ಬಿಟ್ಟು ಕೊಡಬೇಕೆಂದು ಈ ಹಿಂದೆ ಪಟ್ಟು ಹಿಡಿದಿದ್ದ ಜಯಲಲಿತಾ ನೇತೃತ್ವದ ಅಣ್ಣಾ ಡಿಎಂಕೆ ಈಗ 5 ಸ್ಥಾನಕ್ಕೆ ಬಂದು ನಿಂತಿದೆ. ಮೂರು ಲೋಕಸಭಾ ಸೀಟಿನ ಬದಲಿಗೆ ಬೆಂಗಳೂರು ಉತ್ತರ ಕ್ಷೇತ್ರ ಒಂದಾದರೂ ನೀಡಿ ಎಂದು ಎನ್‌ಡಿಎ ಒಕ್ಕೂಟದ ಪ್ರಮುಖ ಪಕ್ಷ ಬಿಜೆಪಿಯಲ್ಲಿ ಕೇಳಿಕೊಂಡಿದೆ.

ಕೆಜಿಎಫ್‌ ವಿಧಾನ ಸಭಾ ಕ್ಷೇತ್ರ ಮೊದಲಿನಿಂದಲೂ ಎಐಡಿಎಂಕೆ ವಶದಲ್ಲಿರುವ ಕ್ಷೇತ್ರ. ಈ ವರ್ಷವೂ ಶಾಸಕ ಭಕ್ತವತ್ಸಲಂ ಗೆಲ್ಲುವ ಕುದುರೆ. ತಮಿಳರು ಗಣನೀಯವಾಗಿ ಇರುವ ಕನ್ನಡಿಗ ಚಿತ್ರೋದ್ಯಮದ ಹೃದಯಭಾಗ ಗಾಂಧೀನಗರವನ್ನು ಕೂಡಾ ಬಿಜೆಪಿ ಎಐಡಿಎಮ್‌ಕೆಗೆ ಬಿಟ್ಟುಕೊಡುವ ಸಾಧ್ಯತೆ ಇದೆ. ಈ ಕುರಿತು ರಾಜ್ಯ ಬಿಜೆಪಿ ಘಟಕ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ವೆಂಕಯ್ಯ ನಾಯ್ಡು, ಹಾಗೂ ಎಐಡಿಎಂಕೆ ಮುಖ್ಯಸ್ಥೆ ಜಯಲಲಿತಾ ಮಾತುಕತೆ ನಡೆಸಿ ನಿರ್ಧರಿಸಲಿದ್ದಾರೆ.

ಈ ಹಿಂದೆ ರಾಜ್ಯ ಬಿಜಿಪಿ ಅಧ್ಯಕ್ಷ ಅನಂತಕುಮಾರ್‌ ಮತ್ತು ರಾಜ್ಯ ಎಐಡಿಎಂಕೆ ನಾಯಕರ ನಡುವೆ ನಡೆದ ಮಾತುಕತೆ ವಿಫಲವಾಗಿದೆ. ಮತ್ತೆ ಕಾವೇರಿ ವಿವಾದ ಉದ್ಭವಿಸಿದಲ್ಲಿ ಈ ಹೊಂದಾಣಿಕೆಯಿಂದಾಗಿ ರಾಜ್ಯ ಬಿಜೆಪಿ ಘಟಕ ಮುಜುಗರಕ್ಕೆ ಒಳಗಾಗಲಿದೆ. ಬಿಜೆಪಿ ರಾಜ್ಯ ಹಿತದೃಷ್ಟಿಯ ನಿಲುವುಗಳಿಗೆ ಹಿನ್ನಡೆಯಾಗುವ ಕಾರಣ ಮಾತುಕತೆ ನಿಧಾನವಾಗಿದೆ ಎನ್ನಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+