Get Updates
Get notified of breaking news, exclusive insights, and must-see stories!

ಚಿತ್ತಾಪುರದಲ್ಲಿ ಮಾಜಿ ಶಾಸಕನ ಪತ್ನಿ , ಪುತ್ರಿಯರ ದಾರುಣ ಹತ್ಯೆ

ಚಿತ್ತಾಪುರದಲ್ಲಿ ಮಾಜಿ ಶಾಸಕನ ಪತ್ನಿ , ಪುತ್ರಿಯರ ದಾರುಣ ಹತ್ಯೆ
ತೀವ್ರ ಗಾಯಗೊಂಡ ಮಾಜಿ ಶಾಸಕ ಶರಣಪ್ಪ ಆಸ್ಪತ್ರೆಗೆ ದಾಖಲು

ಗುಲ್ಬರ್ಗಾ : ಜಿಲ್ಲೆಯ ಚಿತ್ತಾಪುರದಲ್ಲಿ ಮಾ.8ರ ಸೋಮವಾರ ಸಂಭವಿಸಿದ ದಾರುಣ ಘಟನೆಯಲ್ಲಿ , ಮಾಜಿ ಶಾಸಕ ಶರಣಪ್ಪ ಭೈರಿ ಅವರ ಕುಟುಂಬದ ಮೂವರು ಕೊಲೆಗೀಡಾಗಿದ್ದಾರೆ.

ಮಾರಕಾಸ್ತ್ರಗಳನ್ನು ಹೊಂದಿದ್ದ ಗುಂಪೊಂದು ಶರಣಪ್ಪ ಅವರ ಮನೆಗೆ ಸೋಮವಾರ ನುಗ್ಗಿದ್ದು - ಶರಣಪ್ಪನವರ ಪತ್ನಿ ಹಾಗೂ ಇಬ್ಬರು ಪುತ್ರಿಯರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಹಲ್ಲೆಗೊಳಗಾದ ಲಕ್ಷ್ಮಿಬಾಯಿ (60), ಚಂದ್ರಕಲಾ (20), ಮತ್ತು ರೇಣುಕಾ (24) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಜಿ ಶಾಸಕ ಶರಣಪ್ಪನವರ ಮೇಲೂ ಹಲ್ಲೆ ನಡೆದಿದ್ದು , ತೀವ್ರವಾಗಿ ಗಾಯಗೊಂಡಿರುವ ಅವರು ಗುಲ್ಬರ್ಗಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲ್ಲೆಗೆ ಆಸ್ತಿ ವಿವಾದವೇ ಕಾರಣವಿರಬಹುದೆಂದು ಶಂಕಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮಚಂದ್ರ ರಾವ್‌ ಭೇಟಿ ನೀಡಿದ್ದು , ತನಿಖೆ ಮುಂದುವರಿದಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+