ಬೆಂಗಳೂರ ಟೀವಿಗಳಲ್ಲಿ ಭಾರತ-ಪಾಕ್ ಕ್ರಿಕೆಟ್ ಪ್ರಸಾರ ಇಲ್ಲ ?
ಬೆಂಗಳೂರ ಟೀವಿಗಳಲ್ಲಿ ಭಾರತ-ಪಾಕ್ ಕ್ರಿಕೆಟ್ ಪ್ರಸಾರ ಇಲ್ಲ ?
ಕೇಬಲ್ ಮಾಲೀಕರು ಹಾಗೂ ಚಾನಲ್ ಒಡೆಯರ ಜಗಳದಲ್ಲಿ ಬಡವಾಗುತ್ತಿರುವ ಗ್ರಾಹಕ
ಕ್ರಿಕೆಟ್ ಮ್ಯಾಚನ್ನು ಪ್ರಸಾರ ಮಾಡಲು ಅಧಿಕೃತ ಹಕ್ಕು ಪಡೆದಿರುವ ಟೆನ್ ಸ್ಪೋರ್ಟ್ಸ್ ಚಾನೆಲ್ನ ಅಸ್ಪಷ್ಟ ನೀತಿಯಿಂದಾಗಿ ಬೆಂಗಳೂರಿಗರು ಕ್ರಿಕೆಟ್ ಹಬ್ಬದಿಂದ ವಂಚಿತರಾಗುವ ಸಂದರ್ಭ ಸೃಷ್ಟಿಯಾಗಿದೆ. ಕ್ರಿಕೆಟ್ ಸರಣಿ ಪ್ರಾರಂಭವಾಗಲು ಕೇವಲ 4 ದಿನಗಳು ಉಳಿದಿರುವಾಗ, ಟೆನ್ ಸ್ಪೋರ್ಟ್ಸ್ ಚಾನೆಲ್ ಕೇಬಲ್ ಆಪರೇಟರ್ಗಳ ಕಾಲು ಕೆರೆದು ಜಗಳಕ್ಕಿಳಿಯುತ್ತಿದೆ.
ಟೆನ್ ಸ್ಪೋರ್ಟ್ಸ್ ಚಾನೆಲ್ ಈಗಿನ ದರದಲ್ಲಿ ಹೆಚ್ಚಳವನ್ನು ಬಯಸುತ್ತಿದೆ ಮತ್ತು ಆ ದರವನ್ನೂ ಕೂಡ ನಿರ್ದಿಷ್ಟವಾಗಿ ಸೂಚಿಸಲು ಹಿಂಜರಿಯುತ್ತಿದೆ. ನಾವು ಇಂತಿಷ್ಟೇ ಹಣ ಪಾವತಿಸಬೇಕೆಂದು ಹೇಳುತ್ತಿಲ್ಲ. ಆದರೆ ಕೇಬಲ್ ಆಪರೇಟರ್ಗಳೇ ಸರಿಯಾದ ಒಂದು ದರವನ್ನು ನಿಗದಿ ಮಾಡಬೇಕು. ಈ ಮುನ್ನ ನಿರ್ಧರಿಸಿದಂತೆ ಈಗಿರುವ ಚಂದಾದಾರರನ್ನು 5% ರಿಂದ 30% ಕ್ಕೆ ಏರಿಸಬೇಕು. ಈ ಕುರಿತು ಏಕೆಂದರೆ ಅವರ ಜೊತೆ ಸೇರಿಯೇ ಮೊದಲು ಈ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಟೆನ್ ಸ್ಪೋರ್ಟ್ಸ್ನ ವ್ಯವಸ್ಥಾಪಕ ನಿರ್ದೇಶಕ ಶರ್ಮಿಷ್ಟ ಹೇಳಿದ್ದಾರೆ.
ಇತ್ತ ಕೇಬಲ್ ಆಪರೇಟರುಗಳು ಹೇಳುತ್ತಿರುವುದೇನೆಂದರೆ- ಈಗಿರುವ ಚಂದಾದಾರರಿಗೆ 5% ರಷ್ಟು ಹೆಚ್ಚು ಹಣ ಪಾವತಿಸಲು ಕೇಳಲಾಗುತ್ತದೆ. ಇದರಿಂದ ಬಾಡಿಗೆ ಹೆಚ್ಚುತ್ತದೆ. ಆದರೆ ಒಮ್ಮೆಲೆ 30% ಚಂದಾದಾರರನ್ನು ಹೆಚ್ಚಿಸಿ ಎಂದರೆ ಅದು ಆಗದ ಮಾತು! ಟೆನ್ ಸ್ಪೋರ್ಟ್ಸ್ ಚಾನಲ್ ತನ್ನ ಆದಾಯವನ್ನು ಒಮ್ಮೆಗೇ ಹೆಚ್ಚಿಸಿಕೊಳ್ಳಲು ಹವಣಿಸುತ್ತಿದೆ ಎಂದು ಕೇಬಲ್ ಆಪರೇಟರುಗಳ ನಿರ್ದೇಶಕ ಪ್ರತಾಪ್ ದೂರುತ್ತಾರೆ.
ಟೆನ್ ಸ್ಪೋರ್ಟ್ಸ್ ಚಾನೆಲ್ ಕ್ರಿಕೆಟ್ ಸರಣಿಯ ಪ್ರಸಾರದ ಹಕ್ಕು ಪಡೆದ ತಕ್ಷಣವೇ ರಷ್ಯಾ ಮತ್ತು ಚೈನಾದ ಕೆಲವು ಚಾನಲ್ಗಳ ಪ್ರಸಾರವನ್ನೂ ತಡೆಹಿಡಿದಿದೆ. ಪ್ರತಿ ಚಾನೆಲ್ಗೂ ಶುಲ್ಕ ಹೆಚ್ಚಿಸುತ್ತಿರುವ ಟೆನ್ ಸ್ಪೋರ್ಟ್ಸ್ ನೀತಿ ಬಳಕೆದಾರರಿಗೂ ಕೇಬಲ್ ಮಾಲೀಕರಿಗೂ ಹೊರೆಯಾಗಲಿದೆ ಎಂದು ರಾಜ್ಯ ಕೇಬಲ್ ಆಪರೇಟರುಗಳ ಸಂಘದ ಸುದೀಶ್ ಕುಮಾರ್ ಹೇಳುತ್ತಾರೆ.
ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಮಾತಿದೆಯಲ್ಲ , ಹಾಗೆ ಟೆನ್ ಸ್ಪೋರ್ಟ್ಸ್ ಮತ್ತು ಕೇಬಲ್ ಆಪರೇಟರ್ಗಳ ನಡುವಿನ ಜಗಳದಲ್ಲಿ ರಾಜ್ಯದ ಕೇಬಲ್ ಗ್ರಾಹಕರು ಕ್ರಿಕೆಟ್ ರಸಕವಳದಿಂದ ವಂಚಿರಾಗುವ ಸಾಧ್ಯತೆಯಿದೆ. ಹಾಗಾದರೆ ಒಳ್ಳೆಯದೇನೇ ಎನ್ನುವುದು ಕೆಲವು ಪೋಷಕರ ಅಭಿಪ್ರಾಯ. ಏಕೆಂದರೆ ಮಕ್ಕಳ ಪರೀಕ್ಷೆಗಳು ಹೊಸಿತಿಲಲ್ಲೇ ಇವೆ.
ಮುಖಪುಟ / ಬೆಂಗಳೂರು ಡೈರಿ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications