Get Updates
Get notified of breaking news, exclusive insights, and must-see stories!

ಕಾವೇರಿ ಸಂತ್ರಸ್ತರಿಗೆ 6 ತಿಂಗಳಲ್ಲಿ ಪರಿಹಾರಕ್ಕೆ ಕೋರ್ಟ್‌ ಆದೇಶ

ಕಾವೇರಿ ಸಂತ್ರಸ್ತರಿಗೆ 6 ತಿಂಗಳಲ್ಲಿ ಪರಿಹಾರಕ್ಕೆ ಕೋರ್ಟ್‌ ಆದೇಶ
ಪ್ರಾಧಿಕಾರದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ನಿರಾಕರಣೆ

ನವದೆಹಲಿ : ಆರು ತಿಂಗಳೊಳಗೆ ಕಾವೇರಿ ಗಲಭೆಯ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಗೆ ಸುಪ್ರಿಂಕೋರ್ಟ್‌ ಆದೇಶಿಸಿದೆ.

ತಮಿಳುನಾಡಿನೊಂದಿಗೆ ನೀರು ಹಂಚಿಕೊಳ್ಳುವ ಸಂಬಂಧ 1991ರಲ್ಲಿ ನಡೆದ ಗಲಭೆಗಳಲ್ಲಿ ನೊಂದವರಿಗೆ ಪರಿಹಾರ ನೀಡುವಂತೆ ಕಾವೇರಿ ಪರಿಹಾರ ಪ್ರಾಧಿಕಾರ ತಿಳಿಸಿತ್ತು . ಈ ಕುರಿತು ಪ್ರಾಧಿಕಾರದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿರುವ ಸುಪ್ರಿಂಕೋರ್ಟ್‌, 6 ತಿಂಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಮಂಗಳವಾರ ಆದೇಶಿಸಿತು.

ನ್ಯಾಯಮೂರ್ತಿ ಎಸ್‌.ರಾಜೇಂದ್ರಬಾಬು, ನ್ಯಾಯಮೂರ್ತಿ ಎ.ಆರ್‌.ಲಕ್ಷ್ಮಣನ್‌ ಹಾಗೂ ನ್ಯಾಯಮೂರ್ತಿ ಜಿ.ಪಿ.ಮಾಥುರ್‌ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ. ಸುಮಾರು 10 ಸಾವಿರ ಸಂತ್ರಸ್ತರಿಗೆ ಪರಿಹಾರ ಬರಬೇಕಾಗಿದೆ.

ಕರ್ನಾಟಕ ಹಾಗೂ ತಮಿಳುನಾಡುಗಳಲ್ಲಿ ಚುನಾವಣೆ ಜ್ವರ ಏರುಮುಖವಾಗಿರುವುದರಿಂದ ಸದ್ಯಕ್ಕೆ ಕಾವೇರಿ ನೀರು ಹಂಚಿಕೆ ವಿವಾದ ತಣ್ಣಗಿದೆ.

(ಪಿಟಿಐ)

ಮುಖಪುಟ / ಕಾವೇರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+