Get Updates
Get notified of breaking news, exclusive insights, and must-see stories!

ಮಾ.12-15 : ರಾಜ್ಯದಲ್ಲಿ ಅಡ್ವಾಣಿ ‘ಭಾರತ ಉದಯ ಯಾತ್ರೆ’

ಮಾ.12-15 : ರಾಜ್ಯದಲ್ಲಿ ಅಡ್ವಾಣಿ ‘ಭಾರತ ಉದಯ ಯಾತ್ರೆ’
ಬೆಂಗಳೂರು, ಶಿವಮೊಗ್ಗ , ಹುಬ್ಬಳ್ಳಿ, ಬಿಜಾಪುರಗಳಲ್ಲಿ ಬಹಿರಂಗ ಸಭೆ

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟದ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವ ಉದ್ದೇಶದಿಂದ ಉಪ ಪ್ರಧಾನಿ ಎಲ್‌.ಕೆ.ಅಡ್ವಾಣಿ ಕೈಗೊಂಡಿರುವ ಭಾರತ ಉದಯ ಯಾತ್ರೆ ಮಾರ್ಚ್‌ 12 ರಂದು ರಾಜ್ಯಕ್ಕೆ ಆಗಮಿಸಲಿದೆ.

ತಮಿಳುನಾಡಿನಿಂದ ಮಾರ್ಚ್‌ 12 ಕ್ಕೆ ಬೆಂಗಳೂರಿಗೆ ಭಾರತ ಉದಯ ಯಾತ್ರೆ ಆಗಮಿಸಲಿದೆ. ಅಂದು ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಉಪ ಪ್ರಧಾನಿ ಅಡ್ವಾಣಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವರು.

ಬೆಂಗಳೂರಿನಿಂದ ಶಿವಮೊಗ್ಗ (ಮಾ.13), ಹುಬ್ಬಳ್ಳಿ (ಮಾ.14) ಹಾಗೂ ಬಿಜಾಪುರ (ಮಾ.15)ಗಳಲ್ಲಿ ಭಾರತ ಉದಯ ಯಾತ್ರೆ ಸಾಗಲಿದೆ. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ಬಹುತೇಕ ನಾಯಕರು ಅಡ್ವಾಣಿ ಅವರೊಂದಿಗಿರುವರು. ಭಾರತ ಉದಯ ಯಾತ್ರೆಯ ಯಶಸ್ಸಿಗಾಗಿ ಎಲ್ಲ ಸಿದ್ಧತೆಗಳನ್ನು ನಡೆಸಲು ಬಿಜೆಪಿ ಜಿಲ್ಲಾ ಘಟಕಗಳು ಈಗಾಗಲೇ ಸಿದ್ಧತೆ ನಡೆಸಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+