ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾ.12-15 : ರಾಜ್ಯದಲ್ಲಿ ಅಡ್ವಾಣಿ ‘ಭಾರತ ಉದಯ ಯಾತ್ರೆ’

By Staff
|
Google Oneindia Kannada News

ಮಾ.12-15 : ರಾಜ್ಯದಲ್ಲಿ ಅಡ್ವಾಣಿ ‘ಭಾರತ ಉದಯ ಯಾತ್ರೆ’
ಬೆಂಗಳೂರು, ಶಿವಮೊಗ್ಗ , ಹುಬ್ಬಳ್ಳಿ, ಬಿಜಾಪುರಗಳಲ್ಲಿ ಬಹಿರಂಗ ಸಭೆ

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟದ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವ ಉದ್ದೇಶದಿಂದ ಉಪ ಪ್ರಧಾನಿ ಎಲ್‌.ಕೆ.ಅಡ್ವಾಣಿ ಕೈಗೊಂಡಿರುವ ಭಾರತ ಉದಯ ಯಾತ್ರೆ ಮಾರ್ಚ್‌ 12 ರಂದು ರಾಜ್ಯಕ್ಕೆ ಆಗಮಿಸಲಿದೆ.

ತಮಿಳುನಾಡಿನಿಂದ ಮಾರ್ಚ್‌ 12 ಕ್ಕೆ ಬೆಂಗಳೂರಿಗೆ ಭಾರತ ಉದಯ ಯಾತ್ರೆ ಆಗಮಿಸಲಿದೆ. ಅಂದು ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಉಪ ಪ್ರಧಾನಿ ಅಡ್ವಾಣಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವರು.

ಬೆಂಗಳೂರಿನಿಂದ ಶಿವಮೊಗ್ಗ (ಮಾ.13), ಹುಬ್ಬಳ್ಳಿ (ಮಾ.14) ಹಾಗೂ ಬಿಜಾಪುರ (ಮಾ.15)ಗಳಲ್ಲಿ ಭಾರತ ಉದಯ ಯಾತ್ರೆ ಸಾಗಲಿದೆ. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ಬಹುತೇಕ ನಾಯಕರು ಅಡ್ವಾಣಿ ಅವರೊಂದಿಗಿರುವರು. ಭಾರತ ಉದಯ ಯಾತ್ರೆಯ ಯಶಸ್ಸಿಗಾಗಿ ಎಲ್ಲ ಸಿದ್ಧತೆಗಳನ್ನು ನಡೆಸಲು ಬಿಜೆಪಿ ಜಿಲ್ಲಾ ಘಟಕಗಳು ಈಗಾಗಲೇ ಸಿದ್ಧತೆ ನಡೆಸಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X