ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿಯಾದ ದೊಣ್ಣೆಗುಡ್ಡ ದುರ್ಗಮ್ಮ!
ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿಯಾದ ದೊಣ್ಣೆಗುಡ್ಡ ದುರ್ಗಮ್ಮ!
ದುರ್ಗಮ್ಮ ಹಾಗೂ ದುರ್ಗಮ್ಮನ ಭಕುತರಂಥವರ ಸಂತತಿ ಹೆಚ್ಚಲಿ
ದುರ್ಗಮ್ಮ ದೇವಿಯ ವಾರ್ಷಿಕ ಜಾತ್ರೆಯೆಂದರೆ ಅದು ರಕ್ತ ಮಾಂಸ ಇಟ್ಟಾಡುವ ಸಮಯ. ಸಾವಿರಾರು ಕುರಿಕೋಳಿ ಕೋಣಗಳು ದುರ್ಗಮ್ಮ ದೇವಿಯ ಹೆಸರಿನಲ್ಲಿ ಬಲಿಯಾಗುವುದು ಈವರೆಗೂ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ಇತ್ತೀಚೆಗೆ (ಫೆ.22) ನಡೆದ ದುರ್ಗಮ್ಮ ದೇವಿ ಜಾತ್ರೆಯಲ್ಲಿ ಬೇರೆಯದೇ ಚಿತ್ರಗಳು. ಕುರಿಯೂ ಇಲ್ಲ , ಕೋಳಿಯೂ ಇಲ್ಲ- ದುರ್ಗಮ್ಮ ದೇವಿಗೆ ಸಂದದ್ದು ತೆಂಗಿನಕಾಯಿ, ಹಣ್ಣು , ಹೂ ಮಾತ್ರ !
ದೇವಿಯ ಹೆಸರಿನಲ್ಲಿ ನಡೆಯುವ ಪ್ರಾಣಿಬಲಿ ತಡೆಯಬೇಕೆನ್ನುವ ಕೆಲವು ಸಂಘಟನೆಗಳ ಪ್ರಯತ್ನ ಯಶಸ್ವಿಯಾಗಿದೆ. ಪ್ರಾಣಿ ಬಲಿ ವಿರೋಧಿ ಆಂದೋಲನ, ಹುಬ್ಬಳ್ಳಿ ಪಿಂಜರಾಪೋಲು ಸಂಸ್ಥೆ , ರಾಜ್ಯ ಪ್ರಾಣಿ ಕಲ್ಯಾಣ ಸಂಸ್ಥೆ , ರಾಷ್ಟ್ರೀಯ ಬಸವದಳ, ಎಬಿವಿಪಿ ಹಾಗೂ ಇನ್ನಿತರ ಸಂಸ್ಥೆಗಳು ಪ್ರಾಣಿ ಬಲಿಯ ಮೌಢ್ಯವನ್ನು ಗ್ರಾಮದ ಜನತೆಗೆ ಮನದಟ್ಟು ಮಾಡಿಸಲು ಯಶಸ್ವಿಯಾಗಿವೆ.
ಕೊಪ್ಪಳ ಜಿಲ್ಲಾಡಳಿತ ಹಾಗೂ ಜೈನಧರ್ಮದ ಬಂಧುಗಳು ಕೂಡ ಪ್ರಾಣಿ ಬಲಿ ತಡೆಯುವ ಆಂದೋಲನದಲ್ಲಿ ಭಾಗಿಯಾಗಿದ್ದರು. ಇದರಿಂದಾಗಿ ಈ ಬಾರಿ ಬಲಿಪೀಠದಲ್ಲಿ ಕಂಡುಬಂದದ್ದು ತೆಂಗಿನಕಾಯಿಗಳ ರಾಶಿ ಮಾತ್ರ. ಭಕ್ತರ ಬದಲಾದ ವರ್ತನೆ ಕಂಡು ದುರ್ಗಮ್ಮ ದೇವಿಗೂ ಸಂತೋಷವಾಗಿರಬೇಕು.
ದಾವಣಗೆರೆಯಲ್ಲಿ ರಕ್ತದೋಕುಳಿ :
ದೊಣ್ಣೆಗುಡ್ಡದ ದುರ್ಗಮ್ಮ ಮಾಂಸಾಹಾರ ತ್ಯಜಿಸಿ ಮೇಲ್ಪಂಕ್ತಿಯಾದರೆ, ದಾವಣಗೆರೆಯ ದುಗ್ಗಮ್ಮ ದೇವಿ ಜಾತ್ರೆಯಲ್ಲಿ (ಮಾ.4) ರಕ್ತದ ಕೋಡಿಯೇ ಹರಿದಿದೆ.
30 ಸಾವಿರಕ್ಕೂ ಹೆಚ್ಚು ಕುರಿ, 50 ಸಾವಿರಕ್ಕೂ ಹೆಚ್ಚು ಕೋಳಿ ಹಾಗೂ ಐದಾರು ಕೋಣಗಳನ್ನು ದುಗ್ಗಮ್ಮ ದೇವಿ ಹೆಸರಲ್ಲಿ ಬಲಿ ಕೊಡಲಾಗಿದೆಯಂತೆ !
ಎಲ್ಲ ಊರುಗಳ ಶಕ್ತಿದೇವತೆಯರೂ ಸಸ್ಯಾಹಾರಿಗಳಾದರೆ ಎಷ್ಟು ಚೆಂದ, ಅಲ್ಲವೇ ?
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications