ಕಾಂಗೈಸೋಲಿಗಾಗಿ ದೇವೇಗೌಡರ ದಳಕ್ಕೆ ಶ್ರೀನಿವಾಸಪ್ರಸಾದ್
ಕಾಂಗೈಸೋಲಿಗಾಗಿ
ದೇವೇಗೌಡರ
ದಳಕ್ಕೆ
ಶ್ರೀನಿವಾಸಪ್ರಸಾದ್
ಮಂತ್ರಿ
ಸ್ಥಾನಕ್ಕೆ
ರಾಜೀನಾಮೆ,
ಪ್ರಸಕ್ತ
ಚುನಾವಣೆಗಳಲ್ಲಿ
ಸ್ಪರ್ಧೆ
ಇಲ್ಲ
ಕೇಂದ್ರ ಸಚಿವ ಸ್ಥಾನಕ್ಕೆ ತಮ್ಮ ರಾಜಧಾನಿಯನ್ನು ಪ್ರಧಾನಿ ವಾಜಪೇಯಿ ಅವರಿಗೆ ಫ್ಯಾಕ್ಸ್ ಮೂಲಕ ಕಳುಹಿಸಲಾಗಿದೆ. ರಾಜೀನಾಮೆ ತಲುಪಿರುವ ಕುರಿತು ಪ್ರಧಾನಿಗಳಿಂದ ಉತ್ತರವೂ ಬಂದಿದೆ ಎಂದು ಜಾತ್ಯತೀತ ಜನತಾದಳಕ್ಕೆ ಸೇರಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ ಪ್ರಸಾದ್ ಹೇಳಿದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಪ್ರಮುಖ ಉದ್ದೇಶದಿಂದ ಜಾತ್ಯತೀತ ಜನತಾದಳಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಈ ಮುನ್ನ ಸಮತಾ ಪಕ್ಷದಲ್ಲಿದ್ದ ಶ್ರೀನಿವಾಸ ಪ್ರಸಾದ್ ಹೇಳಿದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಜೆಂಡಾವನ್ನು ಬಿಜೆಪಿ ಗಾಳಿಗೆ ತೂರಿದೆ ಎಂದು ಅವರು ಆಪಾದಿಸಿದರು.
ಶ್ರೀನಿವಾಸಪ್ರಸಾದ್ರನ್ನು ಪಕ್ಷಕ್ಕೆ ಸ್ವಾಗತಿಸಿದ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಸಿದ್ಧರಾಮಯ್ಯ- ಶ್ರೀನಿವಾಸ ಪ್ರಸಾದ್ರ ಸೇರ್ಪಡೆಯಿಂದ ಪಕ್ಷ ಬಲಗೊಂಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿಗಳನ್ನು ಸೋಲಿಸುವ ಪಕ್ಷದ ಸ್ಥೈರ್ಯ ಇನ್ನಷ್ಟು ವೃದ್ಧಿಸಿದೆ ಎಂದರು.
(ಪಿಟಿಐ)
ಮುಖಪುಟ / ವಾರ್ತೆಗಳು