Get Updates
Get notified of breaking news, exclusive insights, and must-see stories!

ಅತ್ತೆಗೆ ‘ಕೈ’ಕೊಟ್ಟು ಕಾಂಗ್ರೆಸ್‌ ‘ಕೈ’ ಹಿಡಿದ ನಾಗಪ್ಪನವರ ಅಳಿಯ

ಅತ್ತೆಗೆ ‘ಕೈ’ಕೊಟ್ಟು ಕಾಂಗ್ರೆಸ್‌ ‘ಕೈ’ ಹಿಡಿದ ನಾಗಪ್ಪನವರ ಅಳಿಯ
ವೀರಪ್ಪನ್‌ ಪ್ರಕರಣದಲ್ಲಿ ಸರ್ಕಾರದ ಪಾತ್ರಕ್ಕೆ ಕಿರಣ್‌ ತೃಪ್ತಿ

ಬೆಂಗಳೂರು : ವೀರಪ್ಪನ್‌ ಬಂಧನದಲ್ಲಿರುವಾಗ ಹತರಾದ ಮಾಜಿ ಸಚಿವ ನಾಗಪ್ಪನವರ ಅಳಿಯ ಡಾ. ಕಿರಣ್‌ ಪಟೇಲ್‌ ಮಾ.3ರ ಗುರುವಾರ ಕಾಂಗೈಗೆ ಸೇರಿದರು. ನಾಗಪ್ಪ ಅಪಹರಣದ ಸಂದರ್ಭದಲ್ಲಿ ಕೃಷ್ಣ ಸರಕಾರವನ್ನು ಕಟುವಾಗಿ ಟೀಕಿಸಿದ್ದ ಕಿರಣ್‌, ಕೃಷ್ಣ ಅವರ ಸಮ್ಮುಖದಲ್ಲೇ ಕಾಂಗ್ರೆಸ್ಸಿಗರಾದರು.

ಕೃಷ್ಣ ಸರಕಾರ ನಾಗಪ್ಪನವರನ್ನು ಒತ್ತೆಯಿಂದ ಬಿಡಿಸಲು ಪ್ರಯತ್ನ ಪಟ್ಟಿತ್ತು. ದುರಾದೃಷ್ಟ ವಶಾತ್‌ ಆ ಪ್ರಯತ್ನ ಫಲಕಾರಿಯಾಗದೆ, ನಾಗಪ್ಪ ಚೆಂಗಾಡಿಯಲ್ಲಿ ಹೆಣವಾಗಿ ದೊರೆತರು. ಪ್ರಕರಣದ ಕುರಿತಂತೆ ಸರ್ಕಾರ ಹಾಗೂ ನಮ್ಮ ನಡುವೆ ಸಂವಹನದ ಕೊರತೆಯಿತ್ತು ಎಂದು ಕಾಂಗ್ರೆಸ್‌ಗೆ ಸೇರ್ಪಡೆಯಾದ ಸಂದರ್ಭದಲ್ಲಿ ಕಿರಣ್‌ ಹೇಳಿದರು.

ನಾಗಪ್ಪನವರ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂಬ ಮನವಿಯನ್ನು ಹೈಕೋರ್ಟ್‌ನಿಂದ ಹಿಂತೆಗೆಯುವುದರ ಕುರಿತು ಆಲೋಚಿಸಿ ನಿರ್ಧಾರ ಕೈಗೊಳ್ಳುವೆ. ನಾವು ಕಳೆದ ಒಂದೂವರೆ ವರ್ಷದಲ್ಲಿ ಸತ್ಯದ ಸಮೀಪ ಬರಲು ಪ್ರಯತ್ನಿಸಿದ್ದೇವೆ. ಇತ್ತೀಚಿನ ದಿನಗಳಲ್ಲಿ ಪ್ರಕರಣ ಕುರಿತು ಮುಖ್ಯಮಂತ್ರಿ ಕೃಷ್ಣ ಅವರೊಂದಿಗೆ ಚರ್ಚೆ ಮಾಡಿರುವುದಾಗಿ ತಿಳಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+