ವೀರಪ್ಪನ್ ಹಿಡಿಯೋದು ಹೇಗೆ ? ಇಸ್ರೇಲ್ ತಂಡದಿಂದ ವರದಿ
ವೀರಪ್ಪನ್ ಹಿಡಿಯೋದು ಹೇಗೆ ? ಇಸ್ರೇಲ್ ತಂಡದಿಂದ ವರದಿ
ವರದಿ ಸಿದ್ಧಪಡಿಸುತ್ತಿರುವ ಇಸ್ರೇಲ್ ಮಿಲಿಟರಿ ಅಂತರ್ ಶಿಸ್ತು ಮಂಡಳಿ ತಂಡ
ಕರ್ನಾಟಕ ವಿಶೇಷ ಕಾರ್ಯಪಡೆಗೆ ವೀರಪ್ಪನ್ ಶಿಕಾರಿ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿರುವಾಗ- ‘ವೀರಪ್ಪನ್ ಬಂಧನ ಕಾರ್ಯ ಸಾಧ್ಯತೆ’ ಎನ್ನುವ ವರದಿಯನ್ನು ಇಸ್ರೇಲ್ನ ಭದ್ರತಾ ತಜ್ಞರ ತಂಡವೊಂದು ಸಿದ್ಧಪಡಿಸಿ, ಶೀಘ್ರದಲ್ಲೇ ರಾಜ್ಯಸರಕಾರಕ್ಕೆ ಸಲ್ಲಿಸಲಿದೆ.
ರಾಜ್ಯ ಸರಕಾರದ ಆಹ್ವಾನದ ಮೇರೆಗೆ 2004ರ ಜನವರಿಯಲ್ಲಿ ಇಸ್ರೇಲ್ ಮಿಲಿಟರಿ ಅಂತರ್ ಶಿಸ್ತು ಮಂಡಳಿಯ ತಂಡವೊಂದು ಬೆಂಗಳೂರಿಗೆ ಆಗಮಿಸಿದೆ. ಈ ಸಮಿತಿ ವೀರಪ್ಪನ್ ಬಂಧನ ಸಾಧ್ಯಾಸಾಧ್ಯತೆ ಕುರಿತು ಅಧ್ಯಯನ ನಡೆಸುತ್ತಿದೆ. ಈ ತಂಡವು ತಮ್ಮ ಪರಿಣತಿಯನ್ನು ಕರ್ನಾಟಕ ಪಡೆಗೆ ಧಾರೆ ಎರೆಯಲಿದೆ ಎಂದು ಇಸ್ರೇಲಿ ಪತ್ರಿಕೆಯಾಂದು ವರದಿ ಮಾಡಿದೆ.
ಈ ಹಿಂದೆ ವೀರಪ್ಪನ್ ಶೀಘ್ರ ಬಂಧನಕ್ಕಾಗಿ ಯಾವುದೇ ದೇಶದ ತಂತ್ರಜ್ಞಾನ ಬಳಸಿಕೊಳ್ಳಲು ನಾವು ಸಿದ್ಧರಿದ್ಧೇವೆ ಎಂದು ಪೊಲೀಸ್ ಮಹಾನಿರ್ದೇಶಕ ಟಿ. ಮಡಿಯಾಳ್ ಹೇಳಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್












Click it and Unblock the Notifications