ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡ್ವಾಣಿ ನೇತೃತ್ವದಲ್ಲಿ ಬಿಜೆಪಿಯ ‘ಭಾರತ ಉದಯ’ ರಥ ಯಾತ್ರೆ

By Staff
|
Google Oneindia Kannada News

ಅಡ್ವಾಣಿ ನೇತೃತ್ವದಲ್ಲಿ ಬಿಜೆಪಿಯ ‘ಭಾರತ ಉದಯ’ ರಥ ಯಾತ್ರೆ
ಕನ್ಯಾಕುಮಾರಿಯಿಂದ ಅಮೃತಸರದವರೆಗೆ ಸಂಚಾರ, ಎನ್‌ಡಿಎ ಸಾಧನೆಗಳ ಬಿತ್ತರ

ನವದೆಹಲಿ : ಭಾರತೀಯ ಜನತಾ ಪಕ್ಷವನ್ನು ಮತ್ತೊಮ್ಮೆ ಮುಂಚೂಣಿಗೆ ತರಲು ರಾಷ್ಟ್ರದ ಉದ್ದಗಲಕ್ಕೂ ಸಂಚರಿಸುತ್ತಿರುವ ಉಪ ಪ್ರಧಾನಿ ಎಲ್‌.ಕೆ.ಅಡ್ವಾಣಿ ಮತ್ತೊಂದು ರಥಯಾತ್ರೆಗೆ ಸಿದ್ಧತೆ ನಡೆಸಿದ್ದಾರೆ.

ಕಾಂಗ್ರೆಸ್‌ನ ಸೋನಿಯಾ ಗಾಂಧಿ ಅವರ ರಸ್ತೆ ರ್ಯಾಲಿಗೆ ಉತ್ತರವೆಂಬಂತೆ ಮಾರ್ಚ್‌ 15ರಿಂದ ಅಡ್ವಾಣಿ ನೇತೃತ್ವದಲ್ಲಿ ರಥಯಾತ್ರೆಯನ್ನು ಬಿಜೆಪಿ ಸಂಘಟಿಸಿದೆ. ಈ ಯಾತ್ರೆಯನ್ನು ‘ಭಾರತ ಉದಯ’ ಎಂದು ಹೆಸರಿಸಲಾಗಿದೆ. ಈ ಮುನ್ನಿನ ರಥಯಾತ್ರೆಗಳ ಭಾರೀ ಯಶಸ್ಸಿನಿಂದ ‘ಭಾರತ ಉದಯ’ ರಥಯಾತ್ರೆಯನ್ನು ಬಿಜೆಪಿ ಹಮ್ಮಿಕೊಂಡಿದೆ.

ಕನ್ಯಾಕುಮಾರಿಯಿಂದ ಹೊರಟು ಅಮೃತಸರದವರೆಗೂ ‘ಭಾರತ ಉದಯ’ ರಥಯಾತ್ರೆ ನಡೆಯಲಿದೆ ಎಂದು ತಲುಪಲಿದೆ. ಯಾತ್ರೆಯುದ್ದಕ್ಕೂ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸರ್ಕಾರದ ಸಾಧನೆಗಳನ್ನು ಬಿಂಬಿಸಲಾಗುವುದು. ಪ್ರಧಾನಿ ವಾಜಪೇಯಿ ಈ ರಥಯಾತ್ರೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಬಿಜೆಪಿ ವಕ್ತಾರ ಮುಖ್ತಾರ್‌ ಅಬ್ಬಾಸ್‌ ನಕ್ವಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X