ಜಾಣ ವಿದ್ಯಾರ್ಥಿಯಂತೆ ಚುನಾವಣಾ ಪರೀಕ್ಷೆಗೆ ಸಜ್ಜು - ಅಡ್ವಾಣಿ
ಜಾಣ
ವಿದ್ಯಾರ್ಥಿಯಂತೆ
ಚುನಾವಣಾ
ಪರೀಕ್ಷೆಗೆ
ಸಜ್ಜು
-
ಅಡ್ವಾಣಿ
ಮುಂದಿನ
ಐದು
ವರ್ಷಗಳಲ್ಲೂ
ವಾಜಪೇಯಿ
ನೇತೃತ್ವದಲ್ಲಿ
ಎನ್ಡಿಎ
ಸರ್ಕಾರ
ಅಟಲ್ ಸಂದೇಶ ಯಾತ್ರೆಗೆ ಫೆ.29ರಂದು ಚಾಲನೆ ನೀಡಿ, ಭಾರೀ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಡ್ವಾಣಿ- ಎಂಥ ಕಠಿಣ ಪ್ರಶ್ನೆಗೂ ಉತ್ತರಿಸಲು ಸಿದ್ಧತೆ ನಡೆಸಿರುವ ಜಾಣ ವಿದ್ಯಾರ್ಥಿಯಂತೆ ಚುನಾವಣೆ ಎನ್ನುವ ಪರೀಕ್ಷೆಯನ್ನು ಎದುರಿಸಲು ಬಿಜೆಪಿ ಸಜ್ಜಾಗಿದೆ. ಈ ಪರೀಕ್ಷೆಯಲ್ಲಿ ಬಿಜೆಪಿಗೆ ಪ್ರಥಮ ದರ್ಜೆ ಖಚಿತ ಎಂದರು.
ಕಳೆದ 6 ವರ್ಷಗಳಲ್ಲಿ ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟ ಸರ್ಕಾರ ತನ್ನ ಸ್ಥಿರತೆಯನ್ನು ವಿಶ್ವಕ್ಕೆ ತೋರಿಸಿದೆ. ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ವಾಜಪೇಯಿ ಅವರು ಮುಂದಿನ 5 ವರ್ಷಗಳ ಕಾಲವೂ ಸರ್ಕಾರದ ನೇತೃತ್ವ ವಹಿಸುವ ಸಾಧ್ಯತೆಗಳು ನಿಚ್ಚಳವಾಗಿವೆ ಎಂದು ಉಪ ಪ್ರಧಾನಿ ಹೇಳಿದರು.
ತುಮಕೂರಿನ ಸಭೆಯಲ್ಲಿ ಅಡ್ವಾಣಿಯವರು ಮಾತನಾಡುತ್ತಿರುವ ಸಂದರ್ಭದಲ್ಲೇ ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿತು. ಈ ಕುರಿತು ಪ್ರತಿಕ್ರಿಯಿಸಿದ ಅಡ್ವಾಣಿ- ತುಮಕೂರಿಗೆ ಅನೇಕ ಸಲ ಬಂದಿದ್ದೇನೆ. ಆದರೆ, ಚುನಾವಣಾ ದಿನಾಂಕಗಳು ಪ್ರಕಟವಾದ ಈ ಹೊತ್ತು ತುಮಕೂರಿನಲ್ಲಿದ್ದೇನೆ. ತುಮಕೂರನ್ನು ನಾನು ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ ಎಂದರು.
ಮಂಗಳೂರಿನಲ್ಲಿ ಜರುಗಿದ ಭಾರತ ಮಾತಾ ಪೂಜಾ ಕಾರ್ಯಕ್ರಮದಲ್ಲೂ ಉಪ ಪ್ರಧಾನಿ ಅಡ್ವಾಣಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು