‘ಜನತಾ’ ಕೈಬಿಟ್ಟು ಎನ್ಡಿಎ ಜೊತೆಯಿರಲು ಪ್ರಗತಿಪರರ ಒಲವು
‘ಜನತಾ’
ಕೈಬಿಟ್ಟು
ಎನ್ಡಿಎ
ಜೊತೆಯಿರಲು
ಪ್ರಗತಿಪರರ
ಒಲವು
ಸಾಲು
ಸಾಲು
ವಲಸೆಯಿಂದ
ಕಂಗೆಡದೆ
ಅಸ್ತಿತ್ವ
ಉಳಿಸಿಕೊಳ್ಳುವೆವು
-ಬೊಮ್ಮಾಯಿ
ನೇಗಿಲು ಹೊತ್ತ ರೈತನ ಗುರುತಿನ ಜನತಾ ಪಕ್ಷದೊಂದಿಗೆ ಪ್ರಗತಿಪರ ಜನತಾದಳ ವಿಲೀನ ಹೊಂದುವ ಕುರಿತು ವದಂತಿಗಳು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿದ್ದವು. ಈ ವದಂತಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಪ್ರಗತಿಪರ ದಳದ ರಾಷ್ಟ್ರಾಧ್ಯಕ್ಷ ಎಸ್.ಆರ್.ಬೊಮ್ಮಾಯಿ, ತಮ್ಮ ಪಕ್ಷ ಸ್ವತಂತ್ರ ಅಸ್ತಿತ್ವ ಉಳಿಸಿಕೊಳ್ಳುತ್ತದೆ ಎಂದಿದ್ದಾರೆ.
ಫೆ.28ರ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್- ಎನ್ಡಿಎ ಜೊತೆ ಒಂದಾಗಿ ಸಾಗಲು ಪ್ರಗತಿಪರ ಜನತಾದಳ ನಿರ್ಧರಿಸಿದೆ ಎಂದು ಪ್ರಕಟಿಸಿದರು.
ಈಚಿನ ಬೆಳವಣಿಗೆಗಳಲ್ಲಿ ಜನತಾ ಪಕ್ಷದೊಂದಿಗೆ ಚುನಾವಣಾ ಹೊಂದಾಣಿಕೆಯನ್ನು ಮಾಡಿಕೊಳ್ಳದಿರಲು ಪ್ರಗತಿಪರರು ನಿರ್ಧರಿಸಿದ್ದಾರೆ. ಇದರಿಂದಾಗಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟದೊಂದಿಗೆ ಪ್ರಗತಿಪರ ದಳ ಹೊಂದಾಣಿಕೆ ಮಾಡಿಕೊಳ್ಳುವ ನಿರೀಕ್ಷೆಯಿದೆ.
ಜನತಾ ಪಕ್ಷದ ಜೊತೆಗಿನ ಹೊಂದಾಣಿಕೆ ಕುರಿತಾದ ಮಾತುಕತೆಗೆ ಎಬಿಪಿಜೆಡಿ ನಾಯಕರು ಫೆ.27ರಂದು ಸಭೆ ಸೇರಿದ್ದರು. ಸಾಧ್ಯಾಸಾಧ್ಯತೆಗಳು ಮತ್ತು ಪಕ್ಷದ ಕಾರ್ಯಕರ್ತರ ನಿಲುವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ಹೊಂದಾಣಿಕೆ ಪ್ರಸ್ತಾವವನ್ನು ಕೈಬಿಡಲಾಯಿತು. ಎನ್ಡಿಎ ಜೊತೆ ಹೊಂದಾಣಿಕೆ ಕುರಿತು ಮಾತುಕತೆ ನಡೆಸುತ್ತಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಸಂಭವನೀಯ ಆಭ್ಯರ್ಥಿಗಳ ಪಟ್ಟಿಯನ್ನು ಆಯಾಯ ಜಿಲ್ಲೆಯ ಅಧ್ಯಕ್ಷರಿಂದ ಪಕ್ಷ ಪಡೆಯಲಿದೆ. ಶೀಘ್ರದಲ್ಲೇ ಆಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು