Get Updates
Get notified of breaking news, exclusive insights, and must-see stories!

ದಳಕ್ಕೆ ತರ್ಪಣ, ‘ಪ್ರಗತಿಪರ’ ರಮೇಶ್‌ ಕುಮಾರ್‌ ಕೃಷ್ಣಾರ್ಪಣ

ದಳಕ್ಕೆ ತರ್ಪಣ, ‘ಪ್ರಗತಿಪರ’ ರಮೇಶ್‌ ಕುಮಾರ್‌ ಕೃಷ್ಣಾರ್ಪಣ
ಚುನಾವಣೆ ನಂತರ ಕಾಂಗ್ರೆಸ್‌ ಇನ್ನಷ್ಟು ಬಲಿಷ್ಠ -ಮುಖ್ಯಮಂತ್ರಿ ಕೃಷ್ಣ ವಿಶ್ವಾಸ

ಬೆಂಗಳೂರು : ಅಖಿಲ ಭಾರತ ಪ್ರಗತಿಪರ ಜನತಾದಳದ ನಾಯಕ ಹಾಗೂ ವಿಧಾನಸಭೆಯ ಮಾಜಿ ಸಭಾಪತಿ ಎಂ. ರಮೇಶ್‌ಕುಮಾರ್‌ ಮತ್ತು ಮಾಜಿ ಸಚಿವ ಎಸ್‌.ಎಸ್‌. ಪಾಟೀಲ್‌ ಫೆ.26ರ ಗುರುವಾರ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದರು.

ಪ್ರಗತಿಪರ ಜನತಾದಳದ ಇಬ್ಬರು ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ - ಕಳೆದ ಚುನಾವಣೆಗಿಂತ ಹೆಚ್ಚಿನ ಸೀಟುಗಳನ್ನು ಕಾಂಗ್ರೆಸ್‌ ಈ ಬಾರಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆದರೆ ಒಟ್ಟು ಗೆಲ್ಲುವ ಸಂಖ್ಯೆ ಹೇಳಲು ಮುಖ್ಯಮಂತ್ರಿ ನಿರಾಕರಿಸಿದರು.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗೈ ಸ್ಪಷ್ಟ ಬಹುಮತ ಪಡೆಯಲಿದೆ. ಆ ಮೂಲಕ ಅಧಿಕಾರಕ್ಕೆ ಮರಳಲಿದೆ ಎಂದು ಕೃಷ್ಣ ಹೇಳಿದರು.

ಸ್ವಲ್ಪ ದಿನಗಳ ಹಿಂದಷ್ಟೇ 11 ಎಪಿಜೆಡಿ ನಾಯಕರು ದೆಹಲಿಯಲ್ಲಿ ಕಾಂಗೈ ಸೇರಿದ್ದರು. ಆ ಸಂದರ್ಭದಲ್ಲಿ ರಮೇಶ್‌ಕುಮಾರ್‌ ಕಾಂಗ್ರೆಸ್‌ ಸೇರಬೇಕಿತ್ತು . ಆದರೆ ತಮ್ಮ ಅಭಿಮಾನಿಗಳ ವಿರೋಧ ಹಾಗೂ ಶ್ರೀನಿವಾಸಪುರ ಕಾಂಗ್ರೆಸ್‌ ಶಾಸಕರ ಪ್ರಬಲ ವಿರೋಧದಿಂದಾಗಿ ರಮೇಶ್‌ಕುಮಾರ್‌ ಕಾಂಗ್ರೆಸ್‌ ಸೇರ್ಪಡೆ ಸಾಧ್ಯವಾಗಿರಲಿಲ್ಲ .

(ಪಿಟಿಐ)

Post your views

ಮುಖಪುಟ / ಕೃಷ್ಣಗಾರುಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+