ನೌಕರರ ಸಂಪು : ಬ್ಯಾಂಕ್ ಸೇವೆ ಅಸ್ತವ್ಯಸ್ತ , ರಸ್ತೆಗಿಳಿಯದ ಆಟೊ
ನೌಕರರ
ಸಂಪು
:
ಬ್ಯಾಂಕ್
ಸೇವೆ
ಅಸ್ತವ್ಯಸ್ತ
,
ರಸ್ತೆಗಿಳಿಯದ
ಆಟೊ
ಕಪ್ಪು
ಪಟ್ಟಿ
ಧರಿಸಿ
ಕಚೇರಿಗೆ
ಬಂದ
ರಾಜ್ಯದ
ಸರ್ಕಾರಿ
ನೌಕರರು
ರಾಜ್ಯದ ಬಹುತೇಕ ಭಾಗಗಳಲ್ಲಿ ಬ್ಯಾಂಕ್ ಮತ್ತು ವಿಮಾ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದು , ಬ್ಯಾಂಕಿಂಗ್ ಸೇವೆ ಅಸ್ತವ್ಯಸ್ತಗೊಂಡಿದೆ. ಬೆಂಗಳರಿನ ಕೆನರಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ಕೇಂದ್ರ ಕಛೇರಿಯಲ್ಲಿ ಮಂಗಳವಾರ ಜನಸಂದಣಿಯ ದಟ್ಟಣೆಯಿರಲಿಲ್ಲ. ಸ್ಟೇಟ್ ಬ್ಯಾಂಕ್ ಆಪ್ ಮೈಸೂರು ಕೇಂದ್ರ ಕಛೇರಿ ಮುಂದೆ ಮುಷ್ಕರ ನಿರತ ನೌಕರರ ಪ್ರತಿಭಟನಾ ಸಭೆ ನಡೆಯಿತು.
ಬಿಜೆಪಿಯ ಭಾರತ್ ಮಜ್ದೂರ್ ಸಂಘ ಮತ್ತು ಕಾಂಗ್ರೆಸ್ನ ಇಂಟೆಕ್ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಲಿಲ್ಲ. ಕೆಲವು ಬ್ಯಾಂಕ್ಗಳು ಇಂದಿನ ಮಟ್ಟಿಗೆ ಬಾಗಿಲು ಮುಚ್ಚಿದ್ದವು. ಶಿಕ್ಷಕರು ಹಾಗೂ ರಾಜ್ಯ ಸರಕಾರಿ ನೌಕರರು ಕಚೇರಿಗೆ ಬಂದರಾದರೂ, ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುವ ಮೂಲಕ ಪ್ರತಿಭಟನೆಗೆ ಬೆಂಬಲವಿತ್ತರು.
ಮಂಗಳೂರಿನಲ್ಲಿ ಮುಷ್ಕರಕ್ಕೆ ಉತ್ತಮ ಬೆಂಬಲ ದೊರೆತಿದೆ. ಜಿಲ್ಲಾ ಪಂಚಾಯತ್ ಹಾಗೂ ಮಂಗಳೂರು ಮಹಾನಗರ ಪಾಲಿಕೆಯೂ ಮುಷ್ಕರದಲ್ಲಿ ಪಾಲ್ಗೊಂಡಿವೆ.
ಬೆಂಗಳೂರಿನ 60,000ಕ್ಕೂ ಹೆಚ್ಚಿನ ರಿಕ್ಷಾಚಾಲಕರು ಗ್ಯಾಸ್ ಕಿಟ್ ಅಳವಡಿಕೆ ವಿರೋಧಿಸಿ ಇಂದು ಮುಷ್ಕರದಲ್ಲಿ ಪಾಲ್ಗೊಂಡರು. ಉಳಿದಂತೆ ಕೋಲ್ಕತ್ತ, ಚೆನ್ನೈ, ಗುಜರಾತ್, ಆಂಧ್ರ ಪ್ರದೇಶ ಮುಂತಾದೆಡೆ ಮುಷ್ಕರಕ್ಕೆ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು