ಮೆರಿಟ್ ಇದ್ದವರಿಗೆ ಮಾತ್ರ ಟಿಕೆಟ್ - ಮುಖ್ಯಮಂತ್ರಿ ಕೃಷ್ಣ ಸ್ಪಷ್ಟನೆ
ಮೆರಿಟ್ ಇದ್ದವರಿಗೆ ಮಾತ್ರ ಟಿಕೆಟ್ - ಮುಖ್ಯಮಂತ್ರಿ ಕೃಷ್ಣ ಸ್ಪಷ್ಟನೆ
ಕಾಂಗ್ರೆಸ್ ಜಯಭೇರಿ ಬಾರಿಸುವ ಕುರಿತು ಕೃಷ್ಣ ವಿಶ್ವಾಸ
ಕಾಂಗ್ರೆಸ್ನ ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ನೀಡುವ ವಿಷಯದಲ್ಲಿಯೂ ಮೆರಿಟ್ ಪರಿಗಣಿಸಲಾಗುವುದು. ಬೇರೆ ಪಕ್ಷಗಳಿಂದ ಕಾಂಗ್ರೆಸ್ಗೆ ಆಗಮಿಸಿರುವವರಿಗೆ ಕೂಡಾ ಮೆರಿಟ್ ಆಧಾರದಲ್ಲಿ ಮಾತ್ರ ಟಿಕೆಟ್ ದೊರೆಯಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕೃಷ್ಣ ತಿಳಿಸಿದರು.
ಕಾಂಗ್ರೆಸ್ಗೆ ಇತರ ಪಕ್ಷಗಳಿಂದ, ಪ್ರಮುಖವಾಗಿ ಪ್ರಗತಿಪರ ಜನತಾದಳದಿಂದ ವಲಸೆ ಬರುತ್ತಿರುವ ವ್ಯಕ್ತಿಗಳಿಂದ ಪಕ್ಷದೊಳಗಿನ ಕೆಲವರು ಅಸಮಾಧಾನಗೊಂಡಿದ್ದು ಟಿಕೆಟ್ ಕಳಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಕೃಷ್ಣ - ವಲಸೆಯಲ್ಲಿ ಯಾವುದೇ ಗೊಂದಲ ಇಲ್ಲ . ಟಿಕೆಟ್ಗೆ ಮೆರಿಟ್ ಆಧಾರವಾಗಿರುತ್ತದೆ ಎನ್ನುವುದರಲ್ಲಿಯೂ ಗೊಂದಲವಿಲ್ಲ ಎಂದರು.
ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಕುರಿತು ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು. ತಾವು ಯಾವುದೇ ಪಕ್ಷವನ್ನು ಒಡೆಯುತ್ತಿಲ್ಲ ಹಾಗೂ ಪಕ್ಷಗಳಲ್ಲಿ ಬಿರುಕು ಉಂಟು ಮಾಡಲು ಪ್ರಯತ್ನಿಸುತ್ತಿಲ್ಲ ಎಂದೂ ಕೃಷ್ಣ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications