ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ವಿಧಾನಸಭೆ ವಿಸರ್ಜನೆ ; ಜಂಟಿ ಚುನಾವಣೆಗೆ ವೇದಿಕೆ ಸಿದ್ಧ

By Staff
|
Google Oneindia Kannada News

ರಾಜ್ಯ ವಿಧಾನಸಭೆ ವಿಸರ್ಜನೆ ; ಜಂಟಿ ಚುನಾವಣೆಗೆ ವೇದಿಕೆ ಸಿದ್ಧ
8 ತಿಂಗಳ ಅವಧಿ ಇರುವಾಗಲೇ ವಿಧಾನಸಭೆ ವಿಸರ್ಜನೆ

ಬೆಂಗಳೂರು : ರಾಜ್ಯದ ಹನ್ನೊಂದನೇ ವಿಧಾನಸಭೆಯನ್ನು ಫೆ.23ರ ಸೋಮವಾರ ಬೆಳಗ್ಗೆ ರಾಜ್ಯಪಾಲ ಟಿ.ಎನ್‌.ಚತುರ್ವೇದಿ ವಿಸರ್ಜಿಸಿದರು.

ವಿಧಾನಸಭೆಯನ್ನು ವಿಸರ್ಜಿಸುವಂತೆ ರಾಜ್ಯ ಸಚಿವ ಸಂಪುಟ ಕಳೆದ ವಾರ ಸಲ್ಲಿಸಿದ್ದ ಶಿಫಾರ್ಸಸಿನ ಮೇರೆಗೆ, ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಸೋಮವಾರ ಬೆಳಗ್ಗೆ ವಿಧಾನಸಭೆಯನ್ನು ವಿಸರ್ಜಿಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದರೊಂದಿಗೆ ವಿಧಾನಸಭೆ ಮತ್ತು ಲೋಕಸಭೆ ಜಂಟಿ ಚುನಾವಣೆಗೆ ವೇದಿಕೆ ಸಿದ್ಧವಾದಂತಾಗಿದೆ.

2004ರ ಅಕ್ಟೋಬರ್‌ ತಿಂಗಳವರೆಗೂ ಹನ್ನೊಂದನೇ ವಿಧಾನಸಭೆಯ ಅವಧಿ ಉಳಿದಿತ್ತು . ಆದರೆ ಅವಧಿಗೆ ಮುನ್ನ ಲೋಕಸಭೆ ವಿಸರ್ಜನೆಯಾದ ಹಿನ್ನೆಲೆಯಲ್ಲಿ , ಜಂಟಿ ಚುನಾವಣೆಗೆ ಅನುವು ಮಾಡಿಕೊಡುವ ಉದ್ದೇಶದಿಂದ 8 ತಿಂಗಳ ಅವಧಿ ಇರುವಾಗಲೇ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಲು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ನಿರ್ಣಯಿಸಿದ್ದರು. ಈ ನಿರ್ಣಯ ಕೈಗೊಳ್ಳುವ ಮುನ್ನ ಅವರು ಮೀನಾಮೇಷ ಎಣಿಸಿದ್ದರು.

ರಾಜ್ಯ ವಿಧಾನಸಭಾ ಇತಿಹಾಸದಲ್ಲಿ ಅವಧಿಗೆ ಮುನ್ನ ಕೊನೆಗೊಳ್ಳುತ್ತಿರುವ ಐದನೇ ವಿಧಾನಸಭೆ ಇದಾಗಿದೆ.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X