‘ದೊಡ್ಡಮ್ಮ ಸೋನಿಯಾ ಪ್ರಧಾನಿ ಆಗುವುದ ದೇಶ ಒಪ್ಪುವುದಿಲ್ಲ’
‘ದೊಡ್ಡಮ್ಮ ಸೋನಿಯಾ ಪ್ರಧಾನಿ ಆಗುವುದ ದೇಶ ಒಪ್ಪುವುದಿಲ್ಲ’
ಬಿಜೆಪಿ ಹೊಸ್ತಿಲಲ್ಲಿ ಸಂಜಯ್ಗಾಂಧಿ ಪತ್ನೀ ಪುತ್ರ.
ದೊಡ್ಡಮ್ಮ ಸೋನಿಯಾಗಾಂಧಿಯನ್ನು ನಾನು ಗೌರವಿಸುತ್ತೇನೆ. ಆದರೆ ಅವರನ್ನು ಪ್ರಧಾನಿಯಾಗಿ ನಿರಾಕರಿಸುತ್ತೇನೆ. ಇದಕ್ಕೆ ವಿದೇಶಿ ಹುಟ್ಟು ಎಂಬುದು ಒಂದು ಅಂಶ ಮಾತ್ರ. ಇನ್ನೂ ಬೇರೆ ಅಂಶಗಳಿವೆ ಎಂದು ಸೋಮವಾರ ಸುದ್ದಿವಾಹಿನಿಯಾಂದರ ಜೊತೆ ಮಾತನಾಡಿದ ವರುಣ್ ಗಾಂಧಿ ಹೇಳಿದರು.
ಸೋನಿಯಾ ಅವರನ್ನು ಪ್ರಧಾನಿಯಾಗಿ ಒಪ್ಪುವುದಿಲ್ಲ ಎಂದ ಮಾತ್ರಕ್ಕೆ ಚುನಾವಣೆಗಳಲ್ಲಿ ಅವರ ವಿರುದ್ಧ ಕೆಲಸ ಮಾಡುತ್ತೇನೆ ಎಂದಲ್ಲ . ಸೋನಿಯಾ ಮಾತ್ರವಲ್ಲ , ಪ್ರಿಯಾಂಕಾ ಹಾಗೂ ರಾಹುಲ್ ವಿರುದ್ಧ ಕೂಡ ಮುಂದಿನ ಲೋಕಸಭಾ ಚುನಾವಣೆಗಳಲ್ಲಿ ಪ್ರಚಾರ ಮಾಡುವುದಿಲ್ಲ. ವೈಯುಕ್ತಿಕವಾಗಿ ಅವರನ್ನು ನಾನು ಗೌರವಿಸುತ್ತೇನೆ ಎಂದು ವರುಣ್ ಸ್ಪಷ್ಟಪಡಿಸಿದರು.
ಪ್ರಧಾನಿಯ ಆಯ್ಕೆ ಮಹತ್ವದ್ದಾಗಿದೆ. ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ. ಅಭಿವೃದ್ಧಿ ಹೊಂದಿದ ದೇಶವಾಗಲು ಅನುಭವ ಹೊಂದಿದ ಸೂಕ್ತ ನಾಯಕತ್ವ ಬೇಕಾಗಿದೆ. ಅದಕ್ಕಾಗಿ ವಾಜಪೇಯಿಯನ್ನು ಬೆಂಬಲಿಸುತ್ತೇನೆ ಎಂದು ಅವರು ನುಡಿದರು. ಕುಟುಂಬದ ರಾಜಕೀಯದ ವಿಭಿನ್ನ ನಿಲುವಿನ ಕುರಿತಾಗಿ ಅವರು- 20 ವರ್ಷಗಳ ಹಿಂದೆ ಎಲ್ಲ ಬೇರೆಯಾಗಿತ್ತು. ಆದರೀಗ ಕಾಲ ಬದಲಾಗಿದೆ. ಅವರು ಕಾಂಗೈಯಲ್ಲಿ ಚೆನ್ನಾಗಿದ್ದಾರೆ, ನಾವು ಬಿಜೆಪಿಯಲ್ಲಿ ಚೆನ್ನಾಗಿದ್ದೇವೆ ಎಂದರು. ಬಿಜೆಪಿ ಸೇರಲು ಆ ಪಕ್ಷದಲ್ಲಿರುವ ವಾಜಪೇಯಿ ಹಾಗೂ ಅಡ್ವಾಣಿಯವರ ನಾಯಕತ್ವ ಕಾರಣ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡುವ ಮುನ್ನ - ತಮ್ಮ ತಾಯಿ ಮನೇಕಾ ಗಾಂಧಿ ಜೊತೆ ಪ್ರಧಾನಿ ವಾಜಪೇಯಿಯನ್ನು ಅವರ ರೇಸ್ ಕೋರ್ಸ್ ನಿವಾಸದಲ್ಲಿ ವರುಣ್ಗಾಂಧಿ ಭೇಟಿ ಮಾಡಿ, ಬಿಜೆಪಿ ಸೇರುವ ತಮ್ಮ ಇರಾದೆ ವ್ಯಕ್ತಪಡಿಸಿದರು. ಮನೇಕಾ ಗಾಂಧಿ ಹಿಂದೆ ವಾಜಪೇಯಿ ಸಂಪುಟದಲ್ಲಿ ಸಚಿವೆಯಾಗಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications