Get Updates
Get notified of breaking news, exclusive insights, and must-see stories!

ಗುಲ್ಬರ್ಗಾದಲ್ಲಿ ಅಖಿಲಭಾರತ ಪ್ರಥಮ ವಚನ ಸಾಹಿತ್ಯಸಮ್ಮೇಳನ

ಗುಲ್ಬರ್ಗಾದಲ್ಲಿ ಅಖಿಲಭಾರತ ಪ್ರಥಮ ವಚನ ಸಾಹಿತ್ಯಸಮ್ಮೇಳನ
ಮಾರ್ಚ್‌ 12ರಿಂದ 14ರವರೆಗೆ ಗುಲ್ಬರ್ಗಾದಲ್ಲಿ ಶರಣರು-ಪ್ರಗತಿಪರರು

ಈಗ ವಚನ ಸಾಹಿತ್ಯ ಸಮ್ಮೇಳನದ ಸರದಿ !

ಇದೇ ಮೊದಲ ಬಾರಿಗೆ ವಚನ ಸಾಹಿತ್ಯ ಸಮ್ಮೇಳನದ ವೇದಿಕೆ ಸಿದ್ಧವಾಗುತ್ತಿದೆ. ಮೊಟ್ಟ ಮೊದಲ ಅಖಿಲ ಭಾರತ ವಚನ ಸಾಹಿತ್ಯ ಸಮ್ಮೇಳನ 2004ರ ಮಾರ್ಚ್‌ 12ರಿಂದ 14ರವರೆಗೆ ಗುಲ್ಬರ್ಗಾದಲ್ಲಿ ನಡೆಯಲಿದ್ದು , ನಾಡಿನ ಎಲ್ಲ ವೀರಶೈವ ಮಠಗಳ ಮಠಾಧೀಶರು ಹಾಗೂ ಪ್ರಸಿದ್ಧ ಬರಹಗಾರರು ಈ ಸಮ್ಮೇಳನದಲ್ಲಿ ಭಾಗಿಯಾಗುವರು.

ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಸಿದ್ಧರಾಮ ಶರಣರು ಹೇಳುವ ಪ್ರಕಾರ :

  • ಸಮ್ಮೇಳನಕ್ಕೆ ಪ್ರಗತಿಪರ ಚಿಂತಕರು ಹಾಗೂ ಸಾಮಾಜಿಕ ಚಳವಳಿಗಾರರನ್ನು ಆಹ್ವಾನಿಸಲಾಗುವುದು.
  • ಸ್ವಾಮಿ ಅಗ್ನಿವೇಶ್‌, ಅಣ್ಣಾ ಹಜಾರೆ, ಭಗವಾನ್‌ದಾಸ್‌ ತಿವಾರಿ ಹಾಗೂ ಮಾಜಿ ರಾಜ್ಯಪಾಲೆ ವಿ.ಎಸ್‌.ರಮಾದೇವಿ ಆಹ್ವಾನಿತರ ಪಟ್ಟಿಯಲ್ಲಿದ್ದಾರೆ.
  • ವಚನಗಳನ್ನು ಜನಪ್ರಿಯಗೊಳಿಸುವ ಹಾಗೂ ಇಂಗ್ಲೀಷ್‌, ಹಿಂದಿ ಮತ್ತಿತರ ಭಾಷೆಗಳಿಗೆ ಅನುವಾದಿಸುವ ಪ್ರಯತ್ನಗಳನ್ನು ಸಮ್ಮೇಳನ ಸ್ವಾಗತ ಸಮಿತಿ ಮಾಡುತ್ತಿದೆ.
  • ಸಿದ್ಧರಾಮ ಶರಣರು ಸಂಪಾದಿಸಿರುವ ಶೂನ್ಯ ಸಂಪಾದನೆ-ರಹಸ್ಯ ಕೃತಿಯ ಎರಡು ಸಂಪುಟಗಳು ಸಮ್ಮೇಳನದಲ್ಲಿ ಬಿಡುಗಡೆಯಾಗಲಿವೆ.
  • ವಚನ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲು ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರನ್ನು ಆಹ್ವಾನಿಸಲಾಗುವುದು.
  • ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಹಾಗೂ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸಮ್ಮೇಳನದಲ್ಲಿ ಪಾಲ್ಗೊಳ್ಳುವರು.
  • ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಡಾ.ಎಂ.ಎಂ.ಕಲಬುರ್ಗಿ ಅವರನ್ನು ಸಮ್ಮೇಳನದ ಅಧ್ಯಕ್ಷತೆ ವಹಿಸುವಂತೆ ಕೋರಲಾಗುವುದು.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+