Get Updates
Get notified of breaking news, exclusive insights, and must-see stories!

ಕುದುರೇಮುಖದಲ್ಲಿ ಮತ್ತೆ ಚಿಗುರೊಡೆದ ನಕ್ಸಲರ ಚಟುವಟಿಕೆಗಳು

ಕುದುರೇಮುಖದಲ್ಲಿ ಮತ್ತೆ ಚಿಗುರೊಡೆದ ನಕ್ಸಲರ ಚಟುವಟಿಕೆಗಳು
ಸರ್ಕಾರ ವಿರುದ್ಧದ ಜನತೆಯ ಅಸಮಾಧಾನವನ್ನು ಸಂಘಟನೆಗೆ ಬಳಸಿಕೊಳ್ಳುತ್ತಿರುವ ನಕ್ಸಲರು

ಕೊಪ್ಪ : ಶಂಕಿತ ನಕ್ಸಲೀಯ ಯುವತಿಯರು ಪೊಲೀಸ್‌ ದಾಳಿಯಲ್ಲಿ ಸತ್ತ ನಂತರ ತಣ್ಣಗಾಗಿದ್ದ ನಕ್ಸಲೀಯ ಚಟುವಟಿಕೆಗಳು ಕುದುರೆಮುಖ ಅರಣ್ಯಪ್ರದೇಶದಲ್ಲಿ ಮತ್ತೆ ಗರಿಗೆದರಿವೆ ಎಂದು ತಿಳಿದುಬಂದಿದೆ.

ಕಳೆದೊಂದು ವಾರದಿಂದ ಕುದುರೆಮುಖ ಅರಣ್ಯಪ್ರದೇಶದಲ್ಲಿ ಶಂಕಿತ ನಕ್ಸಲೀಯರ ಚಟುವಟಿಕೆಗಳು ಮತ್ತೆ ಕಾಣಿಸಿಕೊಂಡಿವೆ. ಮಾಗೋಡು ಮತ್ತು ಸಿಂದೋಡಿ ಬಳಿ ನಕ್ಸಲೀಯರ ಸಭೆಗಳೂ ನಡೆದಿವೆ, ನಿಲುಗುಲಿ ಪದ್ಮನಾಭ್‌ ಮತ್ತು ಆತನ 9 ಮಂದಿ ಸಂಗಡಿಗರು ಸಂಘಟನೆಯ ಕೆಲಸದಲ್ಲಿ ಮತ್ತೆ ತೊಡಗಿದ್ದಾರೆ ಎನ್ನಲಾಗಿದೆ.

ಸರ್ಕಾರದ ನಿರ್ಲಕ್ಷ್ಯದಿಂದಾಗಿ ಈ ಪ್ರದೇಶ ಅಭಿವೃದ್ಧಿಯಿಂದ ವಂಚಿತವಾಗಿದ್ದು , ಅರಣ್ಯ ಪ್ರದೇಶದ ಜನರಲ್ಲಿನ ವ್ಯಾಪಕ ಅಸಮಾಧಾನವನ್ನು ತಮ್ಮ ಚಟುವಟಿಕೆಗಳಿಗೆ ಬಳಸಿಕೊಳ್ಳಲು ನಕ್ಸಲೀಯರು ಪ್ರಯತ್ನಿಸುತ್ತಿದ್ದಾರೆ. ಕುದುರೇಮುಖ ಅರಣ್ಯಪ್ರದೇಶದಲ್ಲಿ ಇಷ್ಟೆಲ್ಲಾ ಚಟುವಟಿಕೆಗಳು ನಡೆಯುತ್ತಿದ್ದರೂ, ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ನೇತ್ತುತ್ವದ ಸಂಪುಟ- ಬೀಳ್ಕೊಡುಗೆ ಕೂಟಗಳಲ್ಲಿ , ಚುನಾವಣೆಯ ಮಂತ್ರಾಲೋಚನೆ ಸಭೆಗಳಲ್ಲಿ ಬಿಡುವಿಲ್ಲದಂತೆ ತೊಡಗಿಕೊಂಡಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+