ವಿಧಾನಸಭೆ ವಿಸರ್ಜನೆ : ಈಗ, ಇಂದು, ನಾಳೆ ಅಥವಾ ಸೆಪ್ಟಂಬರ್‌?

ವಿಧಾನಸಭೆ ವಿಸರ್ಜನೆ : ಈಗ, ಇಂದು, ನಾಳೆ ಅಥವಾ ಸೆಪ್ಟಂಬರ್‌?
ಶಾಸಕರಿಗೆ ವಿದಾಯಕೂಟ, ಚುನಾವಣೆ ಬಗ್ಗೆ ಕೃಷ್ಣ ರಹಸ್ಯ

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ವಿಸರ್ಜನೆಯ ದಿನಾಂಕವನ್ನು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಇನ್ನೂ ಗೌಪ್ಯವಾಗಿ ಉಳಿಸಿಕೊಂಡಿದ್ದಾರೆ.

ವಿಧಾನ ಸಭೆಯಲ್ಲಿ (ಫೆ.11) 2004-05 ರ ಬಜೆಟ್‌ ಕುರಿತಾದ ಚರ್ಚೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕೃಷ್ಣ - ‘ರಾಜ್ಯ ವಿಧಾನಸಭೆಗೆ ಸೆಪ್ಟಂಬರ್‌ ಮಾಸದಲ್ಲಿ ಚುನಾವಣೆ ನಡೆಯಬಹುದು. ನಾನು ಇಷ್ಟು ಶೀಘ್ರದಲ್ಲಿ ಲೋಕಸಭಾ ಚುನಾವಣೆ ನಿರೀಕ್ಷಿಸಿರಲಿಲ್ಲ. ಕೇಂದ್ರ ಸರಕಾರ ಅವಧಿಪೂರ್ವ ಚುನಾವಣೆ ಹೇರಿದೆ’ ಎಂದು ನುಡಿದರು. ಈ ಕುರಿತು ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

ಫೆ.10ರಂದು ನಡೆದ ಕಾಂಗೈ ಶಾಸಕರ ಸಭೆಯಲ್ಲಿ ಲೋಕಸಭೆಯ ಜೊತೆ ಏಕಕಾಲದಲ್ಲಿ ರಾಜ್ಯ ವಿಧಾನಸಭೆಗೂ ಚುನಾವಣೆ ನಡೆಸುವ ಅಭಿಪ್ರಾಯ ವ್ಯಕ್ತವಾಗಿತ್ತು. ಕೆಪಿಸಿಸಿ ಅಧ್ಯಕ್ಷ ಬಿ. ಜನಾರ್ಧನ ಪೂಜಾರಿ ಈ ಹಿಂದೆಯೇ, ಫೆ.12 ರಂದು ವಿಧಾನಸಭೆ ವಿಸರ್ಜನೆಯಾಗಲಿದೆ ಎಂದು ಘೋಷಿಸಿದ್ದರು. ಈ ಕುರಿತು ಕಾಂಗೈ ಹೈಕಮಾಂಡ್‌ ತನ್ನ ಅಂತಿಮ ತೀರ್ಮಾನವನ್ನು ಈವರೆಗೆ ಪ್ರಕಟಿಸಿಲ್ಲ. ‘ಇನ್ನು ಕೆಲವೇ ಗಂಟೆಗಳಲ್ಲಿ ವಿಧಾನಸಭೆ ವಿಸರ್ಜನೆಯಾಗಬಹುದು’ ಎಂದ ಸಂಪುಟ ಸಚಿವರೊಬ್ಬರ ಹೇಳಿಕೆಯೂ ಈ ನಡುವೆ ಪ್ರಕಟವಾಗಿದೆ. ಫೆ.11 ರಂದು ವಿಧಾನಸಭಾ ಅಧ್ಯಕ್ಷರು ಶಾಸಕರಿಗೆ ವಿದಾಯಕೂಟ ನೀಡಿಯಾಗಿದೆ.

ಅಂತೂ ಚಾತಕ ಪಕ್ಷಿಯಂತೆ ಚುನಾವಣೆ ದಿನಾಂಕಕ್ಕಾಗಿ ಕಾಯುತ್ತಿರುವ ವಿರೋಧ ಪಕ್ಷದವರನ್ನು ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಸತಾಯಿಸುತಿದ್ದಾರೆ. ಇದು ಅವರ ವಿನೂತನ ರಾಜಕೀಯ ಚದುರಂಗದಾಟ ಆಗಿರಬಹುದೇ?

(ಏಜನ್ಸೀಸ್‌)

Post your views

ಮುಖಪುಟ / ಕೃಷ್ಣಗಾರುಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+