ವೃತ್ತಿಪರತೆಯಲ್ಲಿ ರಾಜ್ಯದ ವಕೀಲರು ವಿಶ್ವದಲ್ಲೇ ಅತ್ಯುತ್ತಮ -ಸಲ್ಡಾನ
ವೃತ್ತಿಪರತೆಯಲ್ಲಿ ರಾಜ್ಯದ ವಕೀಲರು ವಿಶ್ವದಲ್ಲೇ ಅತ್ಯುತ್ತಮ -ಸಲ್ಡಾನ
ನ್ಯಾಯಮೂರ್ತಿ ಸಲ್ಡಾನರಿಗೆ ಕರ್ನಾಟರ ಬಾರ್ ಅಸೋಸಿಯೇಷನ್ಗಳ ಒಕ್ಕೂಟದಿಂದ ಸನ್ಮಾನ
ಕರ್ನಾಟರ ಬಾರ್ ಅಸೋಸಿಯೇಷನ್ಗಳ ಒಕ್ಕೂಟ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ (ಫೆ.10ರಂದು) ಮಾತನಾಡಿದ ಸಲ್ಡಾನ, ರಾಜ್ಯದ ವಕೀಲರ ವೃತ್ತಿಪರತೆ ಹಾಗೂ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಮುಂಬಯಿಯಲ್ಲಿದ್ದ ಕೆಲಕಾಲವನ್ನು ನೆನಪಿಸಿಕೊಂಡ ಸಲ್ಡಾನ, ಕೆಲವೊಮ್ಮೆ ತಮಗೆ ರಾಜೀನಾಮೆ ನೀಡಬೇಕು ಅನ್ನಿಸಿದ್ದುಂಟು ಎಂದರು. ಆದರೆ, 1994ರಲ್ಲಿ ಕರ್ನಾಟಕ ಹೈಕೋರ್ಟ್ಗೆ ಬಂದ ನಂತರ ರಾಜೀನಾಮೆ ನಿರ್ಧಾರ ದೂರವಾಯಿತು. ರಾಜ್ಯಕ್ಕೆ ಬಂದ ಸಂದರ್ಭದಲ್ಲಿ ತಮಗೆ 7200 ಸ್ವಾಗತ-ಅಭಿನಂದನಾ ಪತ್ರಗಳು ಬಂದಿದ್ದವು ಎಂದು ಸಲ್ಡಾನ ಹೇಳಿದರು.
ನಾನು ಹುಟ್ಟಿದ್ದು ಮಂಗಳೂರಿನಲ್ಲಾದರೂ, ಕನ್ನಡ ಮಾತನಾಡಲಿಕ್ಕೆ ಸ್ವಲ್ಪ ಕಷ್ಟ . ರಾಜ್ಯದ ಹೊರಭಾಗಗಳಲ್ಲಿ ಸುಮಾರು 32 ವರ್ಷ ಕಳೆದುದೇ ಇದಕ್ಕೆ ಕಾರಣ. ಆದರೆ ಕನ್ನಡದಲ್ಲಿ ವೇಗವಾಗಿ ಬರೆಯುತ್ತೇನೆ ಮತ್ತು ಓದುತ್ತೇನೆ ಎಂದು ಸಲ್ಡಾನ ಹೇಳಿದರು.
ನಿವೃತ್ತಿಯ ನಂತರ ಲಾಯರ್ಗಳ ಹಿತಾಸಕ್ತಿಗಾಗಿ ದುಡಿಯಲು ಚಿಂತಿಸುತ್ತಿದ್ದೇನೆ ಎಂದು ನ್ಯಾಯಮೂರ್ತಿ ಸಲ್ಡಾನ ಇದೇ ಸಂದರ್ಭದಲ್ಲಿ ಹೇಳಿದರು. ಒಕ್ಕೂಟದ ಅಧ್ಯಕ್ಷ ಮತ್ತು ಬಿಜೆಪಿ ಶಾಸಕ ಕೆ.ಎನ್.ಸುಬ್ಬಾರೆಡ್ಡಿ , ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮರಿಯಪ್ಪ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾನೂನು ಸಚಿವ ಡಿ.ಬಿ.ಚಂದ್ರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications