ಶಿಕಾರಿಪುರ ಧನದಾಹಿ ವೈದ್ಯರಿಂದಾಗಿ ಬಸ್ಟಾಂಡಲ್ಲಿ ನರಳಿದ ಗರ್ಭಿಣಿ
ಶಿಕಾರಿಪುರ ಧನದಾಹಿ ವೈದ್ಯರಿಂದಾಗಿ ಬಸ್ಟಾಂಡಲ್ಲಿ ನರಳಿದ ಗರ್ಭಿಣಿ
ಆಪದ್ಭಾಂದವನಾಗಿ ಬಂದ ಬೀಡಾ ಅಂಗಡಿ ವ್ಯಕ್ತಿ , ಪ್ರಸವ ಸುಖಾಂತ್ಯ
ಲೋಕಾಯುಕ್ತ ರ ಭೇಟಿಯ ಸಂದರ್ಭದಲ್ಲಿ , ಶಿಕಾರಿಪುರ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಹಣಕ್ಕಾಗಿ ಪೀಡಿಸುವ ಕುರಿತು ಅನೇಕ ಮಂದಿ ಅಳಲು ತೋಡಿಕೊಂಡಿದ್ದರು. ರೋಗಿಗಳಿಂದ ದುಡ್ಡು ಪಡೆಯದಂತೆ ಲೋಕಾಯುಕ್ತರು ನೀಡಿದ ಎಚ್ಚರಿಕೆ ಫಲ ನೀಡಿಲ್ಲ . ಗೀತಮ್ಮ ಎನ್ನುವ ಈ ಮಹಿಳೆ ವೈದ್ಯರ ಅಮಾನವೀಯತೆಗೆ ಸಾಕ್ಷಿಯಾಗಿದ್ದಾಳೆ.
ಶಿಕಾರಿಪುರಕ್ಕೆ 15 ಕಿಮೀ ದೂರದ ಅಂಬಿಗೊಳ್ಳದಿಂದ ಗೀತಮ್ಮ ಹಾಗೂ ಆಕೆಯ ಗಂಡ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಬಂದರು. ಗೀತಮ್ಮ ಹೆರಿಗೆ ಬೇನೆಯಿಂದ ನರಳುತ್ತಿದ್ದಳು. ಆದರೆ, ಆಕೆಗೆ ಚಿಕಿತ್ಸೆ ನೀಡಲು ವೈದ್ಯರು 500 ರುಪಾಯಿ ನೀಡುವಂತೆ ಒತ್ತಾಯಿಸಿದರು. ತಮ್ಮೊಂದಿಗೆ ಯಾವುದೇ ಹಣ ತಂದಿರದ ಗೀತಮ್ಮನ ಗಂಡ ಅಲವತ್ತುಕೊಂಡರೂ ಯಾವುದೇ ಉಪಯೋಗವಾಗಿಲ್ಲ . ಒಂದು ತಾಸಿನ ನಂತರ ವೈದ್ಯರು ಗೀತಮ್ಮನನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ.
ಆಟೋಗೆ ಹಣವಿಲ್ಲದ ಗೀತಮ್ಮ ಹಾಗೂ ಆಕೆಯ ಗಂಡ ಸರಕು ಸಾಗಣೆ ಗಾಡಿಯಲ್ಲಿ ಶಿಕಾರಿಪುರ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಆದರೆ ಬಸ್ ನಿಲ್ದಾಣದಲ್ಲಿ ಗೀತಮ್ಮನ ಪ್ರಸವ ವೇದನೆ ತಾರಕಕ್ಕೇರಿದೆ. ಗೀತಮ್ಮನ ಕಿರುಚಾಟ ಕೇಳಿದ ಬೀಡಾ ಅಂಗಡಿಯ ಮಾಲೀಕ ಸುರೇಶ್ ಸಹಾಯಕ್ಕೆ ಧಾವಿಸಿದ್ದಾನೆ. ತನ್ನ ಮನೆಗೆ ದಂಪತಿಗಳನ್ನು ಕರೆದೊಯ್ದ ಸುರೇಶ್- ಹೆರಿಗೆಗಾಗಿ ದಾದಿಯಾಬ್ಬಳನ್ನು ಕರೆತಂದಿದ್ದಾನೆ.
ಅಂತೂ ಬೆಳಗಿನ ಜಾವ ಮೂರರ ವೇಳೆಗೆ ಗೀತಮ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮಗು ಆರೋಗ್ಯವಾಗಿದ್ದಾರೆ. ಈ ಘಟನೆ ನಡೆದದ್ದು ಫೆ.6ರ ಶುಕ್ರವಾರ.
ವೈದ್ಯರನ್ನು ದೇವರು ಅನ್ನುತ್ತಾರೆ ? ಆದರೆ ಶಿಕಾರಿಪುರ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ಏನನ್ನುವುದು ?
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications