Get Updates
Get notified of breaking news, exclusive insights, and must-see stories!

ಸಚಿವ ಶ್ರೀನಿವಾಸಪ್ರಸಾದ್‌ 2 ವರ್ಷ ಚುನಾವಣೆಯಿಂದ ವಿಶ್ರಾಂತಿ

ಸಚಿವ ಶ್ರೀನಿವಾಸಪ್ರಸಾದ್‌ 2 ವರ್ಷ ಚುನಾವಣೆಯಿಂದ ವಿಶ್ರಾಂತಿ
ಸಕ್ರಿಯ ರಾಜಕೀಯದಲ್ಲಿ ಮುಂದುವರಿಕೆ, ಹೋರಾಟದ ದಣಿವಿನಿಂದಾಗಿ ವಿಶ್ರಾಂತಿಯ ಬಯಕೆ...

ಮೈಸೂರು : ಮುಂಬರುವ ಲೋಕಸಭೆ / ವಿಧಾನಸಭೆ ಚುನಾವಣೆಗಳಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವ ವಿ.ಶ್ರೀನಿವಾಸಪ್ರಸಾದ್‌ ತಿಳಿಸಿದ್ದಾರೆ.

ಮೈಸೂರು ವರದಿಗಾರರ ಕೂಟ ಏರ್ಪಡಿಸಿದ್ದ ಮುಖಾಮುಖಿಯಲ್ಲಿ ಭಾನುವಾರ ಭಾಗವಹಿಸಿ ಮಾತನಾಡಿದ ಸಚಿವ ಶ್ರೀನಿವಾಸಪ್ರಸಾದ್‌- ಮುಂಬರುವ ಚುನಾವಣೆಗಳಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದರು. ಸಕ್ರಿಯ ರಾಜಕೀಯದಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ ಶ್ರೀನಿವಾಸಪ್ರಸಾದ್‌- ಚುನಾವಣಾ ರಾಜಕೀಯಕ್ಕೆ ಎರಡು ವರ್ಷಗಳ ಕಾಲ ಬಿಡುವು ನೀಡುವ ಇಂಗಿತ ವ್ಯಕ್ತಪಡಿಸಿದರು.

1974ರಿಂದಲೂ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದು , ಈವರೆಗೆ 10 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಸೋಲು ಹಾಗೂ ಗೆಲುವಿನ ರುಚಿ ಕಂಡಿದ್ದೇನೆ. ಚುನಾವಣೆಗಳಿಂದ ದಣಿದಿದ್ದು , ಕನಿಷ್ಠ ಎರಡು ವರ್ಷಗಳ ವಿಶ್ರಾಂತಿಯಾದರೂ ಬೇಕೆನ್ನಿಸುತ್ತಿದೆ ಎಂದು ಹೇಳಿದರು.

ಜಾತ್ಯತೀತ ಜನತಾದಳ ರಾಜ್ಯದಲ್ಲಿ ಬಲಗೊಂಡಿದೆ ಎಂದ ಶ್ರೀನಿವಾಸಪ್ರಸಾದ್‌- ತಾವು ಜಾತ್ಯತೀತ ಜನತಾದಳ ಸೇರುವ ಕುರಿತ ಊಹಾಪೋಹಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

1999ರಲ್ಲಿ , ಚಾಮರಾಜನಾಗರ ಲೋಕಸಭಾ ಕ್ಷೇತ್ರದಲ್ಲಿ ಸಂಯುಕ್ತ ಜನತಾದಳದಿಂದ ಸ್ಪರ್ಧಿಸಿ ಗೆದ್ದಿದ್ದ ಶ್ರೀನಿವಾಸಪ್ರಸಾದ್‌- ಆನಂತರದ ದಿನಗಳಲ್ಲಿ ಸಮತಾ ಪಕ್ಷದ ಜಾರ್ಜ್‌ ಫರ್ನಾಂಡಿಸ್‌ರ ಕರೆಗೆ ಓಗೊಟ್ಟಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+