ಪ್ರಗತಿಪರ ಜನತಾದಳ ರಾಜ್ಯಾಧ್ಯಕ್ಷ ಕೆ.ಎನ್.ನಾಗೇಗೌಡ ನಿಧನ
ಪ್ರಗತಿಪರ
ಜನತಾದಳ
ರಾಜ್ಯಾಧ್ಯಕ್ಷ
ಕೆ.ಎನ್.ನಾಗೇಗೌಡ
ನಿಧನ
ಚುನಾವಣೆ
ಮಾತುಕತೆಗಾಗಿ
ದೆಹಲಿಗೆ
ಬಂದಿದ್ದವರು
ಕೊನೆಯುಸಿರೆಳೆದರು...
ಜ್ವರದಿಂದ ಬಳಲುತ್ತಿದ್ದ ನಾಗೇಗೌಡ ಅವರಿಗೆ ಗುರುವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿತು. ಕರ್ನಾಟಕ ಭವನದಿಂದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಕರೆದೊಯ್ಯುವ ಸಂದರ್ಭದಲ್ಲಿ ನಾಗೇಗೌಡ ಕೊನೆಯುಸಿರೆಳೆದರು ಎಂದು ಪ್ರಗತಿಪರ ಜನತಾದಳದ ಮುಖಂಡ ಉಮೇಶ ಕತ್ತಿ ತಿಳಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ , ವಿವಿಧ ನಾಯಕರೊಂದಿಗೆ ಚುನಾವಣಾ ಹೊಂದಾಣಿಕೆಯ ಕುರಿತು ಮಾತುಕತೆ ನಡೆಸಲಿಕ್ಕಾಗಿ ನಾಗೇಗೌಡ ದೆಹಲಿಗೆ ಬಂದಿದ್ದರು ಎಂದು ಪ್ರಗತಿಪರ ಜನತಾದಳದ ಮುಖಂಡ ಬಿ.ಸೋಮಶೇಖರ್ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಗುರ್ತಿಸಿಕೊಳ್ಳುವ ಮೂಲಕ ರಾಜಕೀಯ ಪ್ರವೇಶ ಮಾಡಿದ ನಾಗೇಗೌಡ, ನಂತರದ ದಿನಗಳಲ್ಲಿ ಜನತಾದಳ ಸೇರಿಕೊಂಡಿದ್ದರು. ಜೆ.ಎಚ್.ಪಟೇಲ್ ಅವರ ಮಂತ್ರಿಮಂಡಲದಲ್ಲಿ ಬೃಹತ್ ನೀರಾವರಿ ಸಚಿವರಾಗಿ ನಾಗೇಗೌಡ ಕಾರ್ಯ ನಿರ್ವಹಿಸಿದ್ದರು.
ಇತ್ತೀಚೆಗೆ ನಿಧನರಾದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಅನುಪಸ್ಥಿತಿಯಿಂದಾಗಿ ಬಡವಾಗಿರುವ ಪ್ರಗತಿಪರ ಜನತಾದಳಕ್ಕೆ ನಾಗೇಗೌಡರ ನಿರ್ಗಮನ ಮತ್ತೊಂದು ಪೆಟ್ಟು ನೀಡಿದಂತಾಗಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು