ತೆಹಲ್ಕಾದಿಂದ ಜಾರ್ಜ್, ಬೋಫೋರ್ಸ್ನಿಂದ ರಾಜೀವ್ ಪಾರು
ತೆಹಲ್ಕಾದಿಂದ ಜಾರ್ಜ್, ಬೋಫೋರ್ಸ್ನಿಂದ ರಾಜೀವ್ ಪಾರು
ಹಿಂದುಜಾ ಸಹೋದರರ ಮೇಲೆ ಮೋಸ ಹಾಗೂ ಪಿತೂರಿ ಆರೋಪ
ಫೂಕಾನ್ ಆಯೋಗ ತನ್ನ ವರದಿಯ ಮೊದಲ ಆಧ್ಯಾಯವನ್ನು ಪ್ರಧಾನಿಗೆ ಇಂದು(ಫೆ.04) ಬೆಳಿಗ್ಗೆ 10.30 ಕ್ಕೆ ಸಲ್ಲಿಸಿತು. ಮೊದಲ ಅಧ್ಯಾಯದಲ್ಲಿ ರಕ್ಷಣಾ ಇಲಾಖೆಯ 12 ವ್ಯವಹಾರದ ಚಾಲ್ತಿಯ ಉಲ್ಲೇಖವಿದೆ. ತೀರ್ಪಿನಲ್ಲಿ ಈ ವ್ಯವಹಾರಗಳು ಕಾನೂನು ಬದ್ಧವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಜಾರ್ಜ್ ಸಹಿತ ಎನ್ಡಿಎ ಮಿತ್ರಕೂಟವು ಫೂಕಾನ್ ಆಯೋಗದ ವರದಿಯನ್ನು ಸ್ವಾಗತಿಸಿದರೆ, ಕಾಂಗ್ರೆಸ್ ಆಯೋಗದ ಗುಣಮಟ್ಟವನ್ನೇ ಪ್ರಶ್ನಿಸಿದೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಹೊರಬಿದ್ದಿರುವ ಈ ತೀರ್ಪು ಭಾರೀ ಮಹತ್ವ ಗಳಿಸಿದೆ.
ರಾಜೀವ್ ಆರೋಪ ಮುಕ್ತ : ರಕ್ಷಣಾ ಇಲಾಖೆಗೆ ಸಂಬಂಧಿಸಿದ ಬೋಪೊರ್ಸ್ ಹಗರಣದಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್ಗಾಂಧಿ ನಿರ್ದೋಷಿ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಹಿಂದುಜಾ ಸಹೋದರರ ಮೇಲೆ ವಿಚಾರಣಾ ವಿಶೇಷ ನ್ಯಾಯಪೀಠ ಹೊರಿಸಿದ್ದ ಮೋಸ ಹಾಗೂ ಪಿತೂರಿಯ ಅಪರಾಧವನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ. 1986ರಲ್ಲಿ , ಭಾರತೀಯ ರಕ್ಷಣಾ ಇಲಾಖೆಗೆ ಶಸ್ತ್ರಾಸ್ರ ಖರೀದಿಯ ಒಪ್ಪಂದದ ಸುಮಾರು 65 ಕೋಟಿಯ ಅವ್ಯವಹಾರದ ಈ ವಿಚಾರಣೆಯನ್ನು ನ್ಯಾಯಮೂರ್ತಿ ಜೆ.ಡಿ.ಕಪೂರ್ ನಡೆಸುತ್ತಿದ್ದಾರೆ.
1999ರಲ್ಲಿ ಸಿಬಿಐ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಆಗಿನ ರಕ್ಷಣಾ ಕಾರ್ಯದರ್ಶಿ ಎಸ್.ಕೆ. ಭಟ್ನಾಗರ್, ಬೋಪೊರ್ಸ್ ಏಜೆಂಟ್ ಡಬ್ಲ್ಯು.ಎನ್. ಛಡ್ಡಾ, ಇಟಲಿಯ ವ್ಯಾಪಾರಿ ಕ್ವಾಟ್ರೋಚ್ಚಿ ಮತ್ತು ಬೋಪೊರ್ಸ್ ಕಂಪೆನಿ ಮಾಲಿಕ ಮಾರ್ಟಿನ್ ಆಡ್ಬೊರವರ ಹೆಸರು ನಮೂದಿಸಲಾಗಿತ್ತು. ಅದರ ಒಂದು ವರ್ಷದ ಬಳಿಕ ಹಿಂದುಜಾ ಸಹೋದರರು 14ಕೋಟಿ ರೂಪಾಯಿ ತೆಗೆದು ಕೊಂಡು ದಲ್ಲಾಳಿಯಾಗಿ ವರ್ತಿಸಿದ್ದಾರೆಂದು ಆರೋಪಿಸಿ ಅವರ ಹೆಸರು ಸೇರ್ಪಡೆಗೊಳಿಸಲಾಗಿತ್ತು. ಇವರಲ್ಲಿ ರಕ್ಷಣಾ ಕಾರ್ಯದರ್ಶಿ ಎಸ್ಕೆ ಭಟ್ನಾಗರ್, ಬೋಪೊರ್ಸ್ ಏಜೆಂಟ್ ಡಬ್ಲು ಎನ್ ಛಡ್ಡಾ ಮೃತಪಟ್ಟಿದ್ದರೆ ,ಇಟಲಿಯ ವ್ಯಾಪಾರಿ ಕ್ವಾಟ್ರೋಚ್ಚಿ ಮತ್ತು ಬೋಪೊರ್ಸ್ ಕಂಪೆನಿ ಮಾಲಿಕ ಮಾರ್ಟಿನ್ ಆಡ್ಬೊರನ್ನು ವಿಚಾರಣೆಗೆ ಒಳಪಡಿಸುವಲ್ಲಿ ವಿಫಲವಾಗಿತ್ತು.
(ಪಿಟಿಐ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications