Get Updates
Get notified of breaking news, exclusive insights, and must-see stories!

ರೈತರ ವಿರುದ್ಧದ 227 ಪ್ರಕರಣ ಕೈಬಿಡಲು ಸರ್ಕಾರದ ನಿರ್ಧಾರ

ರೈತರ ವಿರುದ್ಧದ 227 ಪ್ರಕರಣ ಕೈಬಿಡಲು ಸರ್ಕಾರದ ನಿರ್ಧಾರ
ಕಾವೇರಿ, ನೀರಾ ಚಳವಳಿಯಲ್ಲಿ ದಾಖಲಿಸಿದ್ದ ಪ್ರಕರಣಗಳ ವಜಾ

ಬೆಂಗಳೂರು : ಕಾವೇರಿ ನೀರು ಹಂಚಿಕೆ ಸಮಸ್ಯೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ರಾಜ್ಯದ ರೈತರ ಮೇಲೆ ದಾಖಲಿಸಲಾಗಿದ್ದ 227 ಪ್ರಕರಣಗಳನ್ನು ಕೈಬಿಡಲು ರಾಜ್ಯಸರ್ಕಾರ ನಿರ್ಧರಿಸಿದೆ.

2001-2002 ಮತ್ತು 2002-2003 ಇಸವಿಯಲ್ಲಿ ರಾಜ್ಯದ ರೈತರ ಮೇಲೆ ದಾಖಲಾಗಿದ್ದ 64 ಕೇಸುಗಳನ್ನು ಕೈಬಿಡಲು ಕಳೆದ ವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿತು. ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿರುದ್ಧ ಚಳವಳಿಯ ಸಂದರ್ಭದಲ್ಲಿ ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ರೈತರ ವಿರುದ್ಧ ದಾಖಲಿಸಲಾಗಿದ್ದ 105 ಪ್ರಕರಣಗಳನ್ನೂ ಕೈಬಿಡಲಾಗಿದೆ ಎಂದು ವಾರ್ತಾ ಸಚಿವ ಡಾ. ಜಿ. ಪರಮೇಶ್ವರ್‌ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ತೆಂಗಿನ ಮರದಿಂದ ‘ನೀರಾ’ ತೆಗೆಯುವುದರ ವಿಷಯವಾಗಿ ರೈತರ ವಿರುದ್ಧ 58 ಕೇಸುಗಳು ದಾಖಲಾಗಿದ್ದವು. ಈ ಪ್ರಕರಣಗಳನ್ನೂ ಕೈಬಿಡಲಾಗಿದೆ ಎಂದರು.

ಸಚಿವ ಸಂಪುಟವು ಹೇಮಾವತಿ ನದಿ ಕಾಲುವೆಯಿಂದ ಮಧುಗಿರಿಗೆ ನೀರಿನ ಸರಬರಾಜು ಯೋಜನೆಗೆಂದು 17.94 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಅಲ್ಲದೆ ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆಗೆ, ಮಹಾತ್ಮಾ ಗಾಂಧಿ ಮಾರ್ಕೆಟ್‌ ನವೀಕರಣಕ್ಕಾಗಿ ರೂ. 18 ಕೋಟಿ ಸಾಲವನ್ನು ಮಂಜೂರು ಮಾಡಿದೆ ಎಂದು ಸಚಿವ ಪರಮೇಶ್ವರ್‌ ಸುದ್ದಿಗಾರರಿಗೆ ತಿಳಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+