ರೈತರ ವಿರುದ್ಧದ 227 ಪ್ರಕರಣ ಕೈಬಿಡಲು ಸರ್ಕಾರದ ನಿರ್ಧಾರ
ರೈತರ
ವಿರುದ್ಧದ
227
ಪ್ರಕರಣ
ಕೈಬಿಡಲು
ಸರ್ಕಾರದ
ನಿರ್ಧಾರ
ಕಾವೇರಿ,
ನೀರಾ
ಚಳವಳಿಯಲ್ಲಿ
ದಾಖಲಿಸಿದ್ದ
ಪ್ರಕರಣಗಳ
ವಜಾ
2001-2002 ಮತ್ತು 2002-2003 ಇಸವಿಯಲ್ಲಿ ರಾಜ್ಯದ ರೈತರ ಮೇಲೆ ದಾಖಲಾಗಿದ್ದ 64 ಕೇಸುಗಳನ್ನು ಕೈಬಿಡಲು ಕಳೆದ ವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿತು. ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿರುದ್ಧ ಚಳವಳಿಯ ಸಂದರ್ಭದಲ್ಲಿ ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ರೈತರ ವಿರುದ್ಧ ದಾಖಲಿಸಲಾಗಿದ್ದ 105 ಪ್ರಕರಣಗಳನ್ನೂ ಕೈಬಿಡಲಾಗಿದೆ ಎಂದು ವಾರ್ತಾ ಸಚಿವ ಡಾ. ಜಿ. ಪರಮೇಶ್ವರ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ತೆಂಗಿನ ಮರದಿಂದ ‘ನೀರಾ’ ತೆಗೆಯುವುದರ ವಿಷಯವಾಗಿ ರೈತರ ವಿರುದ್ಧ 58 ಕೇಸುಗಳು ದಾಖಲಾಗಿದ್ದವು. ಈ ಪ್ರಕರಣಗಳನ್ನೂ ಕೈಬಿಡಲಾಗಿದೆ ಎಂದರು.
ಸಚಿವ ಸಂಪುಟವು ಹೇಮಾವತಿ ನದಿ ಕಾಲುವೆಯಿಂದ ಮಧುಗಿರಿಗೆ ನೀರಿನ ಸರಬರಾಜು ಯೋಜನೆಗೆಂದು 17.94 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಅಲ್ಲದೆ ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆಗೆ, ಮಹಾತ್ಮಾ ಗಾಂಧಿ ಮಾರ್ಕೆಟ್ ನವೀಕರಣಕ್ಕಾಗಿ ರೂ. 18 ಕೋಟಿ ಸಾಲವನ್ನು ಮಂಜೂರು ಮಾಡಿದೆ ಎಂದು ಸಚಿವ ಪರಮೇಶ್ವರ್ ಸುದ್ದಿಗಾರರಿಗೆ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು