Get Updates
Get notified of breaking news, exclusive insights, and must-see stories!

ಉದಯವಾಗುತ್ತಿಹುದು ಚೆಲುವ ಕನ್ನಡ ನಾಡು ನೋಡು ಬಾರಾ ..

ಉದಯವಾಗುತ್ತಿಹುದು ಚೆಲುವ ಕನ್ನಡ ನಾಡು ನೋಡು ಬಾರಾ ..
ರಾಜ್ಯದಲ್ಲಿ ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ ಮತ್ತು ಸಮಾವೇಶ ಭವನ

ಬೆಂಗಳೂರು : ‘ಕರ್ನಾಟಕವು ಶೀಘ್ರವೇ ವಿಶ್ವ ಪ್ರವಾಸೋದ್ಯಮ ತಾಣಗಳಲೊಂದಾಗಲಿದೆ. ನೆನೆಗುದಿಗೆ ಬಿದ್ದಿದ್ದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುದ್ದಲಿಪೂಜೆ (ಜ.29) ಮಾಡಿದ ಪುಳಕದಲ್ಲಿರುವ ಮುಖ್ಯಮಂತ್ರಿ ಕೃಷ್ಣ ಅವರಿಗಂತೂ ರಾಜ್ಯದಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಯ ಕುರಿತು ಇನ್ನಿಲ್ಲದ ವಿಶ್ವಾಸ.

ರಾಜ್ಯದಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಯ ಕುರಿತು ಸರ್ಕಾರದ್ದು ಬರಿ ಬಾಯಿ ಮಾತಲ್ಲ ; ಸಾಕಷ್ಟು ಕೆಲಸಗಳು ನಡೆದಿವೆ. ನಡೆಯಬೇಕಾದ ಕೆಲಸಗಳೂ ಸಾಕಷ್ಟಿವೆ. ದಕ್ಷಿಣ ಏಷ್ಯಾದಲ್ಲಿಯೇ ಅತಿ ದೊಡ್ಡದಾದ ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ ಮತ್ತು ಸಮಾವೇಶ ಭವನ ಕರ್ನಾಟಕದಲ್ಲಿ ರೂಪುಗೊಳ್ಳಲಿವೆ. ಈ ಕುರಿತು ಈಗಾಗಲೇ ಸಿದ್ಧತೆ ನಡೆದಿದೆ ಎನ್ನುತ್ತಾರೆ ರಾಜ್ಯ ಸರಕಾರ ಪ್ರವಾಸೋದ್ಯಮ ಖಾತೆ ಸಚಿವ ಜೆ. ಅಲೆಗ್ಸಾಂಡರ್‌.

ವಾರ್ಷಿಕ ಕನೆಕ್ಟ್‌ ಸಾರ್ವಜನಿಕ-ಖಾಸಗಿ ಸಮ್ಮೇಳನದ ಸಂದರ್ಭದಲ್ಲಿ ಸಚಿವ ಅಲೆಗ್ಸಾಂಡರ್‌ ಹೇಳಿದ ಪ್ರಕಾರ :

1.ಪ್ರಸಕ್ತ ವಿತ್ತ ವರ್ಷದ ಮೂರನೇ ಬಾರಿ ನಡೆಯುತ್ತಿರುವ ಕನೆಕ್ಟ್‌ ಸಾರ್ವಜನಿಕ-ಖಾಸಗಿ ಸಮ್ಮೇಳನವು ಮೆಗಾ ಯೋಜನೆಗಳತ್ತ ದೃಷ್ಟಿ ಹಾಯಿಸಲಿದೆ. ಅದರ ಜೊತೆ ಮೂಲೆಗುಂಪಾಗಿರುವ ಕೆಲವು ಯಾತ್ರಿತಾಣಗಳ ಅಭಿವೃದ್ಧಿ ಕುರಿತು ಚರ್ಚಿಸಲಿದೆ. ಇದು ರಾಜ್ಯದ ಪ್ರವಾಸೋದ್ಯಮ ಮಾತ್ರವಲ್ಲದೆ ಕರ್ನಾಟಕದ ಆರ್ಥವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಈಡಠk ಯೋಜನೆಗಳನ್ನು ಖಾಸಗಿ ಕಂಪೆನಿಗಳು ಸರಕಾರಿ ಸಂಸ್ಥೆಗಳ ಜೊತೆಗೂಡಿ ನಿರ್ಮಿಸಲಿವೆ.

2.ಕರ್ನಾಟಕದಲ್ಲಿ ಸಾಕಷ್ಟು ಐತಿಹಾಸಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳಿವೆ. ನಾವೀಗ ಅವುಗಳನ್ನು ಯಾವ ರೀತಿ ಪರಿಣಾಮಕಾರಿಯಾಗಿ ವಾಣಿಜ್ಯೋದ್ದೇಶಗಳಿಗಾಗಿ ಬಳಸಿಕೊಳ್ಳಬೇಕು ಹಾಗೂ ಪ್ರಚುರ ಪಡಿಸಬೇಕು ಎಂಬುದರ ಕುರಿತು ಚರ್ಚಿಸಬೇಕಾಗಿದೆ. ಮುಂದಿನ 5 ರಿಂದ 10 ವರ್ಷಗಳಲ್ಲಿ ಪ್ರವಾಸೋದ್ಯಮದಿಂದ ರಾಜ್ಯದ ಆದಾಯ, ತೆರಿಗೆ ,ಉದ್ಯೋಗ ಹಾಗೂ ಮತ್ತಿತರ ಕ್ಷೇತ್ರಗಳನ್ನು ಬಲಪಡಿಸವ ಕುರಿತು ಚರ್ಚಿಸಲಾಗುವುದು .

3.ರಾಜ್ಯದಲ್ಲಿನ ಪ್ರವಾಸಿಕ್ಷೇತ್ರಗಳಲ್ಲಿನ ಮೂಲಭೂತ ವ್ಯವಸ್ಥೆಗಳ ಅಭಿವೃದ್ಧಿಗೂ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಒಟ್ಟಿನಲ್ಲಿದು ಪ್ರವಾಸದ ಸಮಯ. ಪ್ರವಾಸೋದ್ಯಮ ಅಭಿವೃದ್ಧಿಯ ಕುರಿತು ರಾಜ್ಯ ಸರ್ಕಾರದ ಕೆಲವು ಚಿಂತನೆಗಳು ಹೀಗಿವೆ :

  • ದಕ್ಷಿಣ ಏಷ್ಯಾದಲ್ಲಿಯೇ ಅತಿ ದೊಡ್ಡದಾದ ಅಂತರಾಷ್ಟ್ರೀಯ ಸಮಾವೇಶ ಭವನ ನಿರ್ಮಿಸುವುದು. ಇದು ಸುಮಾರು 5,000 ಮಂದಿ ಕುಳಿತುಕೊಳ್ಳಬಹುದಾದ ವಿಶಾಲವಾದ ಸಭಾಂಗಣ.
  • ಬೆಂಗಳೂರು ಹಾಗೂ ಮೈಸೂರು ನಗರದ ಹೊರವಲಯದಲ್ಲಿ ಡಿಸ್ನಿಲ್ಯಾಂಡ್‌ ಮಾದರಿಯನ್ನು ಅನುಸರಿಸಿ ಮನರಂಜನಾ ಉದ್ಯಾನವನ ನಿರ್ಮಾಣ.

  • ಫಾರ್ಮ್ಯುಲಾ 1 ಮೋಟಾರ್‌ ರೇಸ್‌ನಂತಹ ವಿಶ್ವವ್ಯಾಪಿ ಪ್ರಚಾರ ಪಡೆದ ಕ್ರೀಡೆಗಳ ಕೇಂದ್ರದ ಆರಂಭ .

  • ಕರಾವಳಿಯನ್ನು ಇನ್ನಷ್ಟು ಮನಮೋಹಕಗೊಳಿಸಲು ರಾಜ್ಯದಲ್ಲಿರುವ ಬೀಚ್‌ ರೆಸಾರ್ಟ್‌ಗಳ ಅಭಿವೃದ್ಧಿಯತ್ತ ಗಮನ ಹರಿಸುವುದು.

  • ಲಾಲ್‌ಬಾಗ್‌, ನಂದಿಬೆಟ್ಟ, ಚಾಮುಂಡಿ ಬೆಟ್ಟ, ಶಿವಮೊಗ್ಗದ ಜೋಗ್‌, ಕೊಡಚಾದ್ರಿ, ಮಡಿಕೇರಿಯ ರಾಜಾಸೀಟ್‌ನಲ್ಲಿ ರೋಪ್‌ವೇ ಆರಂಭ.

  • ಕಾವೇರಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ ತಲಕಾವೇರಿ ,ಭಾಗಮಂಡಲ ಮತ್ತು ತ್ರಿವೇಣಿ ಸಂಗಮದಲ್ಲಿ ದೇಗುಲ ಜೀರ್ಣೋದ್ಧಾರದ 11ಕೋಟಿ ರೂಪಾಯಿಯ ಕಾಮಗಾರಿಗೆ ಚಾಲನೆ.

  • ಕರ್ನಾಟಕದ ಪುರಾತನ ಸಂಸ್ಕೃತಿಯನ್ನು ಪ್ರತಿಬಿಂಬಿಸಲು 3ಕೋಟಿ ರೂಪಾಯಿ ಕೇಂದ್ರ ನೆರವಿನಲ್ಲಿ ಹಂಪಿಯ ಪ್ರಾಚ್ಯ ವಸ್ತುಗಳ ಪುನಶ್ಚೇತನ.
  • ದೇವನಹಳ್ಳಿಯ ಆಂತರಾಷ್ಟ್ರೀಯ ವಿಮಾನ ನಿಲ್ದಾಣವು ಮಹತ್ತರ ಪಾತ್ರ ನಿರ್ವಹಿಸಲಿದೆ. ಸಂಚಾರ ವಲಯ ಅಭಿವೃದ್ಧಿ ಹಾಗೂ ಗೋವಾದಿಂದ ರಾಜ್ಯಕ್ಕೆ ರೈಲು ಸಂಪರ್ಕಕ್ಕೆ ಕಾಯಕಲ್ಪ.
  • ಉದಯವಾಗುತ್ತಿದೆ ಚೆಲುವ ಕನ್ನಡ ನಾಡು ; ಏನಂತೀರಿ ?

    ಮುಖಪುಟ / ವಾರ್ತೆಗಳು

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+