ಶ್ರೀನಿವಾಸಪುರ ಮಾವು ಬೆಳೆಗಾರರ ಕನಸುಗಳಿಗೆ ಬೋರರ್ ಕೀಟ
ಶ್ರೀನಿವಾಸಪುರ ಮಾವು ಬೆಳೆಗಾರರ ಕನಸುಗಳಿಗೆ ಬೋರರ್ ಕೀಟ
ಬೋರರ್ ಎಂಬ ಹಾರರ್ ! ತೆಂಗು ನಾಶವಾದ ನೆಲದಲ್ಲಿ ಮಾವಿಗೂ ಕುತ್ತು
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ರಾಜ್ಯದಲ್ಲಿ ಮಾವಿನ ಬೆಳೆಗೆ ಹೆಸರುವಾಸಿ. ಒಂದರ್ಥದಲ್ಲಿ ಶ್ರೀನಿವಾಸಪುರದ ಪ್ರಸಿದ್ಧಿ ರಾಷ್ಟ್ರೀಯ ಮಟ್ಟದ್ದು. ರಾಜ್ಯದ ಮಾವಿನ ಬೆಳೆಯಲ್ಲಿನ ಅಗ್ರಪಾಲು ಶ್ರೀನಿವಾಸಪುರ ತಾಲ್ಲೂಕಿನಿಂದಲೇ ಬರಬೇಕು. ಇಂತಿಪ್ಪ ಶ್ರೀನಿವಾಸಪುರದ ಮಾವು ಬೆಳೆಗಾರರ ಮುಖದಲ್ಲೀಗ ನಗುವಿಲ್ಲ !
ಮಾವಿನ ಸಸಿಗಳಿಗೆ ಬೋರರ್ ಕೀಟ ತಗುಲಿರುವುದು ಮಾವು ಬೆಳೆಗಾರರ ನಿದ್ದೆ ಕೆಡಿಸಿದೆ. ತಟ್ಟೆಯಾಕಾರದ ತಲೆ ಹಾಗೂ ಚೂಪು ್ಫಮೂತಿಯನ್ನು ಹೊಂದಿರುವ ಬೋರರ್ ಹೂಳುಗಳು ಮಾವಿನ ಮರದ ರೆಂಬೆಗಳನ್ನು ಕೊರೆಯುತ್ತವೆ. ಇದರಿಂದಾಗಿ ಮರ ಅಶಕ್ತಗೊಂಡು ಫಸಲು ಕುಂಠಿತಗೊಳ್ಳುತ್ತದೆ. ರೆಂಬೆಕೊಂಬೆಗಳು ಮುರಿದು ಬೀಳುವುದರಿಂದ ಫಸಲು ಹಾಳಾಗಿ ಈ ಬಾರಿಯ ಮಾವಿನ ಸುಗ್ಗಿ ಕರಾಳವಾಗುವ ಆತಂಕ ರೈತರನ್ನು ಬಾಧಿಸುತ್ತಿದೆ.
ಶ್ರೀನಿವಾಸಪುರ ತಾಲ್ಲೂಕಿನಲ್ಲಿನ ತೆಂಗಿನ ಬೆಳೆ ನುಸಿಪೀಡೆಯಿಂದಾಗಿ ಹೆಚ್ಚೂಕಮ್ಮಿ ಸರ್ವನಾಶದ ಅಂಚಿಗೆ ಬಂದಾಗಿದೆ. ಈಗ ಬೋರರ್ ಕೀಟದಿಂದಾಗಿ ಮಾವಿನ ಮರಗಳು ಕೂಡ ಆತಂಕ ಎದುರಿಸುವಂತಾಗಿದೆ. ಮತ್ತೊಂದು ಬೆಳೆಯಾದ ಟೊಮೊಟೊಗೆ ಕೂಡ ಹಲವಾರು ರೋಗಗಳು ಕಾಡುತ್ತಿರುವುದು ರೈತರನ್ನು ಇನ್ನಷ್ಟು ಕಂಗೆಡಿಸಿದೆ.
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ಚಂದ್ರ ಅವರು ಮಾವಿನ ಗಿಡಗಳು ಆತಂಕ ಎದುರಿಸುತ್ತಿರುವುನ್ನು ಒಪ್ಪಿಕೊಳ್ಳುತ್ತಾರೆ. ಬೋರರ್ ಕೀಟಗಳಿಂದಾಗಿ ಮಾವಿನ ಮರ ದುರ್ಬಲಗೊಳ್ಳುತ್ತಿವೆ. ಎಲೆಗಳು ಉದುರಿ ಬೀಳುತ್ತಿವೆ. ನೆಲದಲ್ಲಿನ ತೇವಾಂಶ ಕಡಿಮೆಯಾಗಿರುವುದು ಕೂಡ ಗಿಡಗಳ ದುರ್ಬಲತೆಗೆ ಕಾರಣವಾಗಿದೆ ಎನ್ನುತ್ತಾರೆ ಸುರೇಶ್ಚಂದ್ರ.
ಅಂದಹಾಗೆ, ಬೋರರ್ ಕೀಟ ನಿಯಂತ್ರಣಕ್ಕೆ ಮದ್ದಿಲ್ಲವೇ ? ಖಂಡಿತಾ ಇದೆ, ಕೀಟನಾಶಕಗಳನ್ನು ಅಧಿಕ ಪ್ರಮಾಣದಲ್ಲಿ ಬಳಸುವುದೇ ಬೋರರ್ ಕೀಟ ನಿಯಂತ್ರಣಕ್ಕೆ ಮದ್ದು ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು. ಆದರೆ, ದುಬಾರಿ ಬೆಲೆ ಹಾಗೂ ಗಾತ್ರದ ಕೀಟನಾಶಕ ಕೊಳ್ಳಲಿಕ್ಕೂ ನಮ್ಮ ರೈತರಿಗೆ ಶಕ್ತಿಯಿಲ್ಲ ! ನೆರವಿಗೆ ಸರ್ಕಾರ ಮುಂದಾಗಬೇಕಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications