ರೈಲ್ವೆ ಬಜೆಟ್ : ಪ್ರಯಾಣ ದರ ಸ್ಥಿರ, ಬೆಂಗಳೂರಿಗೆ ಹೊಸ ರೈಲು..
ರೈಲ್ವೆ ಬಜೆಟ್ : ಪ್ರಯಾಣ ದರ ಸ್ಥಿರ, ಬೆಂಗಳೂರಿಗೆ ಹೊಸ ರೈಲು..
ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ಹೆಸರಿನಲ್ಲಿ 18 ಹೊಸ ಟ್ರೆೃನ್, ಮೊಬೈಲ್ ಮುಲಕ ಟಿಕೆಟ್ ಬುಕ್ಕಿಂಗ್.
ರಾಜಧಾನಿ ದೆಹಲಿಯಾಂದಿಗೆ ವಿವಿಧ ರಾಜ್ಯಗಳನ್ನು ಬೆಸೆಯುವ 18 ಹೊಸ ರೈಲುಗಳ ಸಂಚಾರವನ್ನು ಪ್ರಸಕ್ತ ಸಾಲಿನಿಂದ ಪ್ರಾರಂಭಿಸಲಾಗುವುದು. ಒಟ್ಟು 43 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ 230 ಯೋಜನೆಗಳನ್ನು ಹೊಂದಲಾಗಿದೆ. ಇದರಲ್ಲಿ 20 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ದೇಶದ ಹಿಂದುಳಿದ ಮತ್ತು ದುರ್ಗಮ ಪ್ರದೇಶಗಳನ್ನು ಸಂಪರ್ಕಿಸಲಾಗುವುದು ಎಂದು ಶುಕ್ರವಾರ ಮಂಡಿಸಿದ ಮಧ್ಯಂತರ ರೈಲ್ವೆ ಬಜೆಟ್ನಲ್ಲಿ ಸಚಿವ ನಿತೀಶ್ ಕುಮಾರ್ ತಿಳಿಸಿದರು.
ಎನ್ಡಿಎ ಸರ್ಕಾರದ ಸಂಪರ್ಕ ಕ್ರಾಂತಿ ಯೋಜನೆಯ ಅನ್ವಯ ಬೆಂಗಳೂರಿನಿಂದ ದೆಹಲಿಗೆ ರೈಲೊಂದನ್ನು ಓಡಿಸಲಾಗುವುದು. ಫೆಬ್ರವರಿ 8ರಿಂದ ಈ ರೈಲು ಸಂಚಾರ ಆರಂಭವಾಗಲಿದೆ. ಆರಂಭದಲ್ಲಿ ಮೂರು ವಾರಕ್ಕೊಮ್ಮೆ ಸಂಚರಿಸುವ ಈ ರೈಲು ಅಕ್ಟೋಬರ್ 2ರಿಂದ ದೈನಿಕ ಸಂಚಾರ ಆರಂಭಿಸಲಿದೆ ಎಂದು ನಿತೀಶ್ಕುಮಾರ್ ಹೇಳಿದರು.
ರೈಲ್ವೆ ಬಜೆಟ್ನ ಮುಖ್ಯಾಂಶಗಳು :
- ಮುಂದಿನ ವರ್ಷದಲ್ಲಿ 13,425 ಕೋಟಿ ರುಪಾಯಿಗಳ ಯೋಜನಾಗಾತ್ರ ನಿಗದಿ.
- ರೈಲ್ವೆಯ ಯೋಜನೆಗಳಿಗೆ- ಬಜೆಟ್ನಿಂದ 4544 ಕೋಟಿ ರುಪಾಯಿ, ರೈಲ್ವೆ ವಿಶೇಷ ಸುರಕ್ಷತಾ ನಿಧಿಯಿಂದ 2795 ಕೋಟಿ ರುಪಾಯಿ, ಕೇಂದ್ರ ರಸ್ತೆ ನಿಧಿಯಿಂದ 401 ಕೋಟಿ ರುಪಾಯಿ, ಆಂತರಿಕ ಮೂಲಗಳಿಂದ 2635 ಕೋಟಿ ರುಪಾಯಿ, ಮಾರುಕಟ್ಟೆಯಿಂದ 3050 ಕೋಟಿ ರುಪಾಯಿ ಹಾಗೂ ರೈಲ್ವೆ ವಿಕಾಸ ನಿಗಮ ಲಿ.ನಿಂದ 717 ಕೋಟಿ ರುಪಾಯಿಗಳನ್ನು ಭರಿಸಲಾಗುವುದು.
- ಪ್ರಸಕ್ತ ರೈಲ್ವೆ ಬಜೆಟ್ನಲ್ಲಿ 18 ಹೊಸ ಟ್ರೆೃನ್ಗಳನ್ನು ಪರಿಚಯಿಸಲಾಗುತ್ತಿದೆ. ಈ ತಡೆರಹಿತ ರೈಲುಗಳನ್ನು ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ಎಂದು ಹೆಸರಿಸಲಾಗಿದೆ.
- ದೆಹಲಿಯಿಂದ- ಗುವಾಹತಿ, ಸಿಂಕದರಾಬಾದ್, ದುರ್ಗ್, ಅಹಮದಾಬಾದ್, ರಾಂಚಿ, ಮುಂಬಯಿ, ತಿರುವನಂತಪುರಂ, ಡಬಲ್ಪುರ, ಭುವನೇಶ್ವರ, ಜೋಧ್ಪುರ, ಮಧುರೈ, ಚಿತ್ರಕೂಟ, ಕಥ್ಗೋಡಂ, ಸೆಲ್ದಾ, ಮಡಗಾಂವ್, ಕೋಲ್ಕತ್ತಾ ಮತ್ತು ಉದಾಂಪುರಗಳನ್ನು ನೂತನ 18 ರೈಲುಗಳು ಸಂಪರ್ಕಿಸಲಿವೆ.
- ಮೊಬೈಲ್ ಫೋನ್ ಮೂಲಕ ರೈಲ್ವೆ ಟಿಕೇಟು ಕಾಯ್ದಿರಿಸುವ ಸವಲತ್ತು .
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications