ವಿಧಾನಸಭೆ ವಿಸರ್ಜನೆ-ರಾಷ್ಟ್ರಪತಿ ಆಳ್ವಿಕೆಗೆ ಪ್ರಗತಿಪರದಳ ಒತ್ತಾಯ
ವಿಧಾನಸಭೆ
ವಿಸರ್ಜನೆ-ರಾಷ್ಟ್ರಪತಿ
ಆಳ್ವಿಕೆಗೆ
ಪ್ರಗತಿಪರದಳ
ಒತ್ತಾಯ
ಹೇಳಿಕೆ
ಪ್ರತಿಹೇಳಿಕೆಗಳ
ಭರಾಟೆಯಲ್ಲಿ
ಆಡಳಿತ
ಯಂತ್ರ
ಸಂಪೂರ್ಣ
ನಿಷ್ಕಿೃಯ
ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಚುನಾವಣೆಯ ಕುರಿತು ಅನಗತ್ಯ ಗೊಂದಲಗಳನ್ನು ಹುಟ್ಟುಹಾಕುತ್ತಿದೆ. ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಹಾಗೂ ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ವಿರೋಧಭಾಸದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹೇಳಿಕೆ ಪ್ರತಿಹೇಳಿಕೆಗಳ ಭರಾಟೆಯಲ್ಲಿ ಆಡಳಿತ ಯಂತ್ರ ಸಂಪೂರ್ಣ ನಿಷ್ಕಿೃಯಗೊಂಡಿರುವುದರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕೆಂದು ಸೋಮಶೇಖರ್ ಆಗ್ರಹಿಸಿದರು.
ಇದೆಲ್ಲ ಗೊಂದಲ ಕೊನೆಯಾಗಬೇಕಾದರೆ ಎಸ್ಸೆಂ.ಕೃಷ್ಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕೇಂದ್ರ ಸರ್ಕಾರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಸೋಮಶೇಖರ್ ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್, ಬಿಜೆಪಿ, ಜಾತ್ಯತೀತ ಜನತಾದಳ ಪಕ್ಷಗಳ ಜೊತೆ ಚುನಾವಣೆ ಹೊಂದಾಣಿಕೆಯ ಸಾಧ್ಯತೆಯನ್ನು ಪರಿಶೀಲಿಸುವ ಕುರಿತು ಜನವರಿ 30ರಂದು ಪ್ರಗತಿಪರ ಜನತಾದಳದ ಮುಖಂಡರ ಸಭೆ ಕರೆಯಲಾಗಿದೆ ಎಂದು ಸೋಮಶೇಖರ್ ಹೇಳಿದರು. ಇತರ ಪಕ್ಷಗಳಿಗೆ ಪ್ರಗತಿಪರ ನಾಯಕರ ವಲಸೆಯ ಕುರಿತು ಪ್ರತಿಕ್ರಿಯಿಸಿದ ಅವರು- ಎಲ್ಲ ನಾಯಕರು ವಲಸೆ ಹೋದರೂ ತಾವು ಪ್ರಗತಿಪರ ದಳದಲ್ಲಿಯೇ ಉಳಿಯುವೆ ಎಂದರು.
(ಪಿಟಿಐ)
ಮುಖಪುಟ / ವಾರ್ತೆಗಳು