ವಿಧಾನಸಭೆ ಹಣೆಬರಹ ನಿರ್ಧರಿಸಲು ಫೆ.4 ರಂದು ಸಿಎಲ್ಪಿ ಸಭೆ
ವಿಧಾನಸಭೆ
ಹಣೆಬರಹ
ನಿರ್ಧರಿಸಲು
ಫೆ.4
ರಂದು
ಸಿಎಲ್ಪಿ
ಸಭೆ
ಅವಧಿಗೆ
ಮುನ್ನ
ಚುನಾವಣೆಗೆ
ಕಾಂಗ್ರೆಸ್
ಕಾರ್ಯಕರ್ತರು,
ಶಾಸಕರು
ಹಾಗೂ
ಸಂಸದರ
ಒಲವು
ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳು ಏಕಕಾಲದಲ್ಲಿ ನಡೆಯಬೇಕೆ ಅಥವಾ ವಿಧಾನಸಭೆ ತನ್ನ ಸಂಪೂರ್ಣ ಅವಧಿಯನ್ನು ಪೂರೈಸುವವರೆಗೆ ಸುಮ್ಮನಿರಬೇಕೆ ಎನ್ನುವ ಕುರಿತು ಸಿಎಲ್ಪಿ ಸಭೆ ನಿರ್ಣಯ ಕೈಗೊಳ್ಳಲಿದೆ. ಈ ಸಭೆಯ ನಿರ್ಣಯದೊಂದಿಗೆ ಫೆ.7 ಅಥವಾ 8ರಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್ನೊಂದಿಗೆ ಚುನಾವಣೆಯ ಕುರಿತು ಚರ್ಚಿಸುವರು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಜನಾರ್ಧನ ಪೂಜಾರಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಪಕ್ಷದ ಕಾರ್ಯಕರ್ತರು, ಶಾಸಕರು ಹಾಗೂ ಸಂಸದರು ಅವಧಿಗೆ ಮುನ್ನ ಚುನಾವಣೆ ನಡೆಸಲು ಒಲವು ವ್ಯಕ್ತಪಡಿಸಿದ್ದಾರೆ ಎಂದ ಪೂಜಾರಿ- ತಮಗೆ ಬಂದಿರುವ ಮಾಹಿತಿಯ ಪ್ರಕಾರ ಮಾರ್ಚ್ 26ರಂದು ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ ಎಂದರು.
ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಒಟ್ಟಿಗೆ ನಡೆಸುವಂತೆ ಕೇಂದ್ರ ಸರ್ಕಾರ ಚುನಾವಣಾ ಆಯೋಗಕ್ಕೆ ಪತ್ರ ಬರೆಯಬಹುದು. ರಾಜ್ಯದ ನಿರ್ಣಯವನ್ನು ಕಾಯದೆ, ಎರಡು ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ನಿರ್ಣಯವನ್ನು ಕೈಗೊಳ್ಳುವ ಅಧಿಕಾರ ಚುನಾವಣಾ ಆಯೋಗಕ್ಕಿದೆ ಎಂದು ಪೂಜಾರಿ ಅಭಿಪ್ರಾಯಪಟ್ಟರು.
(ಪಿಟಿಐ)
ಮುಖಪುಟ / ವಾರ್ತೆಗಳು