ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಡು ನೆಲ ಬರದ ನೆಲ ಚಿತ್ರದುರ್ಗಕ್ಕೆ ಶಾಂತಿಸಾಗರದಿಂದ ನೀರು!

By Staff
|
Google Oneindia Kannada News

ಬರಡು ನೆಲ ಬರದ ನೆಲ ಚಿತ್ರದುರ್ಗಕ್ಕೆ ಶಾಂತಿಸಾಗರದಿಂದ ನೀರು!
80 ಕೋಟಿ ರುಪಾಯಿ ಯೋಜನೆಗೆ ಚಾಲನೆ

ಚಿತ್ರದುರ್ಗ : ದಾವಣಗೆರೆಯ ಶಾಂತಿಸಾಗರದಿಂದ ಚಿತ್ರದುರ್ಗಕ್ಕೆ ನೀರು ಸರಬರಾಜು ಮಾಡುವ ಬೃಹತ್‌ ಯೋಜನೆಯ ಶಂಕುಸ್ಥಾಪನೆಯನ್ನು ಜ 22, ಗುರುವಾರ ಶಾಸಕ ಹಾಗೂ ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ಅಧ್ಯಕ್ಷರಾದ ಸಿ. ಎಂ. ಲಿಂಗಪ್ಪ ನೆರವೇರಿಸಿದರು.

ಚಿತ್ರದುರ್ಗಕ್ಕೆ ಅಗತ್ಯವಿರುವ ನೀರಿನ ವ್ಯವಸ್ಥೆ ಒಂದು ವರ್ಷದೊಳಗೆ ಮುಗಿಯಬೇಕು. ಪ್ರಾರಂಭಿಸಿದ ಕಾಮಗಾರಿ ಶೀಘ್ರದಲ್ಲಿ ಮುಗಿಸುವ ಉದ್ದೇಶದಿಂದ ಶ್ರಮಿಸುತ್ತಿದ್ದೇವೆ. ನಗರವೊಂದರ ಕುಡಿಯುವ ನೀರಿನ ಯೋಜನೆಗೆ 80 ಕೋಟಿ ರೂಪಾಯಿಗಳನ್ನು ಒದಗಿಸುತ್ತಿರುವುದು ಇದೇ ಮೊದಲು ಎಂದು ಶಾಸಕ ಲಿಂಗಪ್ಪ ನೀರು ಸರಬರಾಜು ಯೋಜನೆಯನ್ನು ಉದ್ಘಾಟಿಸಿ ಹೇಳಿದರು.

ಭರಮಸಾಗರ ಶಾಸಕ ಎಂ. ಚಂದ್ರಪ್ಪ, ಚಿತ್ರದುರ್ಗ ದ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ಕ.ಗ್ರಾ.ನೀ.ಸ ಮತ್ತು ಒ.ಮಂ.ಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ, ಚಿತ್ರದುರ್ಗ ಗ್ರಾಮೀಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಸೇತುರಾಂ, ಹಾಲಿ ಮುನ್ಸಿಪಾಲಿಟಿ ಸದಸ್ಯ ಎಚ್‌. ಸುನಿಲ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X