ವಿಶ್ವ ಜಲ ಸಮಾವೇಶದಲ್ಲಿ ‘ಕೋಕೊ- ಪೆಪ್ಸಿ ತೊಲಗಲಿ’ ಘೋಷಣೆ
ವಿಶ್ವ ಜಲ ಸಮಾವೇಶದಲ್ಲಿ ‘ಕೋಕೊ- ಪೆಪ್ಸಿ ತೊಲಗಲಿ’ ಘೋಷಣೆ
ನೀರಿಗಾಗಿ ಸೈದ್ಧಾಂತಿಕ ಹೋರಾಟದ ಆರಂಭ
ಪ್ರಸ್ತುತ ಅಸ್ತಿತ್ವದಲ್ಲಿರುವ ವಿಶ್ವ ವ್ಯಾಪಾರ ಸಂಸ್ಥೆ ನಮ್ಮ ಬದುಕಿನಿಂದ ಹೊರನಡೆಯಬೇಕು. ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಎಂದು ಗಾಂಧೀಜಿ ಕರೆ ನೀಡಿದ್ದರು. ನಾವೀಗ ಕೊಕೊಕೋಲಾ ಮತ್ತು ಪೆಪ್ಸಿ ಭಾರತದಿಂದ ತೊಲಗಿ ಎನ್ನುತ್ತೇವೆ ಎಂದು ಜೋಸೆ ಬೋವೆ ಆಗ್ರಹಿಸಿದರು.
ಕೆನಡಾದ ಪರಿಸರವಾದಿ ಮೌಡ್ಬರ್ಲೊ ಮಾತನಾಡಿ- ಶುದ್ಧ ಚಿನ್ನವಾದ ನೀರನ್ನು ಅಂತರಾಷ್ಟ್ರೀಯ ಕಂಪೆನಿಗಳು ದುರ್ಬಳಕೆ ಮಾಡುತ್ತಿವೆ. ಪರಿಸ್ಥಿತಿ ಹೇಗೆ ಬಿಗಡಾಯಿಸುತ್ತಿದೆ ಎಂದರೆ ಬಡ ಜನತೆಗೆ ಶುದ್ಧ ನೀರು ಇಲ್ಲದಾಗಿದೆ ಎಂದರು. ನಾನು ನಮ್ಮ ಜನತೆಗೆ ಹೇಳುತ್ತೇನೆ, ಪೆಪ್ಸಿ ಹಾಗೂ ಕೊಕೊಕೋಲ ಕೊಳ್ಳಬೇಡಿ. ನಮ್ಮ ನೀರಿರುವುದು ಮಾರಾಟಕ್ಕಲ್ಲ ಎಂದು ಹೇಳಿದರು.
ಕೋಕ್ಗೆ ಭಾರತ ಬಿಟ್ಟು ತೊಲಗಲು ಸಮಯ ಬಂದಿದೆ. ಪ್ರಪಂಚದಾದ್ಯಂತ ವ್ಯಾಪಾರಿ ಪ್ರವೃತ್ತಿ ಹೋಗಿ ನೈಜ ಪ್ರಜಾಪ್ರಭುತ್ವ ಬರಬೇಕು ಎಂದು ಅಮೇರಿಕಾದಿಂದ ಆಗಮಿಸಿದ್ದ ಹೋರಾಟಗಾರ ವಾರ್ಡ್ ಮೋರ್ಹೌಸ್ ಉದ್ಗರಿಸಿದರು.
ಇದಕ್ಕೂ ಮುನ್ನ ಪತ್ರಕರ್ತರೊಂದಿಗೆ ಮಾತಾನಾಡಿದ ಜನಪರ ಹೋರಾಟಗಾರ್ತಿ ವಂದನಾ ಶಿವ- ಹೈಡ್ರೊಪೈರೆಸಿಯನ್ನು ತಡೆಹಿಡಿಯಬೇಕಾಗಿದೆ. ಪ್ಲಾಚಿಮಾಡದಲ್ಲಿ ಕೋಕ್ ಕಾರ್ಖಾನೆ ಮಾಡುತ್ತಿರುವ ‘ನೀರು ಕಳ್ಳತನದ’ ವಿರುದ್ಧ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದರು.
ಪ್ಲಾಚಿಮಾಡದಲ್ಲಿ ಎರಡು ಸಕ್ರಮ ಧ್ವನಿಗಳಿವೆ, ಒಂದು ಮಹಿಳಾ ಧ್ವನಿ ಇನ್ನೊಂದು ಸ್ಥಳೀಯ ಸರಕಾರ. ಪ್ಲಾಚಿಮಾಡದ ಕೊಕ್ ಕಾರ್ಖಾನೆ ಎದುರು ಧರಣಿ ಕುಳಿತ ಮಹಿಳೆಯರು ಕ್ಯಾಮರಕ್ಕಾಗಿ ಕುಳಿತಿಲ್ಲ , ಅವರು ನೀರಿಗಾಗಿ ಕುಳಿತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಅವರು ನುಡಿದರು.
ಈ ಹಿಂದೆ ಬಾಟಲಿ ನೀರಿನ ಗುಣಮಟ್ಟದ ವಿರುದ್ಧ ಆಂದೋಲನವೇ ನಡೆದಿತ್ತು. ಪರಿಸರವಾದಿಗಳು, ಆ್ಯಂಟಿ ಗ್ಲೋಬಲೈಶನ್ ಬಳಗವು ಎಮ್ಎನ್ಸಿಗಳ ಬಣ್ಣ ಬಯಲು ಮಾಡಲು ಟೊಂಕ ಕಟ್ಟಿ ನಿಂತಿವೆ. ಪೇಟೆಂಟ್ ಪಡೆಯಲು ಗಾಳಿಯಾಂದೇ ಬಾಕಿಯೇ?
(ಏಜನ್ಸೀಸ್)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications