Get Updates
Get notified of breaking news, exclusive insights, and must-see stories!

ಎಸ್ಸೆಂ. ಕೃಷ್ಣರ ಕನಸಲೂ ಅವನು, ಮನಸಲೂ ಅವನು, ವೀರಪ್ಪನ್‌ !

ಎಸ್ಸೆಂ. ಕೃಷ್ಣರ ಕನಸಲೂ ಅವನು, ಮನಸಲೂ ಅವನು, ವೀರಪ್ಪನ್‌ !
ಪೋಲಿಸರ ಪಾಲಿಗೆ ಮಾಯಾಮೃಗವಾಗಿರುವ ‘ವೀರಪ್ಪನ್‌’ !

ಬೆಂಗಳೂರು : ಪೋಲೀಸರ ಸತತ ಕಾರ್ಯಚರಣೆಯ ನಡುವೆಯೂ ನರಹಂತಕ ವೀರಪ್ಪನ್‌ ಬಂಧನ ಸಾಧ್ಯವಾಗದಿರುವ ಕುರಿತು ನಿರಾಶೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ- ಕಾಡುಗಳ್ಳ ವೀರಪ್ಪನ್‌ ತಮ್ಮ ನಿದ್ದೆಗೆಡಿಸಿದ್ದಾನೆ ಎಂದು ಅಳಲು ತೋಡಿಕೊಂಡಿದ್ದಾರೆ.

ವೀರಪ್ಪನ್‌ ಸೆರೆಹಿಡಿಯುವಲ್ಲಿ ಪೋಲಿಸರ ವೈಫಲ್ಯದ ಕುರಿತ ನಿರಾಶೆ, ಸಿಟ್ಟು ವ್ಯಕ್ತಪಡಿಸಿದ ಕೃಷ್ಣ - ಇದೊಂದು ಕಾರ್ಯಾಚರಣೆಯಲ್ಲಿ ಕರ್ನಾಟಕ ಪೋಲಿಸರು ಯಶಸ್ಸು ಗಳಿಸಿಲ್ಲ ಎಂದರು. ಹಿರಿಯ ಪೋಲಿಸ್‌ ಅಧಿಕಾರಿಗಳ ವಾರ್ಷಿಕ ಸಮಾವೇಶವನ್ನು (ಜ.19) ಉದ್ಘಾಟಿಸಿ ಕೃಷ್ಣ ಮಾತನಾಡುತ್ತಿದ್ದರು.

‘ನಾನು ಎಲ್ಲಿ ಹೋದರೂ ಮತ್ತದೇ ಪ್ರಶ್ನೆ ಎದುರಾಗುತ್ತದೆ. ವೀರಪ್ಪನ್‌ನನ್ನು ಹಿಡಿಯಲು ಯಾಕೆ ಅಷ್ಟೊಂದು ಕಷ್ಟ ಎನ್ನುವ ಪ್ರಶ್ನೆಗೆ ಏನೆಂದು ಉತ್ತರಿಸುವುದು’ ಎಂದ ಕೃಷ್ಣ , ‘ಆತನನ್ನು ಹಿಡಿಯಲು ಯಾಕೆ ಆಗುತ್ತಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ . ಆದರೆ ಕಾರ್ಯಚರಣೆಯಲ್ಲಿ ಭಾಗಿಯಾಗಿರುವವರಿಗೆ ನಾನು ಶುಭ ಹಾರೈಸುತ್ತೇನೆ’ ಎಂದರು.

ತಾವು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ ಬಳಿಕ ಇದು ಹಿರಿಯ ಪೊಲೀಸ್‌ ಅಧಿಕಾರಿಗಳ ಐದನೇ ಸಮಾವೇಶವಾಗಿದ್ದು , ಈ ವರ್ಷ ಕಾರ್ಯಾಚರಣೆಗೆ ಯಶಸ್ಸು ದೊರಕಬಹುದು ಎಂದು ಕೃಷ್ಣ ಆಶಿಸಿದರು. ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆಗೆ ನೆರೆಯ ತಮಿಳುನಾಡು ಸರಕಾರ ಉತ್ತಮವಾದ ಬೆಂಬಲ ನೀಡುತ್ತಿದೆ ಎಂದು ಅವರು ಸಮಾಧಾನ ವ್ಯಕ್ತಪಡಿಸಿದರು.

(ಪಿಟಿಐ)

ಮುಖಪುಟ / ವೀರಪ್ಪನ್‌

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+