ಶಿವಮೊಗ್ಗದ ಸಾಗರದಲ್ಲಿ ಸಾಗರದೋಪಾದಿ ಹಬ್ಬುತ್ತಿರುವ ಕಾಮಾಲೆ
ಶಿವಮೊಗ್ಗದ
ಸಾಗರದಲ್ಲಿ
ಸಾಗರದೋಪಾದಿ
ಹಬ್ಬುತ್ತಿರುವ
ಕಾಮಾಲೆ
ಸಾವಿರಕ್ಕೂ
ಹೆಚ್ಚು
ಮಂದಿಗೆ
ಕಾಮಾಲೆ,
ಆಸ್ಪತ್ರೆಗೆ
ಬಂದವರು
60
ಮಂದಿ
!
ಸಾವಿರಕ್ಕೂ ಹೆಚ್ಚು ಮಂದಿ ಕಾಮಾಲೆ ರೋಗದಿಂದ ಬಳಲುತ್ತಿದ್ದಾರೆ ಎಂದು ಅನಧಿಕೃತ ಮೂಲಗಳು ತಿಳಿಸಿದರೂ, ಈವರೆಗೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದವರ ಸಂಖ್ಯೆ 60 ಮಾತ್ರ. ಉಳಿದವರು ಸಾಂಪ್ರದಾಯಿಕ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಮಧ್ಯವಯಸ್ಕರು, ಮಕ್ಕಳು ಹಾಗೂ ಹೆಂಗಸರಲ್ಲಿ ಕಾಮಾಲೆಯ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತಿದ್ದು , ಇವರಲ್ಲಿ ಬಹುತೇಕರು ಮನೆಮದ್ದಿಗೆ ಶರಣಾಗಿದ್ದಾರೆ. ಕಾಮಾಲೆ ಸೋಂಕಿನ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಮುನ್ಸಿಪಲ್ ಇಲಾಖೆ ಪಟ್ಟಣದಲ್ಲಿ ವ್ಯಾಪಕ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಪಟ್ಟಣದಲ್ಲಿ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿದ್ದಾರೆ.
700ಕ್ಕೂ ಹೆಚ್ಚುಮಂದಿ ರೋಗಿಗಳು ನಾಟಿ ವೈದ್ಯರಿಂದ ಕಾಮಾಲೆಗೆ ಚಿಕಿತ್ಸೆ ಪಡೆದಿದ್ದಾರೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ, ಕಾಮಾಲೆಗೆ ಸಂಬಂಧಿಸಿದಂತೆ ಪ್ರತಿ ಮನೆಯ ಸಮೀಕ್ಷೆ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ. ಸಾಗರ ಪಟ್ಟಣದ ಜನಸಂಖ್ಯೆ ಸುಮಾರು 45 ಸಾವಿರ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು