ಚುನಾವಣಾ ಸಮರ : ಕೃಷ್ಣಾರ್ಜುನರ ಪಾತ್ರದಲ್ಲಿ ಪೂಜಾರಿ-ಕೃಷ್ಣ
ಚುನಾವಣಾ
ಸಮರ
:
ಕೃಷ್ಣಾರ್ಜುನರ
ಪಾತ್ರದಲ್ಲಿ
ಪೂಜಾರಿ-ಕೃಷ್ಣ
ಪೂಜಾರಿ
ಪದಚ್ಯುತಿಗೆ
ದೆಹಲಿಯಲ್ಲಿ
ಬಂಗಾರಪ್ಪ
ನಿಷ್ಠರ
ಲಾಬಿ
ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಜನಾರ್ಧನ ಪೂಜಾರಿ ಅವರನ್ನು ಕೆಳಗಿಳಿಸಲಾಗುವ ಕುರಿತ ವದಂತಿಗಳ ಬಗ್ಗೆ ಭಾನುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಪೂಜಾರಿ- ಮುಂಬರುವ ಚುನಾವಣೆಗಳ ಸಾರಥ್ಯವನ್ನು ಕೃಷ್ಣ ಅವರೊಂದಿಗೆ ಜಂಟಿಯಾಗಿ ನಿರ್ವಹಿಸುವುದಾಗಿ ಮಾರ್ಮಿಕವಾಗಿ ನುಡಿದರು.
ಕೆಲವು ಕಾರ್ಯಕರ್ತರಿಗೆ ಸಣ್ಣಪುಟ್ಟ ದೂರುಗಳನ್ನು ಪಕ್ಷದ ಹೈಕಮಾಂಡ್ಗೆ ಒಯ್ಯುವುದು ರೂಢಿ. ಈ ಪ್ರಕ್ರಿಯೆಗಳ ಕುರಿತು ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ತಮ್ಮ ಪದಚ್ಯುತಿ ಕುರಿತು ನಡೆಯುತ್ತಿರುವ ಪ್ರಯತ್ನಗಳ ಕುರಿತು ಪೂಜಾರಿ ಪ್ರತಿಕ್ರಿಯಿಸಿದರು.
ಪೂಜಾರಿ ಬದಲಾವಣೆಗೆ ಲಾಬಿ : ಕಳೆದೊಂದು ವಾರದಿಂದ ಜನಾರ್ಧನ ಪೂಜಾರಿ ಅವರನ್ನು ಪದಚ್ಯುತಗೊಳಿಸುವಂತ ಪಕ್ಷದ ಕೆಲವು ಮುಖಂಡರು ದೆಹಲಿಯಲ್ಲಿ ಲಾಬಿ ನಡೆಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರನ್ನು ನೇಮಿಸಬೇಕೆಂಬುದು ಈ ಗುಂಪಿನ ಪಟ್ಟು . ದೆಹಲಿಯಲ್ಲಿ ಹೈಕಮಾಂಡ್ನ ವಿವಿಧ ನಾಯಕರ ಜೊತೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತ ಚರ್ಚೆಗಳನ್ನು ಈ ಗುಂಪು ನಡೆಸುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ