ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಸಮರ : ಕೃಷ್ಣಾರ್ಜುನರ ಪಾತ್ರದಲ್ಲಿ ಪೂಜಾರಿ-ಕೃಷ್ಣ

By Staff
|
Google Oneindia Kannada News

ಚುನಾವಣಾ ಸಮರ : ಕೃಷ್ಣಾರ್ಜುನರ ಪಾತ್ರದಲ್ಲಿ ಪೂಜಾರಿ-ಕೃಷ್ಣ
ಪೂಜಾರಿ ಪದಚ್ಯುತಿಗೆ ದೆಹಲಿಯಲ್ಲಿ ಬಂಗಾರಪ್ಪ ನಿಷ್ಠರ ಲಾಬಿ

ಹುಬ್ಬಳ್ಳಿ : ಮುಂಬರುವ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷದ ಸಾರಥ್ಯ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಹಾಗೂ ತಮ್ಮದೇ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಜನಾರ್ಧನ ಪೂಜಾರಿ ಸ್ಪಷ್ಟಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಜನಾರ್ಧನ ಪೂಜಾರಿ ಅವರನ್ನು ಕೆಳಗಿಳಿಸಲಾಗುವ ಕುರಿತ ವದಂತಿಗಳ ಬಗ್ಗೆ ಭಾನುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಪೂಜಾರಿ- ಮುಂಬರುವ ಚುನಾವಣೆಗಳ ಸಾರಥ್ಯವನ್ನು ಕೃಷ್ಣ ಅವರೊಂದಿಗೆ ಜಂಟಿಯಾಗಿ ನಿರ್ವಹಿಸುವುದಾಗಿ ಮಾರ್ಮಿಕವಾಗಿ ನುಡಿದರು.

ಕೆಲವು ಕಾರ್ಯಕರ್ತರಿಗೆ ಸಣ್ಣಪುಟ್ಟ ದೂರುಗಳನ್ನು ಪಕ್ಷದ ಹೈಕಮಾಂಡ್‌ಗೆ ಒಯ್ಯುವುದು ರೂಢಿ. ಈ ಪ್ರಕ್ರಿಯೆಗಳ ಕುರಿತು ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ತಮ್ಮ ಪದಚ್ಯುತಿ ಕುರಿತು ನಡೆಯುತ್ತಿರುವ ಪ್ರಯತ್ನಗಳ ಕುರಿತು ಪೂಜಾರಿ ಪ್ರತಿಕ್ರಿಯಿಸಿದರು.

ಪೂಜಾರಿ ಬದಲಾವಣೆಗೆ ಲಾಬಿ : ಕಳೆದೊಂದು ವಾರದಿಂದ ಜನಾರ್ಧನ ಪೂಜಾರಿ ಅವರನ್ನು ಪದಚ್ಯುತಗೊಳಿಸುವಂತ ಪಕ್ಷದ ಕೆಲವು ಮುಖಂಡರು ದೆಹಲಿಯಲ್ಲಿ ಲಾಬಿ ನಡೆಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರನ್ನು ನೇಮಿಸಬೇಕೆಂಬುದು ಈ ಗುಂಪಿನ ಪಟ್ಟು . ದೆಹಲಿಯಲ್ಲಿ ಹೈಕಮಾಂಡ್‌ನ ವಿವಿಧ ನಾಯಕರ ಜೊತೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತ ಚರ್ಚೆಗಳನ್ನು ಈ ಗುಂಪು ನಡೆಸುತ್ತಿದೆ.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X