ಮಡದಿ ಮಕ್ಕಳಿಗೆ ಭಾನುವಾರ ಮೀಸಲು -ಉಮಾ ಫರ್ಮಾನು !
ಮಡದಿ ಮಕ್ಕಳಿಗೆ ಭಾನುವಾರ ಮೀಸಲು -ಉಮಾ ಫರ್ಮಾನು !
ಮಧ್ಯಪ್ರದೇಶದ ಸಚಿವರಿಗೆ ವೇಳಾಪಟ್ಟಿ ರೂಪಿಸಿದ ಮುಖ್ಯಮಂತ್ರಿ
ಸಂಕ್ರಾಂತಿಯ ಶುಭಸಂಧರ್ಭದಲ್ಲಿ ಮಂತ್ರಿವರ್ಯರಿಗೆ ಒಂದು ವೇಳಾಪಟ್ಟಿಯನ್ನು ಉಮಾ ಭಾರತಿ ಘೋಷಿಸಿದ್ದಾರೆ. ಸೋಮವಾರದಿಂದ ಬುಧವಾರ ಕಛೇರಿಯಲ್ಲಿ, ಗುರುವಾರದಿಂದ ಶನಿವಾರ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತ್ತು ಭಾನುವಾರ ಕುಟುಂಬದ ಜೊತೆಗಿರಬೇಕು- ಇದಿಷ್ಟು ವೇಳಾಪಟ್ಟಿಯಲ್ಲಿನ ಮುಖ್ಯಾಂಶಗಳು.
‘ಈ ವೇಳಾಪಟ್ಟಿಯ ಮೂಲ ಉದ್ದೇಶ , ಸರ್ಕಾರದ ನಿರ್ಣಯಗಳು ಜನರನ್ನು ತಲುಪಬೇಕು ಮತ್ತು ರಾಜ್ಯದ ಜನತೆಯ ಸಮಸ್ಯೆಗಳು ಬೆಳಕಿಗೆ ಬರಬೇಕು ಎಂಬುದಾಗಿದೆ’ ಎಂದು ಮುಖ್ಯಮಂತ್ರಿಗಳ ಕಾರ್ಯದರ್ಶಿ ಬಣ್ಣಿಸಿದ್ದಾರೆ.
ವೇಳಾಪಟ್ಟಿಯಂತೆ ವಾರದ ಮೊದಲ 3 ದಿನ ರಾಜ್ಯ ಸಚಿವಾಲಯದ ಕಛೇರಿಯಲ್ಲಿರುವುದು ಕಡ್ಡಾಯ. ನಂತರದ ಮೂರು ದಿನಗಳಲ್ಲಿ , ಮಂತ್ರಿಗಳು ತಮ್ಮ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಬಹುದು ಇಲ್ಲವೇ ಅಧಿಕೃತ ಪ್ರವಾಸ ಕೈಗೊಳ್ಳಬೇಕು. ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ,ಭಾನುವಾರ ಮಾತ್ರ ಕಟ್ಟುನಿಟ್ಟಾಗಿ ಮನೆಯವರೊಟ್ಟಿಗೇ ಇರಬೇಕು!
ಅಲ್ಲದೇ ವಾರದಲ್ಲಿ ಒಮ್ಮೆಯಾದರೂ ಮುಖ್ಯಮಂತ್ರಿಗಳ ಜೊತೆ ಭೋಜನಕೂಟದಲ್ಲಿ ಭಾಗವಹಿಸಬೇಕು. ಉಮಾಭಾರತಿ, ತಮಗೂ ವೇಳಾಪಟ್ಟಿ ಅಳವಡಿಸಿಕೊಂಡಿದ್ದು , ಸೋಮವಾರ ಸಭಾಪತಿಯವರ ಭೇಟಿ, ಮಂಗಳವಾರ ಮತ್ತು ಗುರುವಾರ ಮಾಧ್ಯಮದವರೊಡನೆ ಮಾತುಕತೆ, ಬುಧವಾರ ಸಾರ್ವಜನಿಕರೊಂದಿಗೆ ಸಮಸ್ಯೆಗಳ ಸಮಾಲೋಚನೆ, ಭಾನುವಾರ- ?
ಉಮಾಭಾರತಿ ಅವರು ಕುಮಾರಿ ಆಗಿರುವುದರಿಂದ ಅವರಿಗೆ ಕುಟುಂಬದ ನಂಟಿನ ಅಂಟು ಅಷ್ಟೇನೂ ಬಲವಾಗಿಲ್ಲ . ಆ ಕಾರಣದಿಂದಾಗಿ ಅವರಿಗೆ ವೇಳಾಪಟ್ಟಿಯ ನಿಯಮಗಳಿಂದ ಕೊಂಚ ಸಡಿಲಿಕೆ ಏನಾದರೂ ಉಂಟಾ? ತಿಳಿದುಬಂದಿಲ್ಲ .
(ಏಜನ್ಸೀಸ್)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications