ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡದಿ ಜ.27ರಿಂದ ರಾಷ್ಟ್ರೀಯ ಮಧ್ವ ತತ್ವಜ್ಞಾನ ಸಮ್ಮೇಳನ

By Staff
|
Google Oneindia Kannada News

ಧಾರವಾಡದಿ ಜ.27ರಿಂದ ರಾಷ್ಟ್ರೀಯ ಮಧ್ವ ತತ್ವಜ್ಞಾನ ಸಮ್ಮೇಳನ
ಮಧ್ಯಪ್ರದೇಶದ ಮುಖ್ಯಮಂತ್ರಿ ಉಮಾ ಭಾರತಿ ಅವರಿಂದ ಸಮ್ಮೇಳನಕ್ಕೆ ಚಾಲನೆ

ಉಡುಪಿ : ಅಖಿಲ ಭಾರತ ಮಧ್ವ ತತ್ವಜ್ಞಾನ ಸಮ್ಮೇಳನ ಜನವರಿ 27ರಿಂದ 31ರವರೆಗೆ ಧಾರವಾಡದಲ್ಲಿ ನಡೆಯಲಿದೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಉಮಾ ಭಾರತಿ ಅವರು ಜ.27ರಂದು ಮಧ್ವ ತತ್ವಜ್ಞಾನ ಸಮ್ಮೇಳನವನ್ನು ಉದ್ಘಾಟಿಸುವರು. ಧಾರವಾಡದ ಸ್ಕೌಟ್‌ ಮೈದಾನದಲ್ಲಿ ಐದು ದಿನಗಳ ಈ ಸಮ್ಮೇಳನ ನಡೆಯಲಿದೆ. ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಸಮ್ಮೇಳನದ ವಿವರಗಳನ್ನು ಸುದ್ದಿಗಾರರಿಗೆ ಮಂಗಳವಾರ ನೀಡಿದರು.

ಮಧ್ವ ತತ್ವಜ್ಞಾನ ಸಮ್ಮೇಳನದ ಸಂದರ್ಭದಲ್ಲೇ ಮಧ್ವ ನವಮಿಯನ್ನೂ ಆಚರಿಸಲಾಗುವುದು. ಸುಧಾ ಮಂಗಳವನ್ನೂ ಆಚರಿಸಲಾಗುವುದು. ಎಲ್ಲ ಮಧ್ವ ಮಠಗಳ ಸ್ವಾಮೀಜಿಗಳೂ ಈ ಸಮ್ಮೇಳನದಲ್ಲಿ ಭಾಗವಹಿಸುವರು. ಖ್ಯಾತ ವಿದ್ವಾಂಸ ಹಯವದನ ಪುರಾಣಿಕ ಸಮ್ಮೇಳನದ ಅಧ್ಯಕ್ಷತೆ ವಹಿಸುವರು ಎಂದು ವಿಶ್ವೇಶತೀರ್ಥರು ತಿಳಿಸಿದರು.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಬಸವನಗೌಡ ಪಾಟೀಲ್‌ ಯತ್ನಾಳ್‌, ಕೃಷಿ ಸಚಿವ ಎಚ್‌.ಕೆ.ಪಾಟೀಲ್‌, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌.ಗಡ್ಡಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಅನಂತಕುಮಾರ್‌ ಸಮ್ಮೇಳನದಲ್ಲಿ ಭಾಗವಹಿಸುವರು ಎಂದು ಸ್ವಾಮೀಜಿ ಹೇಳಿದರು.

ನಾಡಗೀತೆಗೆ ಕತ್ತರಿ- ಸ್ವಾಮೀಜಿ ವಿಷಾದ : ಜಯಭಾರತ ಜನನಿಯ ತನುಜಾತೆ ಗೀತೆಗೆ ಸರ್ಕಾರ ಕತ್ತರಿ ಪ್ರಯೋಗ ಮಾಡಿರುವುದು ತಮ್ಮ ಮನಸ್ಸಿಗೆ ನೋವುಂಟು ಮಾಡಿದೆ ಎಂದು ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಮಹಾನ್‌ ಪುರುಷರ ಹೆಸರುಗಳು ನಾಡಗೀತೆಯಲ್ಲಿ ಇರಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟ ಅವರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X