ಧಾರವಾಡದಿ ಜ.27ರಿಂದ ರಾಷ್ಟ್ರೀಯ ಮಧ್ವ ತತ್ವಜ್ಞಾನ ಸಮ್ಮೇಳನ
ಧಾರವಾಡದಿ
ಜ.27ರಿಂದ
ರಾಷ್ಟ್ರೀಯ
ಮಧ್ವ
ತತ್ವಜ್ಞಾನ
ಸಮ್ಮೇಳನ
ಮಧ್ಯಪ್ರದೇಶದ
ಮುಖ್ಯಮಂತ್ರಿ
ಉಮಾ
ಭಾರತಿ
ಅವರಿಂದ
ಸಮ್ಮೇಳನಕ್ಕೆ
ಚಾಲನೆ
ಮಧ್ಯಪ್ರದೇಶದ ಮುಖ್ಯಮಂತ್ರಿ ಉಮಾ ಭಾರತಿ ಅವರು ಜ.27ರಂದು ಮಧ್ವ ತತ್ವಜ್ಞಾನ ಸಮ್ಮೇಳನವನ್ನು ಉದ್ಘಾಟಿಸುವರು. ಧಾರವಾಡದ ಸ್ಕೌಟ್ ಮೈದಾನದಲ್ಲಿ ಐದು ದಿನಗಳ ಈ ಸಮ್ಮೇಳನ ನಡೆಯಲಿದೆ. ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಸಮ್ಮೇಳನದ ವಿವರಗಳನ್ನು ಸುದ್ದಿಗಾರರಿಗೆ ಮಂಗಳವಾರ ನೀಡಿದರು.
ಮಧ್ವ ತತ್ವಜ್ಞಾನ ಸಮ್ಮೇಳನದ ಸಂದರ್ಭದಲ್ಲೇ ಮಧ್ವ ನವಮಿಯನ್ನೂ ಆಚರಿಸಲಾಗುವುದು. ಸುಧಾ ಮಂಗಳವನ್ನೂ ಆಚರಿಸಲಾಗುವುದು. ಎಲ್ಲ ಮಧ್ವ ಮಠಗಳ ಸ್ವಾಮೀಜಿಗಳೂ ಈ ಸಮ್ಮೇಳನದಲ್ಲಿ ಭಾಗವಹಿಸುವರು. ಖ್ಯಾತ ವಿದ್ವಾಂಸ ಹಯವದನ ಪುರಾಣಿಕ ಸಮ್ಮೇಳನದ ಅಧ್ಯಕ್ಷತೆ ವಹಿಸುವರು ಎಂದು ವಿಶ್ವೇಶತೀರ್ಥರು ತಿಳಿಸಿದರು.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್, ಕೃಷಿ ಸಚಿವ ಎಚ್.ಕೆ.ಪಾಟೀಲ್, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ಗಡ್ಡಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಅನಂತಕುಮಾರ್ ಸಮ್ಮೇಳನದಲ್ಲಿ ಭಾಗವಹಿಸುವರು ಎಂದು ಸ್ವಾಮೀಜಿ ಹೇಳಿದರು.
ನಾಡಗೀತೆಗೆ ಕತ್ತರಿ- ಸ್ವಾಮೀಜಿ ವಿಷಾದ : ಜಯಭಾರತ ಜನನಿಯ ತನುಜಾತೆ ಗೀತೆಗೆ ಸರ್ಕಾರ ಕತ್ತರಿ ಪ್ರಯೋಗ ಮಾಡಿರುವುದು ತಮ್ಮ ಮನಸ್ಸಿಗೆ ನೋವುಂಟು ಮಾಡಿದೆ ಎಂದು ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಮಹಾನ್ ಪುರುಷರ ಹೆಸರುಗಳು ನಾಡಗೀತೆಯಲ್ಲಿ ಇರಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟ ಅವರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು