Get Updates
Get notified of breaking news, exclusive insights, and must-see stories!

ಹೆಗಡೆ ಅಂತಿಮಯಾತ್ರೆಯಲ್ಲಿ ಅಡ್ವಾಣಿ, ಚಂದ್ರಶೇಖರ್‌, ಗೌಡ

ಹೆಗಡೆ ಅಂತಿಮಯಾತ್ರೆಯಲ್ಲಿ ಅಡ್ವಾಣಿ, ಚಂದ್ರಶೇಖರ್‌, ಗೌಡ
ಸಕಲ ಸರ್ಕಾರಿ ಗೌರವಗಳೊಂದಿಗೆ ಹೆಗಡೆ ಅಂತಿಮ ಸಂಸ್ಕಾರ

ಬೆಂಗಳೂರು : ರಾಜಕಾರಣಿಗಳು, ಚಿತ್ರತಾರೆಯರು, ಬೆಂಬಲಿಗರು ಸೇರಿದಂತೆ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಅಂತಿಮ ಸಂಸ್ಕಾರ ಮಂಗಳವಾರ (ಜ.13) ನಡೆಯಿತು.

ಹೆಸರುಘಟ್ಟ ರಸ್ತೆಯಲ್ಲಿನ ಹೆಗಡೆ ಅವರ ತೋಟದಲ್ಲಿ ನಡೆದ ಅಂತ್ಯಸಂಸ್ಕಾರದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಮಂಗಳವಾರ ಬೆಳಗಿನ ಜಾವದಿಂದಲೇ ದುಃಖತಪ್ತ ಸಹಸ್ರಾರು ಅಭಿಮಾನಿಗಳ ಹೊಳೆಯೇ ಹರಿದು ಬರುತಿತ್ತು. ಹೆಗಡೆ ಅವರ ಪಾರ್ಥಿವ ಶರೀರವನ್ನು ಸದಾಶಿವನಗರದ ಬಂಗಲೆಯಿಂದ ಬೆಂಗಳೂರಿನ ಹೊರವಲಯದಲಿ ್ಲರುವ ಅವರ ತೋಟಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ಉಪಪ್ರಧಾನಿ ಎಲ್‌ ಕೆ ಅಡ್ವಾಣಿ , ಮುಖ್ಯಮಂತ್ರಿ ಕೃಷ್ಣ , ರಾಜ್ಯಪಾಲ ಟಿ.ಎನ್‌.ಚರ್ತುವೇದಿ, ವರನಟ ರಾಜ್‌ಕುಮಾರ್‌ , ಮಾಜಿ ಪ್ರಧಾನಿಗಳಾದ ದೇವೇಗೌಡ ಹಾಗೂ ಚಂದ್ರಶೇಖರ್‌, ಎನ್‌ಸಿಪಿ ನಾಯಕ ಶರದ್‌ಪವಾರ್‌ ಸೇರಿದಂತೆ ಇನ್ನಿತರ ಪ್ರಮುಖರು ಅಗಲಿದ ನಾಯಕನಿಗೆ ಅಂತಿಮ ಗೌರವ ಅರ್ಪಿಸಿದರು.

ಹೆಗಡೆಯವರ ತೋಟದಲ್ಲಿ ನೆರೆದಿದ್ದ ಕುಟುಂಬದ ಸದಸ್ಯರು, ಅಭಿಮಾನಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಭರತ್‌ ಹೆಗಡೆ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ನೆರೆದಿದ್ದ ಸಹಸ್ರಾರು ಅಭಿಮಾನಿಗಳು ಅಗಲಿದ ನಾಯಕನಿಗೆ ಜಯಘೋಷ ಕೂಗುತ್ತಿದ್ದ ದೃಶ್ಯಗಳು, ಕಂಬನಿ ಮಿಡಿಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಎಪ್ಪತ್ತೇಳರ ಹರೆಯದ ಹೆಗಡೆ ಕಳೆದ ಒಂದು ವರ್ಷದಿಂದ ಅನಾರೋಗ್ಯ ಪೀಡಿತರಾಗಿದ್ದರು. ಅವರ ನಿಧನದ ಪ್ರಯುಕ್ತ ರಾಜ್ಯದಲ್ಲಿ ಮಂಗಳವಾರ ರಜೆ ಘೋಷಿಸಲಾಗಿತ್ತು .

(ಪಿಟಿಐ)

ಪೂರಕ ಓದು-
ರಾಮಕೃಷ್ಣ ಹೆಗಡೆ : ಕಣ್ಮರೆಯಾದ ರಾಜಗುರು
ಹೂವು ತಂದ ಸುಪುತ್ರನ ಅಗಲಿಕೆಗೆ ರೋದಿಸುತ್ತಿರುವ ಉತ್ತರಕನ್ನಡ

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+