ಮಾಜಿ ಡಿಜಿಪಿ ಎಲ್.ರೇವಣಸಿದ್ಧಯ್ಯರಿಂದ ಛಾಪಪಾಪ ನಿರಾಕರಣೆ
ಮಾಜಿ ಡಿಜಿಪಿ ಎಲ್.ರೇವಣಸಿದ್ಧಯ್ಯರಿಂದ ಛಾಪಪಾಪ ನಿರಾಕರಣೆ
ಸಂತೋಷ್ ಗಾಡಿಯರಿಗೆ ಸಲಹೆ ನೀಡಿದ್ದು ನಿಜ, ಅದು ಅಪರಾಧವೇನಲ್ಲ
ಛಾಪ ಪಾಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಮಂಡಲದಲ್ಲಿ ಬಿಜೆಪಿ ನಾಯಕರುಗಳು ಹಾಜರುಪಡಿಸಿರುವ ದಾಖಲೆಗಳಲ್ಲಿ ನಿವೃತ್ತ ಐಪಿಎಸ್ ಅಧಿಕಾರಿಯಾಬ್ಬರ ಹೆಸರಿದೆ ಎನ್ನುವ ಸುದ್ದಿ ಭಾರೀ ಗುಲ್ಲಾಗಿತ್ತು . ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣಸಿದ್ಧಯ್ಯ, ತೆಲಗಿ ಸೇರಿದಂತೆ ಛಾಪ ಕೂಪದ ಯಾವ ಆರೋಪಿಯಾಂದಿಗೂ ತಮಗೆ ಸಂಬಂಧ ಇರಲಿಲ್ಲ , ಮುಂದೆಯೂ ಇರುವುದಿಲ್ಲ ಎಂದರು.
ಬಿಜೆಪಿ ನಾಯಕರು ಹಾಜರುಪಡಿಸಿರುವ ದಾಖಲೆಗಳಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿಲ್ಲ . ಆ ದಾಖಲೆಗಳಲ್ಲಿ ಉಲ್ಲೇಖವಾಗಿರುವ ಖಾಸಗಿ ಕಂಪನಿಗಳಲ್ಲೊಂದರ ಸಂತೋಷ್ ಗಾಡಿಯ ಎನ್ನುವ ವ್ಯಕ್ತಿ ಈ ಮುನ್ನ ಒಮ್ಮೆ ಕಾನೂನು ಸಲಹೆ ಕೇಳಿದ್ದರು. ಅವರಿಗೆ ಸಲಹೆ ನೀಡಿದುದು ಷೇರು ಪ್ರಕರಣಕ್ಕೆ ಸಂಬಂಧಿಸಿದಂತೆ. ಈ ಸಲಹೆಗೆ ಶುಲ್ಕವನ್ನೂ ಪಡೆದಿಲ್ಲ. ಪೊಲೀಸ್ ಇಲಾಖೆಯಿಂದ ನಿವೃತ್ತನಾದ ನಂತರ ನೂರಾರು ಮಂದಿ ಈ ರೀತಿಯ ಸಲಹೆಗಳನ್ನು ತಮ್ಮಿಂದ ಪಡೆದಿದ್ದಾರೆ ಎಂದು ರೇವಣಸಿದ್ಧಯ್ಯ ಹೇಳಿದರು.
ನಾನು ನಿವೃತ್ತನಾದ ಒಂದೂವರೆ ವರ್ಷದ ನಂತರ ಬಹುಕೋಟಿ ಛಾಪಾ ಹಗರಣ ಬೆಳಕಿಗೆ ಬಂದಿದೆ. ಹೀಗಿರುವಾಗ ಪ್ರಕರಣದಲ್ಲಿ ನಾನು ಭಾಗಿಯಾಗುವುದು ಹೇಗೆ ಸಾಧ್ಯ ಎಂದು ರೇವಣಸಿದ್ಧಯ್ಯ ಹೇಳಿದರು. ಸಂತೋಷ್ ಗಾಡಿಯ ಅವರಿಗೆ ಕಾನೂನು ಸಲಹೆ ನೀಡಿರುವ ಕುರಿತು ಸ್ಟಾಂಪಿಟ್ ಬಯಸಿದಲ್ಲಿ ವಿವರಣೆ ನೀಡುವುದಾಗಿಯೂ ಅವರು ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications