ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಗತಿಪರರೊಂದಿಗೆ ವಿಲೀನದ ಸಾಧ್ಯತೆಗೆ ದೇವೇಗೌಡ ಎಳ್ಳುನೀರು

By Staff
|
Google Oneindia Kannada News

ಪ್ರಗತಿಪರರೊಂದಿಗೆ ವಿಲೀನದ ಸಾಧ್ಯತೆಗೆ ದೇವೇಗೌಡ ಎಳ್ಳುನೀರು
ಪಕ್ಷವನ್ನು ಸಂಘಟಿಸಲು ಹಾಗೂ ಚುನಾವಣೆಗೆ ಸಿದ್ಧರಾಗಲು ಕಾರ್ಯಕರ್ತರಿಗೆ ಕರೆ

ಬೆಂಗಳೂರು : ಪ್ರಗತಿಪರ ಜನತಾದಳದೊಂದಿಗೆ ವಿಲೀನದ ಸಾಧ್ಯತೆ ಮುಗಿದ ಅಧ್ಯಾಯ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಘೋಷಿಸಿದ್ದಾರೆ. ಚುನಾವಣೆಗೆ ಸಿದ್ಧರಾಗುವಂತೆ ಜಾತ್ಯತೀತ ಜನತಾದಳದ ಕಾರ್ಯಕರ್ತರಿಗೆ ಅವರು ಕರೆ ನೀಡಿದ್ದಾರೆ.

ಬೆಂಗಳೂರು ಹೊರವಲಯದಲ್ಲಿ ಜ.7ರ ಬುಧವಾರ ನಡೆದ ಜಾತ್ಯತೀತ ಜನತಾದಳದ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ- ವಿಲೀನದ ಕುರಿತು ಮಾತನಾಡುತ್ತ ಸಮಯ ಕಳೆಯಬೇಡಿ, ಚುನಾವಣೆಗೆ ಇನ್ನೊಂದೇ ವರ್ಷ ಬಾಕಿಯಿರುವುದರಿಂದ ಈಗನಿಂದಲೇ ಚುನಾವಣೆಗೆ ಸಿದ್ಧರಾಗಿರಿ ಎಂದರು. ಪ್ರಗತಿಪರ ಜನತಾದಳದೊಂದಿಗೆ ವಿಲೀನದ ಯಾವುದೇ ಸಾಧ್ಯತೆಗಳನ್ನು ದೇವೇಗೌಡ ಸ್ಪಷ್ಟವಾಗಿ ತಳ್ಳಿಹಾಕಿದರು.

ವಿಲೀನದ ಪ್ರಸ್ತಾಪದೊಂದಿಗೆ ರಾಮಕೃಷ್ಣ ಹೆಗಡೆ ಸೇರಿದಂತೆ ಹಲವರ ಮನೆಯ ಬಾಗಿಲನ್ನು ನಾನು ತಟ್ಟಿದೆ. ಆದರೆ ಯಾವೊಬ್ಬ ನಾಯಕರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲಿಲ್ಲ . ಇನ್ನು ಮುಂದೆ ವಿಲೀನದ ಕುರಿತು ಮಾತನಾಡುವುದು ಬೇಡ. ಭೇಷರತ್ತಾಗಿ ಜಾತ್ಯತೀತ ದಳಕ್ಕೆ ಸೇರ್ಪಡೆ ಹೊಂದಲು ಯಾರಾದರೂ ಸಿದ್ಧರಿದ್ದರೆ ಅವರಿಗೆ ಸ್ವಾಗತ ಎಂದು ದೇವೇಗೌಡ ಹೇಳಿದರು.

ಪ್ರಗತಿಪರ ಜನತಾದಳದ ರಾಮಕೃಷ್ಣ ಹೆಗಡೆ ಹಾಗೂ ಬೊಮ್ಮಾಯಿ ಅವರನ್ನು ದೇವೇಗೌಡ ಪರೋಕ್ಷವಾಗಿ ಟೀಕಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X